ಬ್ರೇಕಿಂಗ್ ನ್ಯೂಸ್
23-08-25 04:58 pm HK News Desk ದೇಶ - ವಿದೇಶ
ಚೆನ್ನೈ, ಆ.23: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಸ್ಥಾಪಿಸಿ ತಮಿಳುನಾಡು ರಾಜಕೀಯದಲ್ಲಿ ಬಿರುಸಿನ ಓಡಾಟದಲ್ಲಿ ತೊಡಗಿರುವ ನಟ ವಿಜಯ್ ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮಧುರೈ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆ ವ್ಯಕ್ತಪಡಿಸಿದ್ದಾರೆ. ಆದರೆ ಅದಿನ್ನೂ ಪೂರ್ಣ ಖಚಿತವಾಗಿಲ್ಲ.
ತಮಿಳುನಾಡಿನ ಎರಡು ಪ್ರಬಲ ದ್ರಾವಿಡ ಪಕ್ಷಗಳ ಬಗ್ಗೆ ಜನ ಭ್ರಮನಿರಸನಗೊಂಡಿದ್ದಾರೆ ಎಂದು ಹೇಳಿರುವ ವಿಜಯ್, 2026ರ ವಿಧಾನಸಭಾ ಚುನಾವಣೆಯಲ್ಲಿ ಮಧುರೈ ಪೂರ್ವದಿಂದ ಸ್ಪರ್ಧಿಸಬಹುದೆಂದು ಗುರುವಾರ ಸುಳಿವು ನೀಡಿದ್ದು, ಅಲ್ಲಿನ ಜನ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಆಯ್ಕೆಗೆ ಒಲವು ವ್ಯಕ್ತಪಡಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ನಾವು ಕಳೆದ ಚುನಾವಣೆಗಳಲ್ಲಿ ಎರಡು ಎಲೆ ಮತ್ತು ಉದಯಿಸುವ ಸೂರ್ಯನಿಗೆ ಮತ ಹಾಕಿದ್ದೇವೆ. ಆದರೆ ಈ ಬಾರಿ ಅದು "ವಿಜಯ್ಗೆ" ಎಂದು ದಿನಗೂಲಿ ನೌಕರರೊಬ್ಬರು ಎಐಎಡಿಎಂಕೆ ಮತ್ತು ಡಿಎಂಕೆ ಚುನಾವಣಾ ಚಿಹ್ನೆಗಳನ್ನು ಉಲ್ಲೇಖಿಸಿದ್ದಾರೆ. ತಮಿಳುನಾಡಿನಲ್ಲಿ ಮಹಿಳೆಯರು ಹೊರಗೆ ಹೋಗಲು ಸಾಧ್ಯವಿಲ್ಲ, ನಾವು ಎಲ್ಲಿಯೂ ಒಂಟಿಯಾಗಿ ಹೋಗಲು ಸಾಧ್ಯವಾಗುತ್ತಿಲ್ಲ. ಎಂಜಿಆರ್ ನಂತರ, ಜನರನ್ನು ತನ್ನವರೇ ಎಂದು ನೋಡುತ್ತಿರುವುದು ವಿಜಯ್ ಒಬ್ಬರೇ. ಅವರಿಗೇ ನಮ್ಮ ಮತ ಎಂದು ಮಹಿಳೆಯೊಬ್ಬರು ತಿಳಿಸಿದ್ದಾರೆ.
ಮಧುರೈ ಪೂರ್ವ ಐತಿಹಾಸಿಕವಾಗಿ ಪ್ರಮುಖ ಕ್ಷೇತ್ರ. 1990ರ ದಶಕದ ವರೆಗೆ ಕಮ್ಯುನಿಸ್ಟರು ಮತ್ತು ಎಐಎಡಿಎಂಕೆ ಪ್ರಾಬಲ್ಯ ಹೊಂದಿದ್ದ ಈ ಕ್ಷೇತ್ರದಲ್ಲಿ ಕ್ಷೇತ್ರ ಪುನರ್ವಿಂಗಡಣೆಯ ನಂತರ ಡಿಎಂಕೆ, ಕಳೆದ ಮೂರು ಚುನಾವಣೆಗಳಲ್ಲಿ ಎರಡನ್ನು ಗೆದ್ದಿದೆ. ಮಧುರೈ ಪೂರ್ವ ಕ್ಷೇತ್ರವನ್ನು ಯಾವ ಪಕ್ಷ ಪಡೆದುಕೊಂಡರೂ ಅದು ಚೆನ್ನೈನಲ್ಲಿ ಅಧಿಕಾರವನ್ನು ಸ್ಥಾಪಿಸುತ್ತದೆ ಎಂಬುದು ಜನಜನಿತ. ಮಧುರೈ ಪೂರ್ವದಲ್ಲಿ ಇತ್ತೀಚೆಗೆ ನಡೆದ ವಿಜಯ್ ಪಾಲ್ಗೊಂಡ ರಾಜಕೀಯ ಸಮ್ಮೇಳನದಲ್ಲಿ, ಸುಮಾರು ನಾಲ್ಕು ಲಕ್ಷ ಜನ ಸೇರಿದ್ದು ತಮಿಳುನಾಡು ರಾಜಕೀಯದಲ್ಲಿ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು.
Actor-turned-politician Vijay, who recently launched the Tamizhaga Vetri Kazhagam (TVK), is expected to contest the 2026 Tamil Nadu Assembly elections from the Madurai East constituency, sources said. Though the decision is not yet final, Vijay dropped a strong hint on Thursday, suggesting Madurai East could be his chosen battleground.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
18-09-25 02:42 pm
Mangalore Correspondent
ಜಾತಿ ಗಣತಿ ಮೊದಲೇ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ ಗೊಂ...
18-09-25 02:19 pm
Dharmasthala: ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನ...
17-09-25 11:05 pm
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm