ಬ್ರೇಕಿಂಗ್ ನ್ಯೂಸ್
03-09-25 09:59 pm HK News Desk ದೇಶ - ವಿದೇಶ
ನವದೆಹಲಿ, ಸೆ. 3 : ದೆಹಲಿಯಲ್ಲಿ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ದೆಹಲಿಯ ಬೀದಿಗಳು ಹೊಳೆಯಂತಾಗಿವೆ. ಅಲ್ಲದೆ ದೆಹಲಿಯ ಮಾರ್ಕೆಟ್ ಗಳು ನದಿ ನೀರಲ್ಲಿ ಮುಳುಗಿದ್ದು, ಎಲ್ಲಿ ನೋಡಿದರಲ್ಲಿ ಕೆಸರು ತುಂಬಿದ ಸನ್ನಿವೇಶಗಳೇ ಕಾಣುತ್ತಿವೆ.
ತಗ್ಗು ಪ್ರದೇಶಗಳು ಪೂರ್ತಿ ನೀರಲ್ಲಿ ಮುಳುಗಿದ್ದು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ದೆಹಲಿಯ ಪ್ರಸಿದ್ಧ ಮಜ್ನು ಕಾ ತಿಲ (ಮಿನಿ ಟಿಬೇಟ್) ಕಾಲೋನಿಯಿಂದ ಹಿಡಿದು, ಮದನ್ ಪುರ, ಖಾದರ್, ಬದರ್ ಪುರ ಮೊದಲಾದೆಡೆಯ ಸಾವಿರಾರು ಕುಟುಂಬಗಳು ಬೇರೆಡೆ ತೆರಳಿದ್ದು ನೀರು ಕಡಿಮೆಯಾಗುವುದನ್ನೇ ಕಾಯುತ್ತಿದ್ದಾರೆ.







ಯಮುನಾ ನದಿ ಬುಧವಾರ ಮಧ್ಯಾಹ್ನ ತನಕವೂ ಅಪಾಯದ ಮಟ್ಟ ಮೀರಿ ಹರಿಯುತಿತ್ತು. ಅಧಿಕಾರಿಗಳು ಅಪಾಯದ ಸ್ಥಳಗಳಿಂದ ಜನರನ್ನು ಸ್ಥಳಾಂತರ ಮಾಡುತ್ತಿದ್ದು, ಹಳೇ ರೈಲ್ವೆ ಬ್ರಿಡ್ಜ್ ನಲ್ಲಿ ವಾಹನ ಸಂಚಾರ ತಡೆ ಹಿಡಿದಿದ್ದಾರೆ. ಸದಾ ಗಿಜಿಗುಟ್ಟುತ್ತಿರುವ ದೆಹಲಿಯ ಮಜ್ನು ಕಾ ತಿಲ ಮಾರುಕಟ್ಟೆ ನೀರಿನಿಂದ ಆವೃತ್ತವಾಗಿದ್ದು ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು. ಮದನ್ ಪುರದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ಹಳೇ ಪ್ಲಾಸ್ಟಿಕ್ ಶೀಟುಗಳನ್ನು ಅಡ್ಡ ಹಾಕಿ ಆಶ್ರಯ ಪಡೆದಿದ್ದು ನದಿ ಪ್ರವಾಹ ಕಡಿಮೆಯಾಗುವುದನ್ನು ಕಾಯುತ್ತಿದ್ದಾರೆ. ಬೀದಿನಾಯಿಗಳು ಕೂಡ ಮನೆಯ ಚಾವಣಿ ಏರಿ ಕೆಲವು ಕಡೇ ಆಶ್ರಯ ಪಡೆದಿರುವುದು ಕಂಡು ಬಂದಿದೆ.
ಯಮುನಾ ಬಜಾರ್ ಸಮೀಪ ಮನೆಗಳು ಮತ್ತು ಅಂಗಡಿಗಳು ನೀರಿನ ಮಧ್ಯೆಯೇ ನಿರ್ಮಾಣ ಆಗಿವೆಯೇ ಎಂದು ಭಾಸವಾಗುವಂತಿತ್ತು. ಬದರ್ ಪುರದಲ್ಲಿ ಮನೆಗಳ ಚಾವಣಿಯಷ್ಟೇ ಕಾಣುವಷ್ಟರ ಮಟ್ಟಿಗೆ ನೀರು ಏರಿಕೆಯಾಗಿದೆ.
ಸುಮಾರು 14,000ಕ್ಕೂ ಅಧಿಕ ಜನರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯಮುನಾ ನದಿ 207.41 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದು ಇದು ಈವರೇಗಿನ ಮೂರನೇ ಅತ್ಯಂತ ಹೆಚ್ಚಿನ ನೀರಿನ ಹರಿವಿನ ಮಟ್ಟವಾಗಿದೆ. 1978 ಮತ್ತು 2023ರ ಪ್ರವಾಹದ ಸಂದರ್ಭದಲ್ಲಿ ಯಮುನಾ ನದಿ ಇದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಹರಿದಿತ್ತು.
The Yamuna River has surged above the danger mark, leaving Delhi’s streets looking like flowing rivers and markets submerged under muddy waters. Several low-lying areas have been completely inundated, forcing thousands of residents to move to safer locations.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
27-07-26 01:09 pm
HK News Staffer
ಸಮಾಜ ಸೇವೆಯ ಹೆಸರಲ್ಲಿ ಡ್ರಗ್ಸ್ ದಂಧೆ ; ಜಲೀಲ್ ಬಾಬಾ...
27-07-26 11:47 am
ಡೆಲ್ಲಿ ಟು ಮಂಗಳೂರು ಡ್ರಗ್ ನೆಟ್ವರ್ಕ್ ; ಪೊಲೀಸರ ಕಣ...
26-07-26 04:30 pm
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm