ಕುಕ್ಕರ್ ಬ್ಲಾಸ್ಟ್ ಪ್ರಕರಣ ; ಆರೋಪಿ ಶಾರೀಕ್ ಗುರುತು ಪತ್ತೆಹಚ್ಚಿದ ಕುಟುಂಬಸ್ಥರು, ಮೂವರು ಸಹವರ್ತಿಗಳು ವಶಕ್ಕೆ 

21-11-22 12:05 pm       Mangalore Correspondent   ಕರಾವಳಿ

ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಸುಟ್ಟ ಗಾಯಗಳಿಂದ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯನ್ನು ಮೊಹಮ್ಮದ್ ಶಾರೀಕ್ ಎಂದು ಆತನ ಕುಟುಂಬಸ್ಥರು ದೃಢಪಡಿಸಿದ್ದಾರೆ. 

ಮಂಗಳೂರು, ನ.21 : ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಸುಟ್ಟ ಗಾಯಗಳಿಂದ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯನ್ನು ಮೊಹಮ್ಮದ್ ಶಾರೀಕ್ ಎಂದು ಆತನ ಕುಟುಂಬಸ್ಥರು ದೃಢಪಡಿಸಿದ್ದಾರೆ. 

ತೀರ್ಥಹಳ್ಳಿಯಿಂದ ಶಾರೀಕ್ ಕುಟುಂಬಸ್ಥರನ್ನು ಪೊಲೀಸರು ಮಂಗಳೂರಿಗೆ ಕರೆಸಿದ್ದು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್ ನನ್ನು ಕುಟುಂಬಸ್ಥರು ಗುರುತು ಹಚ್ಚಿದ್ದಾರೆ. ಆಬಳಿಕ ಕುಟುಂಬಸ್ಥರನ್ನು ಮಂಗಳೂರು ಪೊಲೀಸರು ಕಮಿಷನರ್ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಆಟೋ ಬ್ಲಾಸ್ಟ್ ಪ್ರಕರಣದಲ್ಲಿ ತೀವ್ರ ಸುಟ್ಟ ಗಾಯಗೊಂಡಿದ್ದ ವ್ಯಕ್ತಿಯನ್ನು ಮೇಲ್ನೋಟಕ್ಕೆ ಪೊಲೀಸರು ಮೊಹಮ್ಮದ್ ಶಾರೀಕ್ ಎಂದು ಗುರುತಿಸಿದ್ದರು. ಇದೀಗ ಆತನ ಕುಟುಂಬಸ್ಥರು ಆಗಮಿಸಿ, ದೃಢ ಮಾಡಿದ್ದಾರೆ. 

ಇದೇ ವೇಳೆ, ಮೈಸೂರಿನಲ್ಲಿ ಆತನ‌ ಸಹವರ್ತಿಯಾಗಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದು ಮಂಗಳೂರಿಗೆ ಕರೆತಂದಿದ್ದಾರೆ ಎನ್ನುವ ಮಾಹಿತಿಗಳಿವೆ. ಶಾರೀಕ್ ಗೋಡೆ ಬರಹ ಪ್ರಕರಣ ಮತ್ತು ಶಿವಮೊಗ್ಗದಲ್ಲಿ ಬಾಂಬ್ ಬ್ಲಾಸ್ಟ್ ತರಬೇತಿ ಪ್ರಕರಣದಲ್ಲಿ ಆರೋಪಿಯಾಗಿದ್ದ. ಎರಡು ತಿಂಗಳಿನಿಂದ ಆತನ ಪತ್ತೆಗೆ ಶಿವಮೊಗ್ಗ ಪೊಲೀಸರು ಬಲೆ ಬೀಸಿದ್ದರು. ಆದರೆ ಶಾರೀಕ್ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ. ಎಡಿಜಿಪಿ ಅಲೋಕ್ ಕುಮಾರ್ ತನಿಖೆಯ ಮೇಲುಸ್ತುವಾರಿ ವಹಿಸಿದ್ದಾರೆ.

 

Autorickshaw bomb blast in Mangalore, Mohammed Shariq mastermind has been arrested after police have found enough evidence. Parents of Shariq had reached Fr Mullers hospital where Shariq has been admitted. Shariq was the main accused in the pro-terrorism graffiti on walls in Mangaluru. He was released on bail in the case. He had been booked under the Unlawful Activities (Prevention) Act (UAPA) but was out on bail in the case.