ಬ್ರೇಕಿಂಗ್ ನ್ಯೂಸ್
13-03-23 01:44 pm Mangalore Correspondent ಕರಾವಳಿ
ಮಂಗಳೂರು, ಮಾ.13 : ಅಲ್ಲಾನಿಗೆ ಕಿವಿ ಕೇಳುವುದಿಲ್ಲವೇ, ಕಿವುಡನೇ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಪತ್ರಕರ್ತರು ತರಾಟೆ ತೆಗೆದುಕೊಂಡಿದ್ದಾರೆ.
ಸುದ್ದಿಗೋಷ್ಟಿ ನಡೆಸಿದ ಅವರಲ್ಲಿ ನಿಮಗೆ ಅಭಿವೃದ್ಧಿ ವಿಚಾರ ಇಲ್ಲ, ಜನರನ್ನು ಪ್ರಚೋದನೆ ಮಾಡ್ತೀರಿ, ಸೌಹಾರ್ದ ಕೆಡಿಸ್ತೀರಿ ಎಂದು ಪತ್ರಕರ್ತರು ಪ್ರಶ್ನೆ ಮಾಡಿದರು. ಪ್ರಶ್ನೆಗೆ ನೇರ ಉತ್ತರ ನೀಡದೆ ನುಣುಚಿಕೊಂಡ ಈಶ್ವರಪ್ಪ, ಸುಪ್ರೀಂ ಕೋರ್ಟ್ ಆದೇಶ ಇದೆ, ಅದು ಮುಂದೆ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ ಎನ್ನುವ ನೆಲೆಯಲ್ಲಿ ಹೇಳಿದ್ದೇನೆ. ಪರೀಕ್ಷೆ ಸಮಯದಲ್ಲಿ ಮಕ್ಕಳಿಗೆ ಇದರಿಂದ ತೊಂದರೆಯಾಗಲ್ಲವೇ? ದಿನಾ ಬೆಳಗ್ಗೆ ರಾತ್ರಿ ಎನ್ನದೆ ಆಜಾನ್ ಕೂಗುತ್ತಾರೆ, ಇದೆಲ್ಲ ನಿಲ್ಲಬೇಕು. ಇವರಿಗೆ ಮೂರ್ನಾಲ್ಕು ಮೈಕ್ ಕಟ್ಟಿ ಬೊಬ್ಬೆ ಹೊಡೆಯಬೇಕೇ, ಹಾಗಾಗಿ ಕಿವುಡನೇ ಎಂದು ಕೇಳಿದ್ದೇನೆ. ನಂಗೆ ಭಾಷಣ ಮಾಡುತ್ತಿದ್ದಾಗ ಆಜಾನ್ ಕೇಳಿ ತಲೆನೋವು ಬಂತು, ಹಾಗೆ ಹೇಳಿದೆ ಎಂದು ಸಮರ್ಥನೆ ಮಾಡಿಕೊಂಡರು.
ನೀವು ಹಿಂದುಗಳ ಭಜನೆ, ಉತ್ಸವಕ್ಕೂ ಮೈಕ್ ಬೇಡ ಅಂತೀರಾ ಎಂದು ಕೇಳಿದ್ದಕ್ಕೆ, ಅದು ಯಾವಾಗಲೋ ಒಂದು ದಿನ ಆಗುವುದು, ಇಡೀ ದಿನ ಇರುವುದಿಲ್ಲ. ಭಾರತೀಯ ಸಂಸ್ಕೃತಿಯ ಬಗ್ಗೆ ನನ್ನ ವಿರೋಧ ಇಲ್ಲ ಎಂದರು. ಮುಸ್ಲಿಮರ ಓಟು ಬೇಡ ಎಂದಿದ್ದೀರಲ್ಲಾ ಎಂದಿದ್ದಕ್ಕೆ, ನಾವು ಎಲ್ಲ ಮುಸ್ಲಿಮರ ಓಟು ಬೇಡ ಅನ್ನಲ್ಲ, ರಾಷ್ಟ್ರೀಯವಾದಿ ಮುಸ್ಲಿಮರು ಮೋದಿ ಕೆಲಸ ನೋಡಿ ನಮಗೆ ಓಟು ಹಾಕ್ತಾರೆ. ನನ್ನ ಕ್ಷೇತ್ರದಲ್ಲಿ 60 ಮುಸ್ಲಿಮರ ವಾರ್ಡಿನಲ್ಲಿ ನನಗೆ ಓಟು ಬೀಳಲ್ಲ, ಆದರೆ ಅವರಿಗೆ