DK Suresh, Modi, BJP, Dr Manjunath: ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆ ;  ಬಿಜೆಪಿ - ಜೆಡಿಎಸ್ ಕಾರ್ಯಕರ್ತರಿಂದ ಮೋದಿ..ಮೋದಿ ಘೋಷಣೆ, ಕೊಗಿದವರಿಗೆ ಕಾರ್ ನಿಲ್ಲಿಸಿ ಕೈ ಮುಗಿದ ಡಿಕೆ ಬ್ರದರ್ 

04-04-24 07:43 pm       HK News Desk   ಕರ್ನಾಟಕ

ರಾಜ್ಯದ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನ. ಈಗಾಗಲೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಭರ್ಜರಿ ಬಲಪ್ರದರ್ಶನದೊಂದಿಗೆ ಮೊದಲ ಸೆಟ್ ನಾಮಪತ್ರವನ್ನು ಮಾರ್ಚ್ 28ರಂದು ಸಲ್ಲಿಸಿದ್ದರು.

ರಾಮನಗರ, ಏ.04: ರಾಜ್ಯದ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನ. ಈಗಾಗಲೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಭರ್ಜರಿ ಬಲಪ್ರದರ್ಶನದೊಂದಿಗೆ ಮೊದಲ ಸೆಟ್ ನಾಮಪತ್ರವನ್ನು ಮಾರ್ಚ್ 28ರಂದು ಸಲ್ಲಿಸಿದ್ದರು.

ಇದಾದ ನಂತರ ಎರಡನೇ ಸೆಟ್ ನಾಮಪತ್ರ ಸಲ್ಲಿಸಿದ್ದ ಡಿ.ಕೆ.ಸುರೇಶ್ ಮೂರನೇ ಸೆಟ್ ನಾಮಪತ್ರ ಸಲ್ಲಿಸಲು ರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದರು. ಅದಾವಗಲೇ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಡಾ. ಸಿ.ಎನ್.ಮಂಜುನಾಥ್ ಕೂಡಾ ನಾಮಪತ್ರ ಸಲ್ಲಿಸಲು ಆಗಮಿಸಿಯಾಗಿತ್ತು.

ಡಿ.ಕೆ.ಸುರೇಶ್ ಜೊತೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್, ವಿಧಾನಪರಿಷತ್ ಸದಸ್ಯ ರವಿ ಕೂಡಾ ಆಗಮಿಸಿದ್ದರು. ಸುರೇಶ್ ಬರುತ್ತಿದ್ದಂತೆಯೇ ನೆರೆದಿದ್ದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಮೋದಿ.. ಮೋದಿ ಎನ್ನುವ ಘೋಷಣೆಯನ್ನು ಕೂಗಲಾರಂಭಿಸಿದರು.

ವಿನಯವಾಗಿ ಕಾರಿನಿಂದ ಇಳಿದ ಸುರೇಶ್, ಮೋದಿ ಪರ ಘೋಷಣೆ ಕೂಗುತ್ತಿದ್ದವರಿಗೆ ಕೈಮುಗಿದು ಕನ್ನಡದ ಶಾಲನ್ನು ಪ್ರದರ್ಶಿಸಿ ಕಾರನ್ನು ಏರಿ ಹೊರಟರು. ಇವತ್ತು ಒಳ್ಳೆ ಗಳಿಗೆ, ದಿನ ಇರುವುದರಿಂದ ಮೂರನೇ ಸೆಟ್ ನಾಮಪತ್ರ ಸಲ್ಲಿಸಿದ್ದೇನೆ ಎಂದು ಡಿ.ಕೆ.ಸುರೇಶ್ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.

ಡಾ.ಮಂಜುನಾಥ್ ನಾಮಪತ್ರ ಸಲ್ಲಿಸಲು ಆಗಮಿಸಿದಾಗ ಅವರ ಪತ್ನಿ ಅನಸೂಯ, ಮಲ್ಲೇಶ್ವರ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ, ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರ ಜೊತೆಗಿದ್ದಾರು. ಮಂಜುನಾಥ್ ಅವರು ರಾಮನಗರ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ಅವರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಚನ್ನಪಟ್ಟಣದಿಂದ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದರು. ಭರ್ಜರಿ ರೋಡ್ ಶೋ ಮೂಲಕ ಡಾ.ಮಂಜುನಾಥ್ ಪರ ಅಮಿತ್ ಶಾ ಮತಯಾಚಿಸಿದ್ದರು. ಬಿಜೆಪಿ ಮತ್ತು ಜೆಡಿಎಸ್ ಪಾರ್ಟಿಯ ಪ್ರಮುಖ ನಾಯಕರು ರೋಡ್ ಶೋ ವೇಳೆ ಹಾಜರಿದ್ದರು.

" ಮಂಜುನಾಥ್ ಎನ್ನುವ ಇಬ್ಬರು ಮೂವರು ನಾಮಪತ್ರ ಸಲ್ಲಿಸಿದ್ದಾರೆ, ಆದರೆ ನಾವು ನಂಬುವುದು ಧರ್ಮಸ್ಥಳದ ಮಂಜುನಾಥನನ್ನು. ನಮ್ಮ ಅಭ್ಯರ್ಥಿಯ ಮುಖವನ್ನೊಮ್ಮೆ ನೋಡಿ, ಧರ್ಮಸ್ಥಳದ ಮಂಜುನಾಥ ಬೇರೆ ಅಲ್ಲ, ನಮ್ಮ ಅಭ್ಯರ್ಥಿ ಡಾ. ಮಂಜುನಾಥ್ ಬೇರೆ ಅಲ್ಲ " ಎಂದು ಆರ್.ಆರ್.ನಗರ ಶಾಸಕ ಮುನಿರತ್ನ ಹೇಳಿದ್ದಾರೆ.

ನಾಮಪತ್ರ ಸಲ್ಲಿಸಲು ಕೊನೆಯ ದಿನದಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಾ.ಸಿ.ಎನ್. ಮಂಜುನಾಥ್, ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಸಿದ್ದಾರೆ. ಜೊತೆಗೆ, ಈಗಾಗಲೇ ನಾಮಪತ್ರ ಸಲ್ಲಿಸಿದ್ದರೂ ಮೂರನೇ ಸೆಟ್ ಅನ್ನು ಡಿ.ಕೆ.ಸುರೇಶ್ ಕೂಡಾ ರಾಮನಗರ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ.

Dk Suresh files nomination, BJP Jds members shout Modi Modi slogans, while he finsihed his nomination and was going back BJP and JDS supporters shouted Modi Modi slogans after which Suresh stopped his car and waved his hands.