ಬ್ರೇಕಿಂಗ್ ನ್ಯೂಸ್
03-09-25 09:59 pm HK News Desk ದೇಶ - ವಿದೇಶ
ನವದೆಹಲಿ, ಸೆ. 3 : ದೆಹಲಿಯಲ್ಲಿ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ದೆಹಲಿಯ ಬೀದಿಗಳು ಹೊಳೆಯಂತಾಗಿವೆ. ಅಲ್ಲದೆ ದೆಹಲಿಯ ಮಾರ್ಕೆಟ್ ಗಳು ನದಿ ನೀರಲ್ಲಿ ಮುಳುಗಿದ್ದು, ಎಲ್ಲಿ ನೋಡಿದರಲ್ಲಿ ಕೆಸರು ತುಂಬಿದ ಸನ್ನಿವೇಶಗಳೇ ಕಾಣುತ್ತಿವೆ.
ತಗ್ಗು ಪ್ರದೇಶಗಳು ಪೂರ್ತಿ ನೀರಲ್ಲಿ ಮುಳುಗಿದ್ದು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ದೆಹಲಿಯ ಪ್ರಸಿದ್ಧ ಮಜ್ನು ಕಾ ತಿಲ (ಮಿನಿ ಟಿಬೇಟ್) ಕಾಲೋನಿಯಿಂದ ಹಿಡಿದು, ಮದನ್ ಪುರ, ಖಾದರ್, ಬದರ್ ಪುರ ಮೊದಲಾದೆಡೆಯ ಸಾವಿರಾರು ಕುಟುಂಬಗಳು ಬೇರೆಡೆ ತೆರಳಿದ್ದು ನೀರು ಕಡಿಮೆಯಾಗುವುದನ್ನೇ ಕಾಯುತ್ತಿದ್ದಾರೆ.







ಯಮುನಾ ನದಿ ಬುಧವಾರ ಮಧ್ಯಾಹ್ನ ತನಕವೂ ಅಪಾಯದ ಮಟ್ಟ ಮೀರಿ ಹರಿಯುತಿತ್ತು. ಅಧಿಕಾರಿಗಳು ಅಪಾಯದ ಸ್ಥಳಗಳಿಂದ ಜನರನ್ನು ಸ್ಥಳಾಂತರ ಮಾಡುತ್ತಿದ್ದು, ಹಳೇ ರೈಲ್ವೆ ಬ್ರಿಡ್ಜ್ ನಲ್ಲಿ ವಾಹನ ಸಂಚಾರ ತಡೆ ಹಿಡಿದಿದ್ದಾರೆ. ಸದಾ ಗಿಜಿಗುಟ್ಟುತ್ತಿರುವ ದೆಹಲಿಯ ಮಜ್ನು ಕಾ ತಿಲ ಮಾರುಕಟ್ಟೆ ನೀರಿನಿಂದ ಆವೃತ್ತವಾಗಿದ್ದು ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು. ಮದನ್ ಪುರದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ಹಳೇ ಪ್ಲಾಸ್ಟಿಕ್ ಶೀಟುಗಳನ್ನು ಅಡ್ಡ ಹಾಕಿ ಆಶ್ರಯ ಪಡೆದಿದ್ದು ನದಿ ಪ್ರವಾಹ ಕಡಿಮೆಯಾಗುವುದನ್ನು ಕಾಯುತ್ತಿದ್ದಾರೆ. ಬೀದಿನಾಯಿಗಳು ಕೂಡ ಮನೆಯ ಚಾವಣಿ ಏರಿ ಕೆಲವು ಕಡೇ ಆಶ್ರಯ ಪಡೆದಿರುವುದು ಕಂಡು ಬಂದಿದೆ.
