ಬ್ರೇಕಿಂಗ್ ನ್ಯೂಸ್
25-07-22 09:00 pm Source: Vijayakarnataka ಡಾಕ್ಟರ್ಸ್ ನೋಟ್
ಮಳೆಗಾಲ ಬಂತೆಂದರೆ ಸಾಕು, ಪಕ್ಕನೆ ನೆನಪಿಗೆ ಬರುವುದು ಶುಂಠಿ! ಈ ಸಮಯದಲ್ಲಿ ಕಾಡುವ ಶೀತ, ಕೆಮ್ಮು, ಜ್ವರದಂತಹ ಸಮಸ್ಯೆಯನ್ನು ಬಹಬೇಗನೇ ಕಡಿಮೆ ಮಾಡುವ ಎಲ್ಲಾ ಗುಣಲಕ್ಷಣಗಳು ಕೂಡ ಈ ಶುಂಠಿಯಲ್ಲಿ ಕಂಡು ಬರುತ್ತದೆ. ಅಷ್ಟೇ ಅಲ್ಲದೆ, ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸಿ, ಕೆಟ್ಟುಹೋದ ಹೊಟ್ಟೆಯನ್ನು ಸರಿಪಡಿಸಿ ವಾಕರಿಕೆ ವಾಂತಿ, ಹೊಟ್ಟೆ ಉಬ್ಬರ ಇತ್ಯಾದಿ ಸಮಸ್ಯೆ ಗಳನ್ನೆಲ್ಲಾ ಸರಿಪಡಿಸಿ, ಆರೋಗ್ಯಕ್ಕೆ ಸದಾ ನೆರವಿಗೆ ಬರುತ್ತದೆ.
ಆದರೆ ಒಣಶುಂಠಿಯ ವಿಷ್ಯಕ್ಕೆ ಬಂದಾಗ, ಇದರಲ್ಲಿ ಯಾವುದೇ ಸಾರವಿಲ್ಲ ಹಾಗೂ ಹಸಿ ಶುಂಠಿಯಲ್ಲಿ ಕಂಡು ಬರುವಷ್ಟು ಪ್ರಯೋಜನಗಳು ಇದರಲ್ಲಿ ಸಿಗುವುದಿಲ್ಲ ಎನ್ನುವ ತೀರ್ಮಾನಕ್ಕೆ ಬಂದು ಬಿಡುತ್ತೇವೆ. ಆದರೆ ನಿಮಗೆ ಗೊತ್ತಿರಲಿ, ನಮ್ಮ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಹಸಿ ಶುಂಠಿ ಹೇಗೆ ಪರಿಹಾರ ಒದಗಿಸುತ್ತದೆಯೋ, ಅದಕ್ಕಿಂತ ದುಪ್ಪಟ್ಟು ಪ್ರಯೋಜನಗಳನ್ನು ಒಣಶುಂಠಿಯಲ್ಲೂ ಕೂಡ, ನಾವು ನಿರೀಕ್ಷೆ ಮಾಡಿಕೊಳ್ಳಬಹುದು. ಬನ್ನಿ ಇಂದಿನ ಲೇಖನದಲ್ಲಿ ಈ ಒಣಶುಂಠಿಯಲ್ಲಿರುವ ಆರೋಗ್ಯಕಾರಿ ಪ್ರಯೋಜನಗಳು ಯಾವುದು ಎನ್ನುವುದನ್ನು ನೋಡೋಣ ಬನ್ನಿ...
ಹೊಟ್ಟೆಕೆಟ್ಟು ಹೋದ ಸಂದರ್ಭದಲ್ಲಿ....

ಹೀಗೆ ಮಾಡಿ
ಒಂದು ವೇಳೆ ಸಡನ್ ಆಗಿ, ಇಂತಹ ಸಮಸ್ಯೆ ಎದುರಾದರೆ, ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಒಂದು ಟೀ ಚಮಚ ಆಗುವಷ್ಟು ಒಣ ಶುಂಠಿ ಪುಡಿಯನ್ನು ಮಿಕ್ಸ್ ಮಾಡಿ, ದಿನದಲ್ಲಿ ಎರಡು ಮೂರು ಬಾರಿ ಕುಡಿಯುತ್ತಾ ಬಂದರೆ, ಈ ಸಮಸ್ಯೆಗೆ ನೈಸರ್ಗಿಕವಾಗಿ ಪರಿಹಾರ ಕಂಡುಕೊಳ್ಳಬಹುದು.
ನೆಗಡಿ ಕೆಮ್ಮು ಶೀತ ಸಮಸ್ಯೆಗಳು ಎದುರಾದರೆ...

ಸಾಮಾನ್ಯವಾಗಿ ಮಳೆಗಾಲದ ಸಂದರ್ಭದಲ್ಲಿ ವಾತಾವರಣದಲ್ಲಿ ಪದೇ ಪದೇ ಏರುಪೇರು ಉಂಟಾದಾಗ, ಹುಷರು ತಪ್ಪುವ ಸಾಧ್ಯತೆ ಹೆಚ್ಚಿರುತ್ತದೆ. ಮುಖ್ಯವಾಗಿ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಗಡಿ ಕೆಮ್ಮು ಶೀತ ಕೊನೆಗೆ ಜ್ವರ ಕೂಡ ಕಂಡುಬರುವ ಎಲ್ಲಾ ಲಕ್ಷಣಗಳು ಕೂಡ ಅಧಿಕ ಇರುತ್ತದೆ. ಒಂದು ವೇಳೆ ನಿಮಗೂ ಕೂಡ ಇಂತಹ ಸಮಸ್ಯೆ ಎದುರಾಗಿದ್ದರೆ, ಇಲ್ಲದೆ ನೋಡಿ, ಸಿಂಪಲ್ ಮನೆಮದ್ದು
ಹೀಗೆ ಮಾಡಿ..
ಒಂದು ಚಮಚ ಜೇನುತುಪ್ಪ, ಇಷ್ಟೇ ಪ್ರಮಾಣದಲ್ಲಿ ಹಸುವಿನ ತುಪ್ಪ ಹಾಗೂ ಒಣ ಶುಂಠಿ ಪುಡಿ ಎಲ್ಲ ವನ್ನೂ ಮಿಶ್ರಣ ಮಾಡಿ, ದಿನದಲ್ಲಿ ಒಮ್ಮೆಯಾದರೂ ಸೇವನೆ ಮಾಡುತ್ತಾ ಬಂದರೆ, ಪರಿಹಾರವನ್ನು ಕಂಡು ಕೊಳ್ಳಬಹುದು. ಮುಖ್ಯವಾಗಿ ಎದೆಯ ಭಾಗದಲ್ಲಿ ಕಂಡು ಬರುವ ಕಫವನ್ನು ಕರಗಿಸಿ, ಕೆಮ್ಮು ಶೀತ ವನ್ನು ದೂರ ಮಾಡುತ್ತದೆ.
ಅಜೀರ್ಣ ಹಾಗೂ ಮಲಬದ್ಧತೆ

ಹೀಗೆ ಮಾಡಿ
ಒಂದು ಚಮಚ ಒಣ ಶುಂಠಿ ಪುಡಿ, ಚಿಟಿಕೆಯಷ್ಟು ಹಿಂಗು ಹಾಗೂ ಸ್ವಲ್ಪ ಕಲ್ಲು ಉಪ್ಪು ಬೆರೆಸಿಕೊಂಡು ಒಂದು ಲೋಟ ಉಗುರುಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು -ಮೂರು ದಿನಗಳವರೆಗೆ ಕುಡಿಯುತ್ತಾ ಬಂದರೆ, ಈ ಸಮಸ್ಯೆ ದೂರವಾಗುತ್ತದೆ.
ಗ್ಯಾಸ್ಟ್ರಿಕ್ ಸಮಸ್ಯೆ ಕಂಡು ಬಂದರೆ

Know The Super Health Benefits Of Dry Ginger During Monsoon Season.
24-05-26 09:03 pm
HK News Staffer
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
ಬೆಂಗಳೂರು ಜಿಬಿಎ ಚುನಾವಣೆಗೆ ವಿಜಯ್ ಪಕ್ಷ ಎಂಟ್ರಿ ?...
23-05-26 11:37 pm
ಸರ್ಕಾರಿ ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ...
23-05-26 10:40 pm
ಹಾವೇರಿ ; ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದ 8 ವರ್...
22-05-26 10:24 pm
25-05-26 05:29 pm
HK News Staffer
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
ರಾಜ್ಯಸಭೆ ಚುನಾವಣೆ ; ಮಲ್ಲಿಕಾರ್ಜುನ ಖರ್ಗೆ, ದೇವೇಗೌ...
23-05-26 08:47 pm
ಸಕಲೇಶಪುರ ವಿದ್ಯುದೀಕರಣ, ಸದ್ಯದಲ್ಲೇ 'ಮಂ- ಬೆಂ' ವಂದ...
23-05-26 03:53 pm
ಬೆಲೆ ಏರಿಕೆ, ನಿರುದ್ಯೋಗ, ಮೋದಿ ವಿದೇಶ ಪ್ರವಾಸ ವಿರೋ...
23-05-26 01:59 pm
25-05-26 04:23 pm
HK News Staffer
ಅಮೆರಿಕದಲ್ಲಿ ಧರ್ಮಗುರು, ಹುಟ್ಟೂರು ಮಂಗಳೂರಿನಲ್ಲಿ ಸ...
25-05-26 01:08 pm
Mukka Accident, Mangalore: ಮುಕ್ಕ ಬಳಿ ಭೀಕರ ಅಪಘ...
24-05-26 09:22 pm
ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹ...
24-05-26 04:45 pm
ಮಂಗಳೂರು ವಿಮಾನ ದುರಂತಕ್ಕೆ 16 ವರ್ಷ ; 158 ಜೀವಗಳನ್...
22-05-26 09:47 pm
25-05-26 04:26 pm
HK News Staffer
ಭಟ್ಕಳದಲ್ಲಿ ದೇವರಕಟ್ಟೆ ನಿರ್ಮಾಣ ವಿಚಾರಕ್ಕೆ ಎರಡು ಗ...
25-05-26 02:23 pm
ಭಟ್ಕಳ ದುರಂತ ; ಮೃತರ ಸಂಖ್ಯೆ 10ಕ್ಕೆ ಏರಿಕೆ, ತಲಾ 5...
25-05-26 09:27 am
Bangalore Digital Arrest: ಅಕ್ರಮ ಹಣ ವರ್ಗಾವಣೆ ಹ...
24-05-26 09:01 pm
Assault on police Mangalore: ಗಸ್ತಿನಲ್ಲಿದ್ದ ಉರ...
24-05-26 06:44 pm