ಆಮ್ ಆದ್ಮಿ ಪಕ್ಷ ಬಿಟ್ಟು ಬಿಜೆಪಿ ಸೇರುವಂತೆ ಆಫರ್, ಪಕ್ಷ ಬಿಟ್ಟರೆ ದೆಹಲಿ ಸಿಎಂ ಸ್ಥಾನ ; ಸಿಬಿಐ ವಿರುದ್ಧ ಮನೀಶ್ ಸಿಸೋಡಿಯಾ ಗಂಭೀರ ಆರೋಪ 

18-10-22 02:09 pm       HK News Desk   ದೇಶ - ವಿದೇಶ

ತನ್ನನ್ನು ಆಮ್ ಆದ್ಮಿ ಪಕ್ಷ ತೊರೆದು ಬಿಜೆಪಿ ಸೇರುವಂತೆ ಒತ್ತಡ ಹೇರಲಾಗಿದೆ ಎಂದು ಸಿಬಿಐ ತನಿಖೆಗೆ ಒಳಗಾಗಿರುವ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಸಿಬಿಐ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ನವದೆಹಲಿ, ಅ.18 : ತನ್ನನ್ನು ಆಮ್ ಆದ್ಮಿ ಪಕ್ಷ ತೊರೆದು ಬಿಜೆಪಿ ಸೇರುವಂತೆ ಒತ್ತಡ ಹೇರಲಾಗಿದೆ ಎಂದು ಸಿಬಿಐ ತನಿಖೆಗೆ ಒಳಗಾಗಿರುವ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಸಿಬಿಐ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸೋಮವಾರ ಸತತ ಒಂಬತ್ತು ಗಂಟೆಗಳ ಕಾಲ ಸಿಬಿಐ ಅಧಿಕಾರಿಗಳಿಂದ ವಿಚಾರಣೆಗೆ ಒಳಗಾಗಿದ್ದ ಅವರು, ಅಲ್ಲಿಂದ ಹೊರಬಂದು ಹೊಸ ಬಾಂಬ್ ಹಾಕಿದ್ದಾರೆ. 

10 ಸಾವಿರ ಕೋಟಿ ಅಬಕಾರಿ ಹಗರಣ ನಡೆದಿದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ ಇಂತಹ ಯಾವುದೇ ಹಗರಣ ನಡೆದಿಲ್ಲ ಮತ್ತು ಇಡೀ ಪ್ರಕರಣವೇ ನಕಲಿ ಎಂದು ಸಿಬಿಐ ಕಚೇರಿಯಲ್ಲಿ ಕಂಡುಕೊಂಡಿದ್ದೇನೆ. ನನ್ನ ವಿರುದ್ಧದ ಪ್ರಕರಣವು ದೆಹಲಿಯಲ್ಲಿ ಬಿಜೆಪಿಯ 'ಆಪರೇಷನ್ ಕಮಲ' ಕಾರ್ಯಾಚರಣೆ ಹಿಂದಿನ ಷಡ್ಯಂತ್ರ ಎಂದು ಸಿಸೋಡಿಯಾ ಹೇಳಿದ್ದಾರೆ. 

CBI raids 40 locations in NGO bribes case, detains 7 Home Ministry officials

ಎಎಪಿ ತೊರೆಯುವಂತೆ ನನ್ನ ಮೇಲೆ ಒತ್ತಡ ಹೇರಿದ್ದು ದೆಹಲಿ ಸಿಎಂ ಸ್ಥಾನ ನೀಡುವ ಆಫರ್‌ ನೀಡಲಾಗಿದೆ. ಸಿಎಂ ಸ್ಥಾನ ಸ್ವೀಕರಿಸಬೇಕು ಇಲ್ಲವೇ ಜೈಲು ಶಿಕ್ಷೆ ಅನುಭವಿಸಬೇಕೆಂಬ ಆಯ್ಕೆ ನೀಡಿದ್ದಾರೆ ಎಂದು ಸಿಸೋಡಿಯಾ ಗಂಭೀರ ಆರೋಪ ಮಾಡಿದ್ದಾರೆ.

ಆದರೆ, ಸಿಸೋಡಿಯಾ ಅವರ ಆರೋಪಗಳನ್ನು ಕೇಂದ್ರ ತನಿಖಾ ಸಂಸ್ಥೆ ತಳ್ಳಿಹಾಕಿದೆ. ಕಾನೂನು ರೀತಿಯಲ್ಲಿ ವಿಚಾರಣೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದೆ. ಎಫ್‌ಐಆರ್‌ನಲ್ಲಿ ದಾಖಲಾದ ಪ್ರಕಾರ ಸಿಸೋಡಿಯಾ ಅವರನ್ನು ವೃತ್ತಿಪರ ಮತ್ತು ಕಾನೂನು ರೀತಿಯಲ್ಲಿ ವಿಚಾರಣೆ ನಡೆಸಲಾಗಿದೆ. ಪ್ರಕರಣದ ತನಿಖೆ ಕಾನೂನಿನ ಪ್ರಕಾರವೇ ಮುಂದುವರಿಯಲಿದೆ ಎಂದು ಸಿಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

The Central Bureau of Investigation (CBI), which summoned Delhi's deputy chief minister Manish Sisodia on Monday for alleged irregularities in Delhi's excise policy, refuted Sisodia's claim that he was pressurised to leave the Aam Aadmi Party (AAP).Sisodia, who left the CBI headquarters after nine hours of questioning, said that he was pressurised to leave the AAP and was offered the Delhi Chief Minister's post. "BJP says there is a Rs 10,000 crore excise scam. There is no scam and a fake case has been registered against me.