ಬ್ರೇಕಿಂಗ್ ನ್ಯೂಸ್
29-11-25 08:34 pm HK News Desk ದೇಶ - ವಿದೇಶ
ಕಾನ್ಪುರ, ನ.29 : ಸ್ಲೀಪರ್ ಕೋಚ್ ಬಸ್ ಗೆ ಹೆದ್ದಾರಿಯಲ್ಲಿ ದಿಢೀರ್ ಬೆಂಕಿ ಹೊತ್ತಿಕೊಂಡಿದ್ದು ಇಬ್ಬರು ಪೊಲೀಸ್ ಪೇದೆಗಳು ಸಾಹಸ ಮೆರೆದು ಬಸ್ಸಿನಲ್ಲಿ ನಿದ್ದೆಯಲ್ಲಿದ್ದ 43 ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಘಟನೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಕಾನ್ಪುರ ಹೆದ್ದಾರಿಯಲ್ಲಿ ಚಾಕೇರಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಮದೇವಿ ಫ್ಲೈಓವರ್ನಲ್ಲಿ ಘಟನೆ ನಡೆದಿದೆ. ಬಸ್ ಮೇಲೆ ಹಾಕಿದ್ದ ಲಗೇಜ್ ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಫ್ಲೈಓವರ್ನಲ್ಲಿ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸ್ ಸಿಬ್ಬಂದಿ ಬಸ್ಸನ್ನು ನಿಲ್ಲಿಸಿ, ಕೂಡಲೇ ಎಲ್ಲ ಪ್ರಯಾಣಿಕರನ್ನು ಕೆಳಕ್ಕಿಳಿಸಿದ್ದಾರೆ.
ಘಟನೆ ವೇಳೆ ಪ್ರಯಾಣಿಕರು ಬಸ್ನಲ್ಲಿ ನಿದ್ರಿಸುತ್ತಿದ್ದರು. ಚಲಿಸುತ್ತಿದ್ದ ಬಸ್ಸಿಗೆ ಬೆಂಕಿ ಹೊತ್ತಿರುವುದು ಗಮನಿಸಿದ ಟ್ರಾಫಿಕ್ ಪೇದೆಗಳು ಬಸ್ ನಿಲ್ಲಿಸಿ ಕೂಡಲೇ ಪ್ರಯಾಣಿಕರನ್ನು ಕೆಳಗಿಳಿಸಿ ರಕ್ಷಣೆ ಮಾಡಿದ್ದಾರೆ. ಬಳಿಕ ವಿಚಾರ ತಿಳಿದ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದು ಬೆಂಕಿ ನಂದಿಸಿವೆ. ಅಪಘಾತದಿಂದಾಗಿ ಫ್ಲೈಓವರ್ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಪ್ರಯಾಣಿಕರ ಲಗೇಜ್ಗಳು ಸೇರಿದಂತೆ ಬಸ್ ಭಾಗಃಶ ಸುಟ್ಟು ಹೋಗಿದೆ.
ವಾರಣಾಸಿ ಮೂಲದ ಪಾಲಕ್ ಟ್ರಾವೆಲ್ಸ್ ಒಡೆತನದ ಸ್ಲೀಪರ್ ಬಸ್ ಗುರುವಾರ ರಾತ್ರಿ ದೆಹಲಿಯಿಂದ ವಾರಣಾಸಿಗೆ ಹೊರಟಿತ್ತು. ಬಸ್ಸಿನಲ್ಲಿ ಸುಮಾರು 43 ಪ್ರಯಾಣಿಕರಿದ್ದರು. ಪ್ರಯಾಣಿಕರ ಲಗೇಜ್ಗಳನ್ನು ಬಸ್ ಮೇಲೆ ಲೋಡ್ ಮಾಡಲಾಗಿತ್ತು. ಬಸ್ ರಾಮದೇವಿ ಫ್ಲೈಓವರ್ ತಲುಪಿದಾಗ, ಬಸ್ ಮೇಲಿದ್ದ ಲಗೇಜ್ ಗಳಿಂದ ಹೊಗೆ ಬರುತ್ತಿತ್ತು. ಈ ವೇಳೆ ಅಲ್ಲಿಯೇ ಇದ್ದ ಇಬ್ಬರು ಪೊಲೀಸ್ ಪೇದೆಗಳು ಗಮನಿಸಿ ನಿಲ್ಲಿಸಿದ್ದಾರೆ. ಅಷ್ಟರಲ್ಲಿ ಬಸ್ ಮೇಲಿದ್ದ ಲಗೇಜ್ ಗಳೆಲ್ಲ ಉರಿದು ಕೆಳಗಡೆಗೂ ಬೆಂಕಿ ಹರಡಿತ್ತು. ಪೊಲೀಸರು ಬಸ್ ನಿಲ್ಲಿಸುತ್ತಿದ್ದಂತೆಯೇ ಬೆಂಕಿ ಹತ್ತಿರುವುದನ್ನು ನೋಡಿದ ಚಾಲಕ ಭಯದಿಂದ ಬಸ್ ಬಿಟ್ಟು ಪರಾರಿಯಾಗಿದ್ದಾನೆ.
#कानपुर : NH-19 पर लग्जरी बस में भीषण आग
— News1India (@News1IndiaTweet) November 28, 2025
शॉर्ट सर्किट से बस में उठी चिंगारी ने लिया विकराल रूप
टायरों तक पहुंची आग, देखते ही देखते बस धू-धू कर जल उठी#Kanpur #BusFire @fireserviceup pic.twitter.com/y5EU2LNIrg
A major accident was averted on a Kanpur highway when a sleeper coach bus suddenly caught fire. Showing remarkable courage, two police constables pulled out 43 passengers, who were fast asleep, and saved their lives. The CCTV footage of the incident has now gone viral online.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am