ಬ್ರೇಕಿಂಗ್ ನ್ಯೂಸ್
22-08-23 07:07 pm Source: Vijayakarnataka ಡಾಕ್ಟರ್ಸ್ ನೋಟ್
ಮಧುಮೇಹ, ಶುಗರ್ ಅಥವಾ ಸಕ್ಕರೆ ಕಾಯಿಲೆ ಎಂದು ಕರೆಯಲಾಗುವ ಈ ಆರೋಗ್ಯ ಸಮಸ್ಯೆಯು ವಿಶ್ವದ ಜನರ ನಿದ್ದೆ ಗೆಡಿಸಿದೆ. ಇದು ಸೈಲೆಂಟ್ ಕಿಲ್ಲರ್ನಂತೆ ದೇಹಕ್ಕೆ ಹಾನಿ ಮಾಡುತ್ತದೆ. ಸಕ್ಕರೆ ಕಾಯಿಲೆ ಒಮ್ಮೆ ಬಂದರೆ ಮತ್ತೆ ಅದರಿಂದ ವಿಮುಕ್ತಿ ದೊರೆಯಲು ಸಾಧ್ಯವೇ ಇಲ್ಲ. ಬದಲಾಗಿ ಆಹಾರದಿಂದ ನಿಯಂತ್ರಿಸಿಕೊಳ್ಳಬಹುದಷ್ಟೇ.
ಸಕ್ಕರೆ-ಸಿಹಿ ಪಾನೀಯಗಳು, ಟ್ರಾನ್ಸ್ ಕೊಬ್ಬುಗಳು, ಜೇನುತುಪ್ಪ, ಹಣ್ಣಿನ ರಸ ಸೇರಿದಂತೆ ಇನ್ನು ಕೆಲವು ತರಕಾರಿಗಳನ್ನು ಸೇವಿಸುವಂತಿಲ್ಲ ಎಂದು ಪರಿಗಣಿಸಲಾಗಿದೆ. ಅವುಗಳಲ್ಲಿ ಬೀಟ್ರೂಟ್ ಕೂಡ ಒಂದಾಗಿದೆ. ನಿಜಕ್ಕೂ ಬೀಟ್ರೂಟ್ ಮಧುಮೇಹಿಗಳ ಆರೋಗ್ಯಕ್ಕೆ ಮಾರಕವೇ? ಇಲ್ಲಿದೆ ಸಂಪೂರ್ಣ ಮಾಹಿತಿ.
ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ
ವಾಸ್ತವವಾಗಿ, ಮಧುಮೇಹ ಹೊಂದಿರುವವರು ಬೀಟ್ರೂಟ್ ಸೇವಿಸುವುದರಿಂದ ಸಕ್ಕರೆ ಕಾಯಿಲೆ ಅಧಿಕವಾಗುತ್ತದೆ ಎಂದು ಭಾವಿಸಲಾಗುತ್ತದೆ. ಆದರೆ ಮಿತವಾಗಿ ಬೀಟ್ರೂಟ್ ಸೇವನೆ ಮಾಡುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಈ ವರ್ಣರಂಜಿತ ತರಕಾರಿಯು ಫೈಟೊಕೆಮಿಕಲ್ ಎಂಬ ಅಂಶವನ್ನು ಹೊಂದಿದ್ದು, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತಗ್ಗಿಸಲು ಸಹಾಯ ಮಾಡುತ್ತದೆ.
ದೇಹವು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸಲು ಅಥವಾ ಉತ್ಪಾದಿಸಲು ಅಸಮರ್ಥವಾಗಿರುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಇನ್ಸುಲಿನ್ ಕಾರಣವಾಗಿದೆ. ಕಡಿಮೆ ಇನ್ಸುಲಿನ್ ಮಟ್ಟವನ್ನು ಹೊಂದಿರುವವರು ಸಾಮಾನ್ಯವಾಗಿ ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ಅನುಭವಿಸುತ್ತಾರೆ.
ಮಧುಮೇಹದ ಅಪಾಯದಿಂದ ಪಾರು ಮಾಡುತ್ತದೆ
ಸಕ್ಕರೆ ಕಾಯಿಲೆಯು ಅನೇಕ ಮಾರಣಾಂತಿಕ ಆರೋಗ್ಯ ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ ಎಂಬುದು ನಿಮಗೆ ಈಗಾಗಲೇ ತಿಳಿದಿದೆ. ಇಂತಹ ಅಪಾಯವನ್ನು ಬೀಟ್ರೂಟ್ ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ ಎಂದರೆ ನೀವು ನಂಬಲೇಬೇಕು.
ಸಕ್ಕರೆ ಕಾಯಿಲೆಯು ಮೂತ್ರಪಿಂಡಗಳು, ಕಣ್ಣು, ಹೃದಯ ಸೇರಿದಂತೆ ಅನೇಕ ಅಂಗಾಂಗಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡಬಹುದು. ಬೀಟ್ರೂಟ್ನಲ್ಲಿರುವ ಸಾಕಷ್ಟು ಪೌಷ್ಟಿಕಾಂಶವು ಇಂತಹ ಸಮಸ್ಯೆಯಿಂದ ಪಾರು ಮಾಡುತ್ತದೆ.
ರಕ್ತದೊತ್ತಡಕ್ಕೆ ರಾಮಬಾಣ
ಮಧುಮೇಹ ಮತ್ತು ರಕ್ತದೊತ್ತಡ ಒಂದೇ ನಾಣ್ಯದ ಎರಡು ಮುಖಗಳು. ಸಾಮಾನ್ಯವಾಗಿ ಅಧಿಕ ರಕ್ತದೊತ್ತಡವು ಹೃದಯದ ತೊಂದರೆ, ಪಾರ್ಶ್ವವಾಯು, ಮೂತ್ರಪಿಂಡದ ತೊಂದರೆಗಳನ್ನು ಉದ್ಭವಿಸುತ್ತದೆ.
