ಸಾಂಸ್ಕೃತಿಕ ಜಗತ್ತಿಗೆ ಬಲಿಪ ಭಾಗವತರ ಕೊಡುಗೆ ಅನನ್ಯ ; ಟ್ವೀಟ್ ನಲ್ಲಿ ಸ್ಮರಿಸಿದ ಪ್ರಧಾನಿ ಮೋದಿ 

17-02-23 11:29 am       Mangalore Correspondent   ಕರಾವಳಿ

ಖ್ಯಾತ ಯಕ್ಷಗಾನ ಭಾಗವತ ಬಲಿಪ ನಾರಾಯಣ ಭಟ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. 

ಮಂಗಳೂರು, ಫೆ.17: ಖ್ಯಾತ ಯಕ್ಷಗಾನ ಭಾಗವತ ಬಲಿಪ ನಾರಾಯಣ ಭಟ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. 

ಸಾಂಸ್ಕೃತಿಕ ಜಗತ್ತಿಗೆ ಬಲಿಪ ಭಾಗವತರ ಕೊಡುಗೆ ಅನನ್ಯ. ಅಚ್ಚಳಿಯದ ಹೆಗ್ಗುರುತು ಮೂಡಿಸಿದ್ದಾರೆ. ಯಕ್ಷಗಾನದ ಭಾಗವತಿಕೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ತಮ್ಮ ವಿಶಿಷ್ಟ ಶೈಲಿಯ ಭಾಗವತಿಕೆಯಿಂದ ಜನಮನ್ನಣೆ ಗಳಿಸಿದ್ದರು. ಬಲಿಪರ ಹಾಡುಗಾರಿಕೆ, ಯಕ್ಷಗಾನ ಕ್ಷೇತ್ರದಲ್ಲಿ ಮಾಡಿದ ಸಾಧನೆ ಮುಂದಿನ ಜನಾಂಗಕ್ಕೆ ಪ್ರೇರಣೆಯಾಗಲಿದೆ. ಅವರ ಅಗಲುವಿಕೆಗೆ ಕಂಬನಿ ಮಿಡಿಯುತ್ತೇನೆ, ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಬಲಿಪ ಭಾಗವತರನ್ನು ಸ್ಮರಿಸಿದ್ದಾರೆ.

ಯಕ್ಷಗಾನ ಭಾಗವತಿಕೆಯಲ್ಲಿ ತಮ್ಮದೇ ವಿಶಿಷ್ಟ ಕಂಠ ಸಿರಿ ಮತ್ತು ಹಾಡುಗಾರಿಕೆ ಶೈಲಿಯಿಂದ‌ ಬಲಿಪ ನಾರಾಯಣ ಭಟ್ ವಿಶೇಷ ಸಾಧನೆ ಮಾಡಿದ್ದಾರೆ. ನಿವೃತ್ತಿಯ ಬಳಿಕ ಮೂಡುಬಿದ್ರೆಯ ನೂಯಿ ಎಂಬಲ್ಲಿ ನೆಲೆಸಿದ್ದ ಬಲಿಪರು ನಿನ್ನೆ ಸಂಜೆ ಇಹಲೋಕ ತ್ಯಜಿಸಿದ್ದರು.

ಮರೆಯಾಯ್ತು ಯಕ್ಷಗಾನದ ಕಂಚಿನ ಸಿರಿಕಂಠ ; ಬಲಿಪ ನಾರಾಯಣ ಭಾಗವತರು ಇನ್ನಿಲ್ಲ

Mangalore Yakshagana Bhagavatha Balipa Narayana Bhagavatha no more, modi tweets condolences