ಬ್ರೇಕಿಂಗ್ ನ್ಯೂಸ್
28-09-25 10:02 pm HK News Desk ದೇಶ - ವಿದೇಶ
ಚೆನ್ನೈ, ಸೆ.28 : ತಮಿಳುನಾಡಿನ ಕರೂರ್ ರ್ಯಾಲಿಯಲ್ಲಿ 10 ಮಕ್ಕಳು ಸೇರಿದಂತೆ 40 ಜನರು ಸಾವನ್ನಪ್ಪಿದ ಘಟನೆ ಹಿಂದೆ ಪಿತೂರಿ ಆರೋಪ ಕೇಳಿಬಂದಿದೆ. ಕಾಲ್ತುಳಿತದ ಬಗ್ಗೆ ಸ್ವತಂತ್ರ ತನಿಖಾ ಆಯೋಗ ರಚಿಸಬೇಕು ಅಥವಾ ಸಿಬಿಐ ತನಿಖೆಗೆ ನೀಡವಂತೆ ಕೋರಿ ನಟ-ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ಮದ್ರಾಸ್ ಹೈಕೋರ್ಟ್ ಮಧುರೈ ಪೀಠದ ಮೆಟ್ಟಿಲೇರಿದೆ.
ಈ ದುರಂತ ಆಕಸ್ಮಿಕವಲ್ಲ, ಬದಲಾಗಿ "ಪಿತೂರಿ"ಯ ಭಾಗ ಎಂದು ಪಕ್ಷ ಆರೋಪಿಸಿದೆ. ಜನಸಮೂಹದ ಮೇಲೆ ಕಲ್ಲು ತೂರಾಟ ಮತ್ತು ಸ್ಥಳದಲ್ಲಿ ಪೊಲೀಸ್ ಲಾಠಿ ಚಾರ್ಜ್ ಮಾಡಿದ್ದು ಘಟನೆಗೆ ಕಾರಣ ಎಂದು ಹೇಳಿದೆ. ಟಿವಿಕೆ ಪಕ್ಷದ ವಕೀಲರ ನಿಯೋಗವು ಜಸ್ಟಿಸ್ ದಂಡಪಾಣಿ ಅವರ ಮನೆಗೆ ತೆರಳಿ ಈ ಬಗ್ಗೆ ದೂರು ಕೊಟ್ಟಿದೆ. ಸುಮೊಟೊ ಪ್ರಕರಣ ತೆಗೆದುಕೊಳ್ಳುವಂತೆಯೂ ಟಿವಿಕೆ ಪಕ್ಷ ಕೋರ್ಟಿನಲ್ಲಿ ಕೇಳಿಕೊಂಡಿದೆ.




ಡಿಎಂಕೆ ಸರ್ಕಾರದ ಸಿಎಂ ಸ್ಟಾಲಿನ್, ಡಿಸಿಎಂ ಉದಯನಿಧಿ ದುರಂತ ಸ್ಥಳಕ್ಕೆ ಭೇಟಿ ನೀಡಿದ್ದು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಇದೇ ವೇಳೆ, ದುರಂತ ಘಟನೆಯ ತನಿಖೆ ಪೂರ್ಣಗೊಳ್ಳುವ ವರೆಗೆ ಟಿವಿಕೆ ಪಕ್ಷದ ಸಾರ್ವಜನಿಕ ರ್ಯಾಲಿಯನ್ನು ನಿರ್ಬಂಧಿಸಬೇಕೆಂದು ಕೋರ್ಟಿಗೆ ಪಿಐಎಲ್ ಸಲ್ಲಿಕೆಯಾಗಿದೆ. ಚುನಾವಣೆಗೆ ಕೆಲವೇ ಸಮಯ ಇರುವಾಗ ಟಿವಿಕೆ ಪಕ್ಷದ ವಿಜಯ್ ನಡೆಸುತ್ತಿರುವ ರ್ಯಾಲಿಗೆ ಭಾರೀ ಜನ ಸೇರುತ್ತಿರುವುದು ಆಡಳಿತ ನಡೆಸುತ್ತಿರುವ ಕೆಲವು ಪಕ್ಷಗಳಿಗೆ ಚಿಂತೆ ಮೂಡಿಸಿತ್ತು. ಹೀಗಾಗಿ ರ್ಯಾಲಿ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿತ್ತೇ ಎನ್ನುವ ಶಂಕೆ ಮೂಡಿದೆ.
ಕರೂರು ಜಿಲ್ಲಾ ಟಿವಿಕೆ ಪಕ್ಷದ ಕಚೇರಿ ಬಂದ್ ಆಗಿದ್ದು ರ್ಯಾಲಿ ಆಯೋಜಿಸಿದ್ದ ಜಿಲ್ಲಾ ನಾಯಕರ ವಿರುದ್ಧ ಪ್ರಕರಣ ದಾಖಲಾಗಿದೆ. ಹೀಗಾಗಿ ಪ್ರಮುಖ ನಾಯಕರು ತಲೆಮರೆಸಿಕೊಂಡಿದ್ದಾರೆ. ಇದೇ ವೇಳೆ, ಟಿವಿಕೆ ಪಕ್ಷದಿಂದ ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದು ಮೃತರ ಕುಟುಂಬಗಳಿಗೆ ತಲಾ 20 ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದೆ. ರಾಜ್ಯ ಸರ್ಕಾರ ಹತ್ತು ಲಕ್ಷ ಪ್ರಕಟಿಸಿದ್ದರೆ ಅದಕ್ಕಿಂತ ಹೆಚ್ಚು ಮೊತ್ತದ ಘೋಷಣೆ ಮಾಡಿ ಗಮನ ಸೆಳೆದಿದೆ. ಕೇಂದ್ರ ಸರ್ಕಾರದಿಂದ ತಲಾ ಎರಡು ಲಕ್ಷ ಪರಿಹಾರ ಪ್ರಕಟಿಸಿದೆ. ಇದೇ ವೇಳೆ, ಘಟನೆ ಬಗ್ಗೆ ಸಿಬಿಐ ತನಿಖೆ ನಡೆಸಲು ಬಿಜೆಪಿ ಆಗ್ರಹ ಮಾಡಿದ್ದು ಡಿಎಂಕೆ ಸರ್ಕಾರದ ವೈಫಲ್ಯ ಬಗ್ಗೆ ಬೊಟ್ಟು ಮಾಡಿದೆ.
ಕರೂರಿಗೆ ವಿಜಯ್ ಬೆಳಗ್ಗೆ 11 ಗಂಟೆಗೆ ಬರುತ್ತಾರೆಂದು ಜನ ಕಾದು ಕುಳಿತಿದ್ದರು. ಆದರೆ ಅವರು ಬರುವಾಗ ಸಂಜೆ 7.30 ಆಗಿತ್ತು. ಆಯೋಜಕರ ಪ್ರಕಾರ ಹತ್ತು ಸಾವಿರ ಜನ ಸೇರುತ್ತಾರೆಂಬ ನಿರೀಕ್ಷೆ ಇತ್ತಂತೆ. ಆದರೆ ಸ್ಥಳದಲ್ಲಿ 30 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಹೆಚ್ಚು ವಿಸ್ತಾರ ಇಲ್ಲದ ರಸ್ತೆಯಲ್ಲಿ ವಿಜಯ್ ಬರುತ್ತಿದ್ದಾಗಲೇ ಜನರು ಮುಗಿಬಿದ್ದುದರಿಂದ ದುರಂತ ಉಂಟಾಗಿದೆ ಎನ್ನಲಾಗುತ್ತಿದೆ.
The tragic stampede at actor-politician Vijay’s Tamizhaga Vetri Kalagam (TVK) rally in Karur, which claimed 40 lives including 10 children, has sparked allegations of conspiracy. TVK has moved the Madras High Court’s Madurai Bench seeking a CBI probe, alleging stone-pelting and police lathi-charge triggered the chaos. While CM M.K. Stalin and Deputy CM Udhayanidhi have promised a judicial inquiry, BJP has accused the DMK government of administrative failure.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am