ಬ್ರೇಕಿಂಗ್ ನ್ಯೂಸ್
27-09-25 05:53 pm HK News Desk ದೇಶ - ವಿದೇಶ
ನವದೆಹಲಿ, ಸೆ.27: ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕುಗಳಲ್ಲಿ ಒಂದಾಗಿರುವ ಎಚ್ ಡಿಎಫ್ ಸಿ ಬ್ಯಾಂಕಿನ ದುಬೈ ಶಾಖೆಯಲ್ಲಿ ಹಣಕಾಸು ವಹಿವಾಟಿಗೆ ನಿರ್ಬಂಧ ವಿಧಿಸಲಾಗಿದೆ. ದುಬೈ ಹಣಕಾಸು ಸೇವೆಗಳ ಪ್ರಾಧಿಕಾರವು(ಡಿಎಫ್ಎಸ್ಎ) ಈ ನಿರ್ಬಂಧ ಹಾಕಿದ್ದು, ಮುಂದಿನ ಆದೇಶದ ವರೆಗೆ ಬ್ಯಾಂಕು ದುಬೈನಲ್ಲಿ ಹೊಸ ಗ್ರಾಹಕರಿಗೆ ಯಾವುದೇ ರೀತಿಯ ಸೇವೆಗಳನ್ನು ನೀಡುವಂತಿಲ್ಲ ಎಂದು ಹೇಳಿದೆ.
ಎಚ್ ಡಿಎಫ್ ಸಿ ಬ್ಯಾಂಕಿನ ಶಾಖೆ ದುಬೈ ಇಂಟರ್ನ್ಯಾಶನಲ್ ಫೈನಾನ್ಶಿಯಲ್ ಸೆಂಟರ್ (ಡಿಐಎಫ್ ಸಿ) ಹೊಸತಾಗಿ ಹಣಕಾಸು ವರ್ಗಾವಣೆ, ಠೇವಣಿ, ಸಾಲ ಇನ್ನಿತರ ರೂಪದಲ್ಲಿ ಹೊಸತಾಗಿ ಗ್ರಾಹಕರಿಗೆ ಯಾವುದೇ ರೀತಿಯ ಸೇವೆಗಳನ್ನು ನೀಡುವಂತಿಲ್ಲ. ಹಾಲಿ ಇರುವ ಗ್ರಾಹಕರ ಸೇವೆಗಳಿಗೆ ತೊಂದರೆ ಇರುವುದಿಲ್ಲ ಎಂದು ಈ ಕುರಿತು ಡಿಎಫ್ಎಸ್ ಎ ಹೊರಡಿಸಿರುವ ನೋಟೀಸಿನಲ್ಲಿ ಹೇಳಲಾಗಿದೆ.

ಡಿಐಎಫ್ ಸಿ ಹಣಕಾಸು ಸೇವೆಗಳಲ್ಲಿ ವಿಳಂಬ ಮತ್ತು ಸ್ಥಳೀಯ ನಿಯಮಗಳನ್ನು ಪಾಲಿಸುವಲ್ಲಿ ವಿಫಲಗೊಂಡ ವಿಚಾರದಲ್ಲಿ ಗ್ರಾಹಕರು ಧ್ವನಿಯೆತ್ತಿದ್ದಕ್ಕೆ ಡಿಎಫ್ ಎಸ್ಎ ಕ್ರಮ ಜರುಗಿಸಿದೆ ಎನ್ನಲಾಗುತ್ತಿದೆ. 2023ರಲ್ಲಿ ಸಿರಿವಂತ ಎನ್ಆರ್ ಐಗಳಿಗೆ ಬ್ಯಾಂಕಿನ ಸಾಲಪತ್ರಗಳ ಬಾಂಡ್ ಗಳನ್ನು ಮಾರಾಟ ಮಾಡಿದ್ದು, ಎಚ್ ಡಿಎಫ್ ಸಿ ಬ್ಯಾಂಕಿನ ದುಬೈ ಶಾಖೆಯ ಸಿಬಂದಿ ಅದನ್ನು ಸುಳ್ಳು ಹೇಳಿ ಮಾಡಿಸಿದ್ದರು ಎಂಬ ಆರೋಪಗಳಿವೆ. ಸ್ವಿಸ್ ಬ್ಯಾಂಕ್ ಆರ್ಥಿಕ ಕುಸಿತ ಆದ ಸಂದರ್ಭದಲ್ಲಿಯೇ ಈ ರೀತಿ ಮಾಡಿದ್ದು ಎನ್ಆರ್ ಐಗಳ ಆಕ್ಷೇಪಕ್ಕೆ ಕಾರಣವಾಗಿತ್ತು.
ಹೀಗಾಗಿ ಈ ಬಗ್ಗೆ ಸಲಹೆ ನೀಡಿದ ಬ್ಯಾಂಕಿನ ಸಿಬಂದಿ, ರಿಲೇಶನ್ ಶಿಪ್ ಮ್ಯಾನೇಜ್ಮೆಂಟ್ ನೋಡಿಕೊಂಡಿದ್ದ ದುಬೈ ಪ್ರತಿನಿಧಿಗಳು, ಬಹ್ರೈನ್ ಬ್ರಾಂಚ್ ಮೂಲಕ ಅಕೌಂಟ್ ಬುಕ್ಕಿಂಗ್ ಆಗಿದೆಯೆಂಬ ಮಾಹಿತಿ ಬಗ್ಗೆಯೂ ತನಿಖೆ ನಡೆಸಲು ಡಿಎಫ್ಎಸ್ಎ ಮುಂದಾಗಿದೆ. ನಿರ್ಬಂಧ ವಿಚಾರದ ಬಗ್ಗೆ ಎಚ್ ಡಿಎಫ್ ಸಿ ಬ್ಯಾಂಕ್ ಆಡಳಿತವು ಪ್ರತಿಕ್ರಿಯಿಸಿದ್ದು, ದುಬೈ ಶಾಖೆಯ ಮೇಲಿನ ನಿರ್ಬಂಧವು ಬ್ಯಾಂಕಿನ ಜಗತ್ತಿನಾದ್ಯಂತ ಇರುವ ಇತರ ಶಾಖೆಗಳ ವಹಿವಾಟಿಗೆ ತೊಂದರೆ ಮಾಡುವುದಿಲ್ಲ. ಆ ಶಾಖೆಯಲ್ಲಿ 2025ರ ಸೆ.23ರ ವರೆಗೆ 1489 ಗ್ರಾಹಕರಿಗೆ ಸೇವೆಗಳನ್ನು ನೀಡಿದ್ದು, ಬ್ಯಾಂಕಿನ ಒಟ್ಟು ಗ್ರಾಹಕರು ಮತ್ತು ಸೇವೆಗಳಿಗೆ ಹೋಲಿಸಿದರೆ ಇದು ತೀರಾ ಸಣ್ಣದು ಎಂದಿದೆ. ಡಿಎಫ್ ಎಸ್ ಎ ನಿಯಮಗಳನ್ನು ಪಾಲಿಸಿ, ಅದರ ತನಿಖೆಯನ್ನೂ ಎದುರಿಸುತ್ತದೆ ಎಂದೂ ಹೇಳಿದೆ.
The Dubai Financial Services Authority (DFSA) has imposed restrictions on the Dubai branch of HDFC Bank, one of India’s largest private sector banks. The order bars the branch from offering services to any new customers until further notice, though existing clients will not be affected.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am