ಇಂತಹ ಮಾರಣಾಂತಿಕ ಆರೋಗ್ಯ ಸಮಸ್ಯೆಗಳನ್ನು ಬೀಟ್ರೂಟ್ ಕಾಪಾಡುತ್ತದೆ. ಹೌದು, ಬೀಟ್ರೂಟ್ ನಿಯಮಿತವಾಗಿ ಸೇವಿಸುವುದರಿಂದ ರಕ್ತದೊತ್ತಡವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.
ಕಡಿಮೆ ಇನ್ಸುಲಿನ್ ಪ್ರತಿರೋಧ
ಮಧುಮೇಹ ಹೊಂದಿರುವವರು ಆಗಾಗ್ಗೆ ಬೀಟ್ರೂಟ್ ಜ್ಯೂಸ್ ಅನ್ನು ಸೇವಿಸುವುದರಿಂದ ಇನ್ಸುಲಿನ್ ಪ್ರತಿರೋಧವನ್ನು ನಿಯಂತ್ರಣಕ್ಕೆ ತರಬಹುದು. ಇದರ ಪರಿಣಾಮ ಸಕ್ಕರೆ ಕಾಯಿಲೆಯ ಮಟ್ಟವನ್ನು ಪರಿಣಾಮಕಾರಿಯಾಗಿ ಪ್ರತಿಬಂಧಿಸಬಹುದು.
ಮಧುಮೇಹ ಮತ್ತು ಬೀಟ್ರೂಟ್
ಮಧುಮೇಹ ಹೊಂದಿರುವವರು ಬೀಟ್ರೂಟ್ ತಿನ್ನುವುದರಿಂದ ಯಾವುದೇ ಅಪಾಯಗಳಿಲ್ಲ ಎಂದು ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ತಿಳಿಸಿದೆ. ಪ್ರತಿಯೊಬ್ಬರೂ ತಮ್ಮ ಆಹಾರದಲ್ಲಿ ಬೀಟ್ರೂಟ್ ಸೇರಿಸಬೇಕು ಎಂದು ಸಲಹೆ ಪ್ರೋತ್ಸಾಹಿಸಿದೆ.
ಸಲಹೆಗಳು
ಆದಾಗ್ಯೂ, ಮಧುಮೇಹವು ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿರಬಹುದು. ಹಾಗಾಗಿ ಯಾವುದೇ ಒಂದು ಪದಾರ್ಧವನ್ನು ಹೆಚ್ಚುವರಿಯಾಗಿ ನಿಮ್ಮ ಆಹಾರದಲ್ಲಿ ಸೇರ್ಪಡೆಗೊಳಿಸುವ ಮೊದಲು ನಿಮ್ಮ ವೈದ್ಯರ ಸಲಹೆ ಕೇಳುವುದು ಸೂಕ್ತ ಎಂದು ನಾವು ಉಲ್ಲೇಖಿಸುತ್ತೇವೆ.
Know How Beetroot Is Good For Diabetes In Kannada.
26-03-25 09:42 pm
Bangalore Correspondent
Shivamogga DYSP, Krishnamurthy, Lokayukta ar...
26-03-25 07:58 pm
BJP MLA Yatnal: ರೆಬೆಲ್ ಶಾಸಕ ಬಸನಗೌಡ ಯತ್ನಾಳ್ ವಿ...
26-03-25 06:07 pm
Big Boss Kannada, Rajat, Vinay Gowda Arrest,...
26-03-25 12:35 pm
Dr Veerendra Heggade, Sameer MD, court order:...
26-03-25 11:47 am
25-03-25 04:06 pm
HK News Desk
Justice Yashwant Varma: ಭಾರೀ ಪ್ರಮಾಣದ ನೋಟು ಸುಟ...
24-03-25 03:54 pm
Delhi High Court judge Varma: ಹೈಕೋರ್ಟ್ ಜಡ್ಜ್...
23-03-25 02:40 pm
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
ದೆಹಲಿ ಹೈಕೋರ್ಟ್ ಜಡ್ಜ್ ಮನೆಯಲ್ಲಿ ಅಗಣಿತ ನಗದು ಪತ್ತ...
21-03-25 04:46 pm
26-03-25 10:02 pm
Mangalore Correspondent
Mangalore, E Records, MLA Vedavyas Kamath: ಕಂ...
26-03-25 05:38 pm
ಮಾ.29ರಂದು ದ.ಕ. ಜಿಲ್ಲಾ ಮಟ್ಟದ ನಿವೃತ್ತ ಸರಕಾರಿ ನೌ...
26-03-25 04:23 pm
Sexual Harassment, POCSO, BJP, Mahesh Bhat, M...
26-03-25 11:16 am
UT Khader, Mangalore: ಕಠಿಣ ಕ್ರಮ ತೆಗೆದುಕೊಂಡರೆ...
24-03-25 03:56 pm
26-03-25 11:19 pm
Bangalore Correspondent
ಮನೆ ಮಾಲೀಕನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ ; ಯೋ...
26-03-25 11:08 pm
Mangalore Dharmasthala PSI P Kishor, Wife Att...
26-03-25 08:38 pm
ಸೈಬರ್ ಕೇಸಿನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲು ಲಂಚ...
26-03-25 08:00 pm
Mangalore Bank Fraud Case, Police; ಬ್ಯಾಂಕ್ ದೋ...
25-03-25 10:09 pm