ಯಮುನಾ ಬಜಾರ್ ಸಮೀಪ ಮನೆಗಳು ಮತ್ತು ಅಂಗಡಿಗಳು ನೀರಿನ ಮಧ್ಯೆಯೇ ನಿರ್ಮಾಣ ಆಗಿವೆಯೇ ಎಂದು ಭಾಸವಾಗುವಂತಿತ್ತು. ಬದರ್ ಪುರದಲ್ಲಿ ಮನೆಗಳ ಚಾವಣಿಯಷ್ಟೇ ಕಾಣುವಷ್ಟರ ಮಟ್ಟಿಗೆ ನೀರು ಏರಿಕೆಯಾಗಿದೆ.
ಸುಮಾರು 14,000ಕ್ಕೂ ಅಧಿಕ ಜನರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯಮುನಾ ನದಿ 207.41 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದು ಇದು ಈವರೇಗಿನ ಮೂರನೇ ಅತ್ಯಂತ ಹೆಚ್ಚಿನ ನೀರಿನ ಹರಿವಿನ ಮಟ್ಟವಾಗಿದೆ. 1978 ಮತ್ತು 2023ರ ಪ್ರವಾಹದ ಸಂದರ್ಭದಲ್ಲಿ ಯಮುನಾ ನದಿ ಇದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಹರಿದಿತ್ತು.
The Yamuna River has surged above the danger mark, leaving Delhi’s streets looking like flowing rivers and markets submerged under muddy waters. Several low-lying areas have been completely inundated, forcing thousands of residents to move to safer locations.
11-12-25 12:44 pm
HK News Desk
ಬೆಂಗಳೂರು ದೇವನಹಳ್ಳಿ ಬಳಿ ಭೀಕರ ಅಪಘಾತ ; ಡಿವೈಡರ್ ಹ...
11-12-25 12:14 pm
Transport Minister Ramalinga Reddy: ಆರ್ಟಿಒ...
10-12-25 09:40 pm
ಬೆಂಗಳೂರಿನಲ್ಲಿ ರಸ್ತೆ ಅಪಘಾತ ; ಆರು ತಿಂಗಳ ಹಿಂದಷ್ಟ...
10-12-25 05:37 pm
ಅಧಿಕಾರ ಹಂಚಿಕೆ ಬಗ್ಗೆ ಗೊಂದಲ ; ಯಾರೂ ಆ ಬಗ್ಗೆ ಮಾತನ...
10-12-25 12:58 pm
11-12-25 02:09 pm
HK News Desk
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯಗೊಳಿಸಿ ;...
10-12-25 10:54 pm
ಭಾರತೀಯರಿಗೆ ಸಂತಸದ ಸುದ್ದಿ ; ಯುನೆಸ್ಕೋ ಪಟ್ಟಿಗೆ ದೀ...
10-12-25 01:17 pm
ಮಾಜಿ ಸಿಜೆಐ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್ ಕಿ...
09-12-25 11:03 pm
10-12-25 11:04 pm
Mangalore Correspondent
ಮಂಗಳೂರಿನಲ್ಲಿ ಆರು ತಿಂಗಳಿನಿಂದ ಡ್ರಗ್ಸ್ ಬೇಟೆ ; ಕಾ...
10-12-25 10:51 pm
Bharath Kumdel, Instagram, Target Group: ಭರತ್...
10-12-25 08:45 pm
“Board Exams Made Easier: AI Shikshak Breaks...
10-12-25 06:01 pm
Mangalore Accident, Gowjee Events owner Death...
10-12-25 04:00 pm
10-12-25 10:14 pm
Udupi Correspondent
ಪುತ್ತೂರಿನಲ್ಲಿ ನಿಲ್ಲಿಸಿದ್ದ ಲಾರಿಯಿಂದ 21 ಲಕ್ಷ ಮೌ...
09-12-25 04:33 pm
ಚಿನ್ನ ಅಡವಿಟ್ಟು ನಕಲಿ ಷೇರು ಮಾರುಕಟ್ಟೆಗೆ 31 ಲಕ್ಷ...
09-12-25 11:58 am
ಗಡಿಭಾಗ ತಲಪಾಡಿಯಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ; ಎರ...
08-12-25 09:29 pm
ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲ ; ಸ...
06-12-25 09:52 pm