ಬ್ರೇಕಿಂಗ್ ನ್ಯೂಸ್
25-09-25 10:38 pm HK News Desk ದೇಶ - ವಿದೇಶ
ನವದೆಹಲಿ, ಸೆ.25 : ಧರ್ಮಸ್ಥಳದಲ್ಲಿ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಉಪಗ್ರಹ ಸುದ್ದಿವಾಹಿನಿಗಳು ಸುಪ್ರೀಂ ಕೋರ್ಟ್́ ಆದೇಶವೊಂದನ್ನು ಉದ್ದೇಶಪೂರ್ವಕವಾಗಿ ತಿರುಚಿ ಪ್ರಸಾರ ಮಾಡುತ್ತಿವೆ ಎಂದು ಆರೋಪಿಸಿ, ಅಹ್ಮದಾಬಾದ್ ಮೂಲದ ಖ್ಯಾತ ವಕೀಲ ದೀಪಕ್ ಖೋಸ್ಲಾ ಅವರು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್ ಗವಾಯಿ ಅವರಿಗೆ ಪತ್ರ ಬರೆದಿದ್ದಾರೆ. ನ್ಯಾಯಾಂಗ ನಿಂದನೆ ಹಾಗೂ ತಪ್ಪು ಮಾಹಿತಿ ಪ್ರಸಾರ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಖೋಸ್ಲಾ ಅವರು ಪತ್ರದಲ್ಲಿ, 2025ರ ಮೇ 5ರಂದು ಸುಪ್ರೀಂ ಕೋರ್ಟ್ ನೀಡಿದ W.P. (Crl.) ಸಂಖ್ಯೆ 184/2025 ( ಅನಾಮಿಕ ದೂರುದಾರ ಸಲ್ಲಿಸಿದ ಕ್ರಿಮಿನಲ್ ರಿಟ್ ಅರ್ಜಿ ) ಆದೇಶಕ್ಕೆ ಸಂಬಂಧಿಸಿದಂತೆ ಕನ್ನಡ ಸುದ್ದಿವಾಹಿನಿಗಳು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿವೆ ಎಂದು ಆರೋಪಿಸಿದ್ದಾರೆ. ಅರ್ಜಿಯನ್ನು ವಿಳಂಬ ಮತ್ತು ದೋಷಗಳ ಆಧಾರದ ಮೇಲೆ ಅಥವಾ ಹಳೆಯ ದೂರು ಅಥವಾ ಸೂಕ್ತ ಎಫ್ಐಆರ್ ಇಲ್ಲದ ಕಾರಣಗಳಿಗಾಗಿ ಮಾತ್ರ ತಿರಸ್ಕರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ,
ನ್ಯಾಯಾಲಯವು ಪ್ರಕರಣದ ಅರ್ಹತೆಯನ್ನು ಪರಿಗಣಿಸಿಲ್ಲ. ಯಾ ತೀರ್ಪು ನೀಡಿಲ್ಲ. ಇದರ ಹೊರತಾಗಿಯೂ, ಸುಪ್ರೀಂ ಕೋರ್ಟ್ “ಪ್ರಕರಣದ ಅರ್ಹತೆಗಳನ್ನು ನಿರ್ಧರಿಸಿದೆ,” “ಆರೋಪಗಳ ವಿರುದ್ಧ ತೀರ್ಪು ನೀಡಿದೆ,” ಮತ್ತು “ವಿಷಯವನ್ನು ಅಂತಿಮವಾಗಿ ಮುಕ್ತಾಯಗೊಳಿಸಿದೆ” ಎಂದು ಚಾನೆಲ್ಗಳು ಪ್ರಸಾರ ಮಾಡಿವೆ ಎಂದು ಆರೋಪಿಸಿದ್ದಾರೆ
ನ್ಯಾಯಾಂಗದ ವಿಶ್ವಾಸಕ್ಕೆ ಧಕ್ಕೆ
ಖೋಸ್ಲಾ ಪ್ರಕಾರ, ಈ ಸುಳ್ಳು ವರದಿಯು ಕರ್ನಾಟಕದಲ್ಲಿ ನಡೆಯುತ್ತಿರುವ ಧರ್ಮಸ್ಥಳ ಪೊಲೀಸ್ ಠಾಣೆಯ ಎಫ್ಐಆರ್, ಎಸ್ಐಟಿ ರಚನೆ ಮತ್ತು ಕರ್ನಾಟಕ ಹೈಕೋರ್ಟ್ನಲ್ಲಿ ಬಾಕಿ ಇರುವ ರಿಟ್ ( W.P. No. 27750/2025 ) ಸೇರಿದಂತೆ ಇತರ ವಿಚಾರಣೆಗಳು ಮುಕ್ತಾಯಗೊಂಡಿವೆ ಎಂಬ ತಪ್ಪು ಸಂದೇಶವನ್ನು ಸಾರ್ವಜನಿಕರಿಗೆ ನೀಡುತ್ತಿದೆ. ಇದರಿಂದ ನ್ಯಾಯಾಂಗದ ಮೇಲಿನ ಸಾರ್ವಜನಿಕರ ನಂಬಿಕೆ ಹಾಳಾಗುವುದಲ್ಲದೆ, ಕರ್ನಾಟಕ ಹೈಕೋರ್ಟ್ನಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ, ನಾನು ಈಗಾಗಲೇ ಸುದ್ದಿವಾಹಿನಿಗಳಿಗೆ ಇದನ್ನು ನಿಲ್ಲಿಸುವಂತೆ ಮನವಿ ಮಾಡಿದ್ದರೂ, ಅವರು ತಮ್ಮ ತಪ್ಪು ವರದಿಯನ್ನು ಮುಂದುವರಿಸುತ್ತಿದ್ದಾರೆ ಎಂದು ಖೋಸ್ಲಾ ಪತ್ರದಲ್ಲಿ ತಿಳಿಸಿದ್ದಾರೆ.
ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಲು, ತಪ್ಪು ಮಾಡುವ ಪ್ರಸಾರಕರಿಗೆ ನ್ಯಾಯಾಂಗ ನಿಂದನೆ / ವರದಿ ಮಾಡುವ ಮಾನದಂಡಗಳ ಉಲ್ಲಂಘನೆಗಾಗಿ ನೋಟಿಸ್ ಜಾರಿಗೊಳಿಸಲು ಮತ್ತು ಇಂತಹ ತಪ್ಪು ಮರುಕಳಿಸುವುದನ್ನು ತಡೆಯಲು ನ್ಯಾಯಾಂಗ ಆದೇಶಗಳ ನಿಖರ ವರದಿಗಾಗಿ ಮಾರ್ಗಸೂಚಿಗಳನ್ನು ರೂಪಿಸಲು ಸಿಜೆಐ ಅವರಿಗೆ ವಕೀಲ ಖೋಸ್ಲಾ ಮನವಿ ಮಾಡಿದ್ದಾರೆ. ನ್ಯಾಯಾಂಗ ಪ್ರಕಟಣೆಗಳ ಸಮಗ್ರತೆಯನ್ನು ಕಾಪಾಡಲು ಸಿಜೆಐ ಅವರ ಸಮಯೋಚಿತ ಹಸ್ತಕ್ಷೇಪವು ಅಗತ್ಯ ಎಂದು ಅವರು ಒತ್ತಿ ಹೇಳಿದ್ದಾರೆ.
Senior lawyer Deepak Khosla from Ahmedabad has filed a formal complaint to Chief Justice of India B.R. Gavai, alleging that certain Kannada satellite news channels have deliberately misrepresented a Supreme Court order related to the Dharmasthala “buried body” case. He urged the CJI to take action to prevent contempt of court and curb the spread of misinformation.
24-09-25 03:55 pm
Bangalore Correspondent
ಕರ್ನಾಟಕ ಜನಸಂದಣಿ ನಿಯಂತ್ರಣ ಕಾಯ್ದೆ ರೆಡಿ ; ಏಳು ವರ...
23-09-25 07:26 pm
Karnataka High court, Caste census: ಜಾತಿ ಗಣತಿ...
22-09-25 07:07 pm
ಚಾಮುಂಡೇಶ್ವರಿ ಹೆಣ್ಣಿನ ಶಕ್ತಿಯ ಪ್ರತೀಕ, ದಸರಾ ನ್ಯಾ...
22-09-25 03:31 pm
ಬಿಜೆಪಿ ವಿರೋಧ ನಡುವೆಯೇ ಚಾಮುಂಡಿ ತಾಯಿಗೆ ಕೈಮುಗಿದು...
22-09-25 10:54 am
25-09-25 10:38 pm
HK News Desk
'ಆಪರೇಶನ್ ಸಿಂಧೂರ' ಬಗ್ಗೆ ಪಾಕಿಸ್ತಾನದಲ್ಲಿ ಸುಳ್ಳಿನ...
25-09-25 05:09 pm
ಕೇರಳದಲ್ಲಿ ಹೆಚ್ಚುತ್ತಿರುವ 'ಮೆದುಳು ತಿನ್ನುವ ರೋಗ'...
25-09-25 05:05 pm
ಕ್ರೈಸ್ತ ದೇಶದಲ್ಲಿ ಹಿಂದು ದೇವರ ಪ್ರತಿಮೆ ಏಕೆ ? ಟೆಕ...
24-09-25 01:07 pm
ಇಸ್ರೇಲ್ - ಪ್ಯಾಲೆಸ್ತೀನ್ ಯುದ್ಧ ನಿಲ್ಲಿಸಿದರೆ ಟ್ರಂ...
24-09-25 12:20 pm
25-09-25 08:35 pm
Mangalore Correspondent
Manjunath Bhandari, Mangalore: ಜಿಎಸ್ ಟಿ ಏರಿಸಿ...
25-09-25 07:29 pm
Skeleton Found at Bangle Gudde, Dharmasthala...
25-09-25 07:23 pm
ವೀಣೆಯ ನುಡಿಸುತ್ತ ಮುಗುಳ್ನಗುವ ಕಂದಮ್ಮಗಳು ; ಮಂಗಳೂರ...
25-09-25 04:07 pm
Mangalore, Tech Park, Minister Kharge: ಮಂಗಳೂರ...
25-09-25 09:58 am
25-09-25 08:18 pm
Mangalore Correspondent
ನಿವೃತ್ತ ಬ್ಯಾಂಕರ್ ಡಿಜಿಟಲ್ ಅರೆಸ್ಟ್ ; ತಿಂಗಳ ಕಾಲ...
23-09-25 11:01 am
ಮುಂಬೈನಿಂದ ಡ್ರಗ್ಸ್ ತಂದು ಮಂಗಳೂರಿನಲ್ಲಿ ಮಾರಾಟ ; ಎ...
22-09-25 08:16 pm
IAS Officer Manivannan, Cyber Fraud: ಹಿರಿಯ ಐಎ...
21-09-25 02:30 pm
ತುಂಬೆ, ಉಪ್ಪಿನಂಗಡಿಯಲ್ಲಿ ಹಟ್ಟಿಯಿಂದ ದನ ಕದ್ದು ಮಾಂ...
20-09-25 05:11 pm