ಬ್ರೇಕಿಂಗ್ ನ್ಯೂಸ್
17-09-20 02:01 pm Headline Karnataka News Network ನ್ಯೂಸ್ View
ಬೆಂಗಳೂರು, ಸೆಪ್ಟಂಬರ್ 17: ಈ ರಮೇಶ್ ಜಾರಕಿಹೊಳಿ ಗೊತ್ತಲ್ಲ.. ಕುಮಾರಸ್ವಾಮಿ ಸರಕಾರವನ್ನು ತನ್ನ ಕಿರು ಬೆರಳಿನಲ್ಲೇ ಬುಗುರಿಯಂತೆ ತಿರುಗಿಸಿ ಮೂಲೆಗೆ ತಳ್ಳಿದ ಬೆಳಗಾವಿ ಬ್ರದರ್..! ಕುಮಾರಣ್ಣ ಸರಕಾರವನ್ನು ಹಿಂಬಾಗಿಲಿಂದ ಹುಳಿ ಹಿಂಡಿಯೇ ಪತನಗೊಳಿಸಿದ್ದಕ್ಕಾಗಿ ಜಾರಕಿ 'ಹುಳಿ' ಅಂತ್ಲೇ ಮಾಧ್ಯಮದಲ್ಲಿ ಹೆಸರಾದವರು. ಎಷ್ಟಾದ್ರೂ ಈ ಬೆಳಗಾವಿ ರಾಜಕಾರಣಿ ಹಾಗೇ ಕುಂತ್ಕೊಳ್ಳೋ ಮನುಷ್ಯ ಅಲ್ಲ.. ಯಾರಿಗಾದ್ರೂ ಹುಳಿ ಹಿಂಡೋದೇ ಜಾಯಮಾನ ಅನ್ನೋದು ಅವ್ರ ರಾಜಕೀಯ ನಡೆಗಳಿಂದಲೇ ತೋರಿಸಿಕೊಟ್ಟಿದ್ದಾರೆ. ಈಗ ಈ ಜಾರಕಿಹೊಳಿಯನ್ನು ಹಿಡಿದು ಬಿಜೆಪಿ ಹೈಕಮಾಂಡ್ ಮಹಾರಾಷ್ಟ್ರದಲ್ಲಿ ಹಕೀಮತ್ ಮಾಡೋಕೆ ಕಳಿಸ್ತಿದ್ಯಾ ಅನ್ನೋ ಅನುಮಾನ ಕೇಳಿಬಂದಿದೆ. ಇದ್ಕೆ ಕಾರಣ ಆಗಿರೋದು ಜಾರಕಿಹೊಳಿ ದೆಹಲಿಯಲ್ಲಿ ಬಿಜೆಪಿಯ ಮಾಜಿ ಸಿಎಂ ಫಡ್ನವೀಸ್ ಭೇಟಿ ಮಾಡಿದ್ದು.
ಮಹಾರಾಷ್ಟ್ರದಲ್ಲಿ ಬಿಜೆಪಿಯ ಮೈತ್ರಿಯನ್ನು ಕಡಿದುಕೊಂಡು ಕಾಂಗ್ರೆಸ್, ಎನ್ ಸಿಪಿ ಜೊತೆಯಾಗಿ ಅಧಿಕಾರ ನಡೆಸ್ತಿರೋ ಶಿವಸೇನೆ ಸರಕಾರಕ್ಕೆ ಜಾರಕಿಹೊಳಿ ಹುಳಿ ಹಿಂಡಲಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಬೆಳಗಾವಿಯಲ್ಲಿ ಪ್ರಭಾವಿಯಾಗಿರುವ ಜಾರಕಿಹೊಳಿ ಬ್ರದರ್ಸ್ ಮಹಾರಾಷ್ಟ್ರ ಭಾಗದಲ್ಲೂ ಪ್ರಭಾವ ಹೊಂದಿದ್ದಾರೆ. ಮೇಲಾಗಿ ಗಡಿಭಾಗದ ಶಾಸಕರು ಪಕ್ಷಭೇದ ಇಲ್ಲದೆ ಬೆಳಗಾವಿಯ ಪ್ರಭಾವಿಗಳ ಜೊತೆ ಹತ್ತಿರದ ನಂಟು ಹೊಂದಿದ್ದಾರೆ. ಇಂಥ ವ್ಯಕ್ತಿ ಈಗ ಮಹಾರಾಷ್ಟ್ರದಲ್ಲಿ ಕಳೆದ ಬಾರಿ ಸಿಎಂ ಆಗಿದ್ದ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೂಚನೆ ಮೇರೆಗೆ ರಮೇಶ್ ಜಾರಕಿಹೊಳಿ ದೆಹಲಿಯಲ್ಲಿ ಈ ಭೇಟಿ ಮಾಡಿದ್ದಾರೆ ಎನ್ನಲಾಗ್ತಿದೆ. ಒಂದು ಗಂಟೆಗೂ ಹೆಚ್ಚು ಕಾಲ ಇವರಿಬ್ಬರು ಮಾತುಕತೆ ನಡೆಸಿದ್ದು ಈಗ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಕುಮಾರಸ್ವಾಮಿ ಸರಕಾರ ಪತನಗೊಳಿಸಿದ ಸಂದರ್ಭ ರಮೇಶ್ ಜಾರಕಿಹೊಳಿ ಮತ್ತು ಎಚ್.ವಿಶ್ವನಾಥ್ ಗ್ಯಾಂಗ್ ಮುಂಬೈನ ಹೊಟೇಲಲ್ಲಿ ಉಳಿದುಕೊಂಡಿತ್ತು. ಹೇಗಾದ್ರೂ ಸರಕಾರ ಉಳಿಸಿಕೊಳ್ಳಬೇಕೆಂದು ಡಿಕೆಶಿ ಅಂಡ್ ಗ್ಯಾಂಗ್ ಜಾರಕಿಹೊಳಿ ಭೇಟಿಗಾಗಿ ಮುಂಬೈಗೆ ತೆರಳಿದ್ದರು. ಆದರೆ ಆಗ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ, ಡಿಕೆ ಶಿವಕುಮಾರ್ ಗೆ ಜಾರಕಿಹೊಳಿ ಉಳಿದುಕೊಂಡಿದ್ದ ಹೊಟೇಲಿಗೆ ತೆರಳಲು ಅವಕಾಶ ನೀಡಿರಲಿಲ್ಲ. ಕೊನೆಗೆ ಡಿಕೆಶಿ ಅಂಡ್ ಟೀಮ್ ಮುಂಬೈನಲ್ಲಿ ಹೈಡ್ರಾಮಾ ಮಾಡಿ, ಏನೂ ಮಾಡಲಾಗದೆ ಹಿಂತಿರುಗಿತ್ತು. ಇತ್ತ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಬರಲು ರಮೇಶ್ ಜಾರಕಿಹೊಳಿ ಕಾರಣ ಆಗಿದ್ದೂ ಅವರ ಛಾರ್ಮ್ ಹೆಚ್ಚುವಂತೆ ಮಾಡಿತ್ತು. ಆವತ್ತು ಸಿಎಂ ಫಡ್ನವಿಸ್ ಕಾರಣದಿಂದ ಮುಂಬೈನಲ್ಲಿ ಅತೃಪ್ತರನ್ನು ಕಟ್ಟಿಕೊಂಡು 15 ದಿನಗಳ ಕಾಲ ಉಳಿದುಕೊಂಡಿದ್ದ ಜಾರಕಿಹೊಳಿ ಈಗ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಲಿದ್ದಾರೆಯೇ ಅನ್ನುವ ಮಾತು ಕೇಳಿಬಂದಿದೆ. ಜಾರಕಿಹೊಳಿ ಮತ್ತು ಫಡ್ನವಿಸ್ ನಡುವಿನ ಭೇಟಿ ಕುತೂಹಲಕ್ಕೆ ಕಾರಣವಾಗಿದ್ದಲ್ಲದೆ, ಅತ್ತ ಶಿವಸೇನೆ - ಕಾಂಗ್ರೆಸ್ ಸರಕಾರದಲ್ಲಿ ನಡುಕ ಸೃಷ್ಟಿಸಿದೆ.
ನಟ ಸುಶಾಂತ್ ಸಾವಿನ ಪ್ರಕರಣದಲ್ಲಿ ಹೆಸರು ಕೆಡಿಸಿಕೊಂಡಿರುವ ಶಿವಸೇನೆ ಸರಕಾರದ ಬಗ್ಗೆ ಅಲ್ಲಿನ ಶಾಸಕರು ಅತೃಪ್ತಿ ಹೊಂದಿದ್ದಾರೆ ಎನ್ನಲಾಗುತ್ತಿದೆ. ಇದೇ ಸಮಯವನ್ನು ಬಿಜೆಪಿ ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದ್ದು ಚತುರ ರಾಜಕೀಯ ನಡೆ ಎನ್ನುವ ಮಾತು ಕೇಳಿಬರುತ್ತಿದೆ.
Join our WhatsApp group for latest news updates
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
ಗಣೇಶ ಹಬ್ಬದ ಮುಗಿಸಿ ಬೆಂಗಳೂರಿಗೆ ತೆರಳುತ್ತಿದ್ದ ವೇಳ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm