ಬ್ರೇಕಿಂಗ್ ನ್ಯೂಸ್
07-07-22 08:07 pm Source: Vijayakarnataka ಡಾಕ್ಟರ್ಸ್ ನೋಟ್
ಉಪ್ಪಿನಕಾಯಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ?. ನೋಡಿದಾಕ್ಷಣವೇ ಬಾಯಲ್ಲಿ ನೀರೂರಿಸುವ ಉಪ್ಪಿನಕಾಯಿ, ಭಾರತೀಯರ ಆಹಾರದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಉಪ್ಪಿನಕಾಯಿ ಇಲ್ಲದ ಊಟವಿಲ್ಲ ಎನ್ನುವಷ್ಟು ಮನೆಮಾತಾಗಿದೆ ಈ ಉಪ್ಪಿನಕಾಯಿ. ಕೆಲವರಿಗಂತೂ ಊಟಕ್ಕೆ ಉಪ್ಪಿನಕಾಯಿ ಬೇಕೆ ಬೇಕು. ರುಚಿಯಾಗಿದೆ ಎಂದು ಮತ್ತೆ ಮತ್ತೆ ಹಾಕಿಸಿಕೊಂಡು ತಿನ್ನುವವರೂ ಇರುತ್ತಾರೆ. ಆದರೆ ನೆನಪಿಡಿ ಪ್ರತಿದಿನ ಮೂರು ಹೊತ್ತೂ ಉಪ್ಪಿನ ಕಾಯಿ ಸೇವನೆಯಿಂದ ಆರೋಗ್ಯ ಸಮಸ್ಯೆ ಕಾಡಬಹುದು.
ಹೌದು, ಉಪ್ಪಿನಕಾಯಿಯನ್ನು ಪ್ರತಿದಿನ ಸೇವನೆ ಮಾಡುವುದರಿಂದ ಆರೋಗ್ಯದಲ್ಲಿ ಒಂದಷ್ಟು ಏರುಪೇರುಗಳಾಗಬಹುದು. ಅದರಲ್ಲೂ ಪುರುಷರ ಆರೋಗ್ಯಕ್ಕೆ ಅತಿಯಾದ ಉಪ್ಪಿನ ಕಾಯಿ ಸೇವನೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು.
ಹಾಗಾದರೆ ಈ ಉಪ್ಪಿನಕಾಯಿಯನ್ನು ಬಾಯಿರುಚಿಗಿಂತ ಹೆಚ್ಚಾಗಿ ಸೇವನೆ ಮಾಡಿದರೆ ಯಾವೆಲ್ಲ ಆನಾರೋಗ್ಯ ಸಮಸ್ಯೆ ಕಾಡುತ್ತದೆ ಎನ್ನುವ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ,
ಅತಿಯಾದ ಉಪ್ಪಿನಾಂಶ
ನಮಗೆಲ್ಲಾ ಗೊತ್ತಿರುವ ಹಾಗೆ ಉಪ್ಪಿನಕಾಯಿಯಲ್ಲಿ ಅತಿ ಹೆಚ್ಚು ಉಪ್ಪಿನ ಅಂಶವಿರುತ್ತದೆ. ಇದು ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ವಿಶ್ವ ಆರೋಗ್ಯ ಶಿಫಾರಸು ಮಾಡುವ ಪ್ರಕಾರ ಆಹಾರ ಸೇವನೆಯಲ್ಲಿ ಉಪ್ಪಿನಾಂಶ 5 ಗ್ರಾಂ ಅಥವಾ ಒಂದು ಟೀ ಚಮಚವಾಗಿದ್ದರೆ ಉತ್ತಮ.
ಸಾಮಾನ್ಯವಾಗಿಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ ಗುಣಮಟ್ಟದಲ್ಲಿ ಉತ್ತಮವಾಗಿರುತ್ತದೆ. ಏಕೆಂದರೆ ಟೇಬಲ್ ಉಪ್ಪನ್ನು ಅವುಗಳ ಸಂರಕ್ಷಣೆಯಲ್ಲಿ ಬಳಸಲಾಗುತ್ತದೆ, ಆದರೆ ಮಾರುಕಟ್ಟೆಯಲ್ಲಿ ಸಿಗುವ ಉಪ್ಪಿನಕಾಯಿಗಳಲ್ಲಿ ಸೋಡಿಯಂ ಬೆಂಜೊಯೇಟ್ನಂತಹ ವಿವಿಧ ರಾಸಾಯನಿಕಗಳನ್ನು ಬಳಸಿ ವರ್ಷಗಟ್ಟಲೆ ಹಾಳಾಗದಂತೆ ಇಡಲಾಗುತ್ತದೆ, ಇದು ತುಂಬಾ ಹಾನಿಕಾರಕವಾಗಿದೆ. ಸೋಡಿಯಂ ಬೆಂಜೊಯೇಟ್ ಸಂಭಾವ್ಯ ಕಾರ್ಸಿನೋಜೆನ್ ಏಕೆಂದರೆ ಇದು ಆಮ್ಲಜನಕದ ಜೀವಕೋಶಗಳನ್ನು ನಾಶಪಡಿಸುತ್ತದೆ.
ಪುರುಷರಿಗೆ ಹಾನಿಕಾರಕ
ಉಪ್ಪಿನಕಾಯಿಯ ರುಚಿ ಹುಳಿ ಮತ್ತು ಖಾರವಾಗಿರುತ್ತದೆ. ಉಪ್ಪಿನಕಾಯಿಯಲ್ಲಿರುವ ಅಂಶಗಳು ಪುರುಷರ ಲೈಂಗಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ ಎನ್ನುತ್ತಾರೆ ತಜ್ಞರು. ಗ್ರೆನೋಬಲ್ ವಿಶ್ವವಿದ್ಯಾಲಯದಲ್ಲಿ ನಡೆಸಿದ ಅಧ್ಯಯನದ ವರದಿಯು ಹೆಚ್ಚು ಹುಳಿ ಮತ್ತು ಖಾರದ ಪದಾರ್ಥಗಳ ಸೇವನೆಯಿಂದ ಟೆಸ್ಟೋಸ್ಟೆರಾನ್ ಮಟ್ಟಗಳ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುವ ಮೂಲ ಹಾರ್ಮೋನ್ ಉತ್ಪಾದನೆಯಲ್ಲಿ ಏರುಪೇರಾಗುತ್ತದೆ. ಜೊತೆಗೆ ಪುರುಷರಲ್ಲಿ ಆಲಸ್ಯ ಮತ್ತು ಖಿನ್ನತೆಯ ಮನಸ್ಥಿತಿ ಉಂಟಾಗುತ್ತದೆ ಎಂದು ಹೇಳಿದೆ.
ಎಣ್ಣೆಯ ಬಳಕೆ
ಉಪ್ಪಿನಕಾಯಿಯನ್ನು ತಯಾರಿಸುವಾಗ, ತರಕಾರಿಗಳನ್ನು ಎಣ್ಣೆಯಲ್ಲಿ ನೆನೆಸಲಾಗುತ್ತದೆ, ಏಕೆಂದರೆ ತೈಲವು ತೇವಾಂಶದ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅವುಗಳನ್ನು ಸಂರಕ್ಷಿಸುತ್ತದೆ. ಎಣ್ಣೆಯು ಉಪ್ಪಿನಕಾಯಿಯನ್ನು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಂದ ಕಲುಷಿತಗೊಳಿಸುವುದನ್ನು ತಡೆಯುತ್ತದೆ.
ಆದರೆ ಅದೇ ಎಣ್ಣೆಯು ನಿಮ್ಮಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಎಂಬುದನ್ನು ನೆನಪಿಡಿ, ಅಂದರೆ ನೀವು ಹೃದ್ರೋಗಕ್ಕೆ ಒಳಗಾಗುವ ಅಥವಾ ಹೃದಯದ ಆರೋಗ್ಯ ಹದಗೆಡುವ ಅಪಾಯ ಹೆಚ್ಚಾಗಿರುತ್ತದೆ. ಅಧಿಕ ಕೊಲೆಸ್ಟ್ರಾಲ್ ಮಟ್ಟವು ದೀರ್ಘಾವಧಿಯಲ್ಲಿ ಯಕೃತ್ತನ್ನು ಹಾನಿಗೊಳಿಸುತ್ತದೆ.
ಗ್ಯಾಸ್ಟ್ರಿಕ್ ಕ್ಯಾನ್ಸರ್ ಅಪಾಯ ಹೆಚ್ಚು
ಉಪ್ಪಿನಕಾಯಿಯನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಗ್ಯಾಸ್ಟ್ರಿಕ್ ಕ್ಯಾನ್ಸರ್ ಬರುವ ಅಪಾಯ ಹೆಚ್ಚುತ್ತದೆ. ಏಕೆಂದರೆ ಇದರಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾಗಿರುತ್ತದೆ. ರಕ್ತದೊತ್ತಡದ ರೋಗಿಗಳಿಗೆ ಇದು ಉತ್ತಮವಲ್ಲ. ಪರಿಸರ ಮತ್ತು ಪ್ರಾಯೋಗಿಕ ಅಧ್ಯಯನಗಳ ವರದಿಯು ಉಪ್ಪಿನಕಾಯಿ ಅತಿಯಾದ ಸೇವನೆ ಗ್ಯಾಸ್ಟ್ರಿಕ್ ಕ್ಯಾನ್ಸರ್ನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದೆ. ಹೀಗಾಗಿ ಪ್ರತಿದಿನ ಉಪ್ಪಿನಕಾಯಿಯನ್ನು ಸೇವನೆ ಮಾಡುವ ಬದಲು ಅಪರೂಪಕ್ಕೆ ಬಾಯಿ ರುಚಿಗೆಂದು ಸೇವಿಸಿ ಒಳ್ಳೆಯದು.
ಆಸಿಡಿಟಿ ಸಮಸ್ಯೆ
ಖಾಲಿ ಹೊಟ್ಟೆಯಲ್ಲಿ ಊಟದ ಮೊದಲು ರುಚಿಯಾಗಿದೆ ಎಂದು ಉಪ್ಪಿನಕಾಯಿಯನ್ನು ತಿಂದರೆ ಗ್ಯಾಸ್ಟ್ರಿಕ್, ಆಸಿಡಿಟಿ ಸಮಸ್ಯೆ ಕಾಡುತ್ತದೆ ನೆನಪಿರಲಿ. ಇದರಲ್ಲಿನ ಉಪ್ಪು, ಎಣ್ಣೆ ಹಾಗೂ ಖಾರದ ಅಂಶ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತದೆ.
ಪ್ರಮುಖ ವಿಚಾರವೆಂದರೆ ಉಪ್ಪಿನಕಾಯಿ ಸೇವನೆಯು ಅನ್ನನಾಳದ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ದ್ವಿಗುಣಗೊಳಿಸುತ್ತದೆ ಎನ್ನುತ್ತವೆ ಅಧ್ಯಯನಗಳು. ಹೀಗಾಗಿ ಆದಷ್ಟು ಉಪ್ಪಿನಕಾಯಿ ಸೇವನೆ ಕಡಿಮೆ ಇದ್ದರೆ ಒಳ್ಳೆಯದು. ಅದರಲ್ಲೂ ಮಾರುಕಟ್ಟಿಯಲ್ಲಿ ಸಿಗುವ ಕೃತಕ ಬಣ್ಣ ಸೇರಿಸಿದ ಉಪ್ಪಿನಕಾಯಿಯಿಂದ ಆದಷ್ಟು ದೂರವಿರಿ ಎನ್ನುತ್ತಾರೆ ತಜ್ಞರು.
Side Effects Of Over Consumption Of Pickles.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am