ಬ್ರೇಕಿಂಗ್ ನ್ಯೂಸ್
16-04-26 09:37 pm HK News Staffer ಸಿನಿಮಾ
ಬೆಂಗಳೂರು, ಏಪ್ರಿಲ್ 16: ದರ್ಶನ್ ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ ಸಂಕನಗೌಡ ಎಂಟು ವರ್ಷಗಳ ಬಳಿಕ ದಿಢೀರ್ವಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ತಮ್ಮ ನಾಪತ್ತೆಯ ಹಿಂದೆ ನಡೆದ ಆಘಾತಕಾರಿ ಘಟನೆಗಳನ್ನು ಬಹಿರಂಗಪಡಿಸಿದ್ದಾರೆ. ಭಾವುಕರಾಗಿ ಮಾತನಾಡಿದ ಅವರು, “ಹೆದರಿದ್ದೇನೆ, ನನಗೆ ಸ್ವಲ್ಪ ಕಂಫರ್ಟ್ ಝೋನ್ ಕೊಡಿ” ಎಂದು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ, ಜೀವನದ ಏರುಪೇರುಗಳನ್ನು ವಿವರಿಸುತ್ತಾ, “ಈಗ ಬಂದಿದ್ದಕ್ಕೆ ಖುಷಿ ಇದೆ, ಆದರೆ ಮಿಸ್ ಮಾಡಿಕೊಂಡ ಸಮಯಕ್ಕೆ ಬೇಜಾರಿದೆ. ನನ್ನಿಂದ ಅನೇಕರು ನೋವು ಅನುಭವಿಸಿದ್ದರೆ ಕ್ಷಮೆ ಕೇಳುತ್ತೇನೆ. ಪರಿಸ್ಥಿತಿ ನನ್ನನ್ನು ಅಂಥ ನಿರ್ಧಾರಕ್ಕೆ ತಳ್ಳಿತು” ಎಂದು ಹೇಳಿದರು.
ಗದಗ ಮೂಲದ ಮಲ್ಲಿಕಾರ್ಜುನ, ದರ್ಶನ್ ಅವರ ಮ್ಯಾನೇಜರ್ ಆಗಿ ಮಾತ್ರವಲ್ಲದೆ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು. ಆದರೆ ಮೊದಲ ಸಿನಿಮಾದಲ್ಲೇ ನಷ್ಟ ಅನುಭವಿಸಿದ ಅವರು, ಬಳಿಕ ವ್ಯವಹಾರಗಳಲ್ಲಿ ನಿರಂತರ ಹಿನ್ನಡೆಯನ್ನು ಕಂಡು, ಸಾಲದ ಬಲೆಗೂ ಸಿಲುಕಿದರು. “ಸುಮಾರು 8 ಕೋಟಿ ರೂಪಾಯಿಗೂ ಹೆಚ್ಚು ಸಾಲ ಮಾಡಿಕೊಂಡಿದ್ದೆ. ಜೀವನವೇ ಮುಗಿಯುವ ಹಂತಕ್ಕೆ ಬಂದಿತ್ತು” ಎಂದು ಅವರು ನೋವಿನಿಂದ ಹೇಳಿದ್ದಾರೆ.
2018ರ ಜುಲೈ 1ರಂದು ಬೆಂಗಳೂರನ್ನು ತೊರೆದ ಅವರು, ಆರ್ಥಿಕ ಸಂಕಷ್ಟ ಹಾಗೂ ಕುಟುಂಬದ ಒತ್ತಡದಿಂದ ಆತ್ಮಹತ್ಯೆ ಯೋಚನೆಗೂ ಒಳಗಾಗಿದ್ದರು. “ಮೂರು ದಿನ ಕುಟುಂಬದೊಂದಿಗೆ ಕುಳಿತು ಸಾಯೋ ನಿರ್ಧಾರವನ್ನೇ ತೆಗೆದುಕೊಂಡಿದ್ದೇವೆ. ಆದರೆ ಕೊನೆಯ ಕ್ಷಣದಲ್ಲಿ ಬದುಕೋ ನಿರ್ಧಾರಕ್ಕೆ ಬಂದೆ” ಎಂದು ಹೇಳಿದ್ದಾರೆ.
ನಂತರ ಎಲ್ಲರಿಗೂ ಮೆಸೇಜ್ ಮಾಡಿ, ಮೊಬೈಲ್ ಆಫ್ ಮಾಡಿ, ಸಿಮ್ ಕಾರ್ಡ್ ತ್ಯಜಿಸಿ ದೇಶದ ವಿವಿಧ ಭಾಗಗಳಲ್ಲಿ ಅಲೆದಾಡಿದ ಅವರು, ಕೆಲವು ಕಾಲ ನೆಪಾಳದಲ್ಲೂ ವಾಸವಿದ್ದರು. “ನಾನು ಜೀವಂತವಾಗಿದ್ದೇನೆ ಎಂಬ ಸೂಚನೆ ಕೆಲವೊಮ್ಮೆ ಕೊಟ್ಟಿದ್ದೆ. ಆದರೆ ಗಿಲ್ಟ್ ಕಾಡುತ್ತಿತ್ತು” ಎಂದು ತಿಳಿಸಿದ್ದಾರೆ.
ಒಂದೂವರೆ ವರ್ಷಗಳ ಹಿಂದೆ ಮರಳಿ ಬಂದ ಅವರು, ಹೊಸ ಜೀವನ ಆರಂಭಿಸಲು ಯತ್ನಿಸಿದ್ದಾಗಲೇ ಆರೋಗ್ಯ ಸಮಸ್ಯೆ ಎದುರಾಯಿತು. “ಮೂರು ದಿನಗಳಲ್ಲಿ ಸ್ಟ್ರೋಕ್ ಆಯ್ತು. ಆದರೂ ಎಲ್ಲರ ಮನೆಗೆ ಹೋಗಿ ಕ್ಷಮೆ ಕೇಳಿದೆ. ನಾನು ಸೋತಿದ್ದೇನೆ, ಸತ್ತಿಲ್ಲ ಎಂದು ಹೇಳಿದ್ದೇನೆ” ಎಂದು ಹೇಳಿದ್ದಾರೆ.
ದರ್ಶನ್ ಮತ್ತು ಅವರ ಕುಟುಂಬದ ಬಗ್ಗೆ ಮಾತನಾಡಿದ ಮಲ್ಲಿಕಾರ್ಜುನ, “ಅವರು ನನ್ನನ್ನು ಕುಟುಂಬದ ಸದಸ್ಯರಂತೆ ನೋಡಿಕೊಂಡಿದ್ದಾರೆ. ನನ್ನ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಲು ಅವರ ಆಶೀರ್ವಾದ ಬೇಕು” ಎಂದು ಹೇಳಿದ್ದಾರೆ.
ಈ ಘಟನೆ ಸಾಮಾಜಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ವೈಯಕ್ತಿಕ ಸಂಕಷ್ಟಗಳು ವ್ಯಕ್ತಿಯನ್ನು ಎಷ್ಟು ಮಟ್ಟಿಗೆ ತಳ್ಳಬಹುದು ಎಂಬುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ.
1 ಕೋಟಿ ಕೊಟ್ಟ ದರ್ಶನ್ ;
''ದರ್ಶನ್ ಸರ್ ಅವರ 'ಐರಾವತ' ಶೂಟಿಂಗ್ ನಡೆಯುತ್ತಿತ್ತು. 2015ರ ಸಮಯದಲ್ಲಿ ನನಗೆ ಆಗಲೇ 5-6 ಕೋಟಿ ಸಾಲ ಇತ್ತು. ನನಗೆ ಆ ಟೈಮ್ನಲ್ಲಿ ಕುತ್ತಿಗೆಗೆ ಬಂದಿದ್ದು 1 ಕೋಟಿ ರೂಪಾಯಿ. ಹೀಗಾಗಿ, '1 ಕೋಟಿ ಸಾಲ ಇದೆ, ಕೊಡಿ' ಅಂತ ಕೇಳಿದೆ. ತಕ್ಷಣವೇ ನನಗೆ 1 ಕೋಟಿ ರೂಪಾಯಿ ಕೊಟ್ಟು ದರ್ಶನ್ ಸರ್ ಹೆಲ್ಪ್ ಮಾಡಿದರು. ನಾನು ಅವತ್ತು 5 ಕೋಟಿ ಅಂತ ಕೇಳಲಿಲ್ಲ. ನಾನು ಮತ್ತೆ ಎಡವಿದೆ. ಸ್ವಯಂಕೃತ ಅಪರಾಧಗಳನ್ನ ಮಾಡಿಕೊಂಡೆ. ಲಾಸ್ ಆದೆ. ಪದೇ ಪದೇ ದರ್ಶನ್ ಸರ್ ಹತ್ತಿರ ಹೋಗಿ.. ಹೇಗೆ ಮುಖ ಎತ್ತಿ ಕೇಳಲಿ? ಕೇಳುವ ಪರಿಸ್ಥಿತಿಯಲ್ಲಿ ನಾನು ಇರಲಿಲ್ಲ. ಕೇಳಿದ್ರೆ ಹೆಲ್ಪ್ ಮಾಡ್ತಿದ್ರೇನೋ ಗೊತ್ತಿಲ್ಲ. ಆದರೆ, ನಾನು ಹೋಗ್ಲಿಲ್ಲ'' ಎಂದು ಅಂದಿನ ಪರಿಸ್ಥಿತಿ ವಿವರಿಸಿದ್ದಾರೆ ಮಲ್ಲಿಕಾರ್ಜುನ್.
21-08-26 03:42 pm
HK News Staffer
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
ಬೆಂಗಳೂರಿನಲ್ಲಿ ಎಚ್1ಎನ್1 ಸೋಂಕು ಹೆಚ್ಚಳ ; ಖಾಸಗಿ ಶ...
19-08-26 09:52 pm
ಹನೂರು ಎನ್ಕೌಂಟರ್; ತಮಿಳುನಾಡು ಕ್ಯಾತೆ ಬೆನ್ನಲ್ಲೇ...
19-08-26 05:38 pm
ವಂದೇ ಮಾತರಂ ವಿವಾದ ; ಜೈಲಿಗೆ ಹಾಕಿದ್ರೂ ನಾನು ವಂದೇ...
19-08-26 02:15 pm
20-08-26 10:55 am
HK News Staffer
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
ಬಿಜೆಪಿಯ ಯುವ ಮೋರ್ಚಾಗೆ ಹೊಸ ಸಾರಥಿ ; ತೇಜಸ್ವಿ ಸೂರ್...
18-08-26 02:42 pm
21-08-26 03:12 pm
HK News Staffer
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
ಪುತ್ತೂರು ; ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಮರು...
19-08-26 08:40 pm
ಜೈಲಿನ ಜಾಮರ್ ಸಮಸ್ಯೆ ಇತ್ಯರ್ಥಕ್ಕೆ ಕಾಲಮಿತಿ ನಿಗದಿಪ...
19-08-26 04:19 pm
ಕರಾವಳಿಯಲ್ಲಿ ನಾಗರ ಪಂಚಮಿ ಸಂಭ್ರಮ ; ನಾಗಬನ, ನಾಗ ಸ...
17-08-26 05:07 pm
21-08-26 12:20 pm
HK News Staffer
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm
ಕೋಟೆಪುರ ಕೊಳೆತ ಶವ ಪತ್ತೆ ಪ್ರಕರಣ ; ವ್ಯಕ್ತಿಯ ಕೊಲೆ...
20-08-26 04:25 pm