ಬ್ರೇಕಿಂಗ್ ನ್ಯೂಸ್
29-03-24 10:38 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.29: ಕರಾವಳಿಯ ದಕ್ಷಿಣ ಕನ್ನಡ, ಕೊಡಗಿನ ಗಡಿಭಾಗದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಡಿರುವ ಹೊತ್ತಲ್ಲೇ ರಾಜ್ಯ ಸರಕಾರ ನಕ್ಸಲರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಶರಣಾಗಿ ಬರುವ ನಕ್ಸಲರಿಗೆ 7.5 ಲಕ್ಷ ಮೊತ್ತದ ಬಹುಮಾನ ನೀಡುವ ಆಫರ್ ನೀಡಿದೆ.
ಇದಲ್ಲದೆ, ನಕ್ಸಲ್ ವಾದ ಬಿಟ್ಟು ಮುಖ್ಯ ವಾಹಿನಿಗೆ ಬರುವವರಿಗೆ ಅವರ ವಿರುದ್ಧ ದಾಖಲಾದ ಪ್ರಕರಣಗಳನ್ನು ವಜಾ ಮಾಡುವುದು ಸೇರಿ ಅವರಿಗೆ ಸ್ವಉದ್ಯೋಗ ಕಂಡುಕೊಳ್ಳಲು ಸೂಕ್ತ ತರಬೇತಿಯನ್ನೂ ಕೊಡಿಸಲಾಗುವುದು ಎಂದು ರಾಜ್ಯ ಸರಕಾರ ಹೇಳಿದೆ. ಈ ರೀತಿ ಆಫರ್ ನೀಡುವ ಯೋಜನೆಯನ್ನು 2015ರಲ್ಲಿ ತರಲಾಗಿತ್ತು. ಅದನ್ನೀಗ ಮತ್ತೆ ರಿವೈಸ್ ಮಾಡಿ ಜಾರಿಗೆ ತರಲಾಗಿದೆ.
ನಕ್ಸಲರನ್ನು ಮೂರು ಗುಂಪುಗಳಾಗಿ ವಿಭಜಿಸಿದ್ದು, ಕೇಂದ್ರ ಮಟ್ಟದ ಅಥವಾ ರಾಜ್ಯ ಮಟ್ಟದ ನಕ್ಸಲ್ ಗುಂಪಿನಲ್ಲಿ ಗುರುತಿಸಿದ್ದರೆ ಅಂಥವರಿಗೆ 7.5 ಲಕ್ಷ ಮೊತ್ತದ ಸಂಭಾವನೆ ನೀಡಲಾಗುವುದು. ಬಿ ಮತ್ತು ಸಿ ಕೆಟಗರಿಯಲ್ಲಿ ಇರುವವರಿಗೆ ನಾಲ್ಕು ಮತ್ತು ಎರಡು ಲಕ್ಷ ಮೊತ್ತದ ಬಹುಮಾನ ನೀಡಲಾಗುವುದು. ಬಿ ಗ್ರೂಪಿನಲ್ಲಿ ಶಸ್ತ್ರಸಜ್ಜಿತ ನಕ್ಸಲ್ ಗುಂಪಿನಲ್ಲಿದ್ದು ಗುಪ್ತ ಚಟುವಟಿಕೆ ನಡೆಸುತ್ತಿದ್ದವರು, ಸಿ ಗ್ರೂಪಿನಲ್ಲಿ ನಕ್ಸಲರಿಗೆ ಬೆಂಬಲ ನೀಡುತ್ತಿದ್ದವರನ್ನು ಗುರುತಿಸಲಾಗಿದೆ.
ನಕ್ಸಲರು ತಮ್ಮ ಶಸ್ತ್ರಗಳನ್ನು ತಂದು ಒಪ್ಪಿಸಿದಲ್ಲಿ ಅಂಥವರಿಗೆ ಪ್ರತ್ಯೇಕ ಸಂಭಾವನೆ ಸಿಗಲಿದೆ. ಅಲ್ಲದೆ, ತರಬೇತಿ ಪಡೆಯುವರಿಗೆ ತಿಂಗಳಿಗೆ 5 ಸಾವಿರದಂತೆ ಎರಡು ವರ್ಷಗಳ ಕಾಲ ನಿಶ್ಚಿತ ಮೊತ್ತ ಸಿಗಲಿದೆ. ಇದಲ್ಲದೆ, ಅವರ ವಿರುದ್ಧದ ಕೇಸುಗಳನ್ನು ಹಿಂಪಡೆಯಲಾಗುವುದು. ಅವರಿಗೆ ವಕೀಲರ ಸೌಲಭ್ಯ ಬೇಕಿದ್ದಲ್ಲಿ ಅದನ್ನೂ ಒದಗಿಸಲಾಗುವುದು. ಯೋಜನೆಯಡಿ ಈಗಾಗಲೇ ರಾಜ್ಯದಲ್ಲಿ 14 ನಕ್ಸಲರು ಸರಕಾರದ ಮುಂದೆ ಶರಣಾಗಿದ್ದು, ಮುಖ್ಯ ವಾಹಿನಿಗೆ ಬಂದಿದ್ದಾರೆ. ಕಾಡಿನಲ್ಲಿ ಅಡಗಿಕೊಂಡು ಜೀವನ ಸವೆಸುವ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಮತ್ತೆ ನೈಜ ಜೀವನಕ್ಕೆ ಹೊರಳುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
In a bid to reintegrate Naxals into mainstream society, the state government has introduced a novel initiative offering Rs 7.5 lac to those who voluntarily surrender. In addition to the cash reward, they will receive skill training, withdrawal of cases against them, and rehabilitation. This scheme, initially launched in 2015, has been recently revised.
20-06-25 10:36 am
Bangalore Correspondent
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
20-06-25 10:19 pm
HK News Desk
Ayatollah Khamenei; ಭಾರತಕ್ಕೂ ಇರಾನ್ ಮುಖ್ಯಸ್ಥ ಅ...
20-06-25 09:15 pm
ದೆಹಲಿಯ ನ್ಯಾಯಾಧೀಶರ ನಿವಾಸದಲ್ಲಿ ಕಂತೆ ಕಂತೆ ನಗದು ;...
19-06-25 10:58 pm
ಕೇರಳ ಸಿಎಂ ಸ್ವಂತ ಊರಿನಲ್ಲೇ ಮುಸ್ಲಿಂ ಗುಂಪಿನ ನೈತಿಕ...
19-06-25 08:26 pm
Israel-Iran’s War: ಇಸ್ರೇಲಿನ ಅತಿದೊಡ್ಡ ಆಸ್ಪತ್ರೆ...
19-06-25 07:13 pm
20-06-25 11:04 pm
Mangalore Correspondent
Mangalore Forest Guard, Someshwara Beach, U T...
20-06-25 09:54 pm
Tulu, Panchayat, Mangalore, Taranath Gatti K...
20-06-25 09:02 pm
Jeppinamogaru, Accident, Mangalore: ಕುಡಿದ ನಶೆ...
20-06-25 07:10 pm
Chakravarthy Sulibele: ಕುಂದಾಪುರದಲ್ಲಿ ಅಖಂಡ ಭಾರ...
20-06-25 03:54 pm
20-06-25 02:04 pm
Mangalore Correspondent
Mangalore, Bantwal Pregnant Woman Murder, Sui...
19-06-25 04:37 pm
Ccb Police, Bangalore, Drugs, crime: ಚೂಡಿದಾರ್...
17-06-25 05:06 pm
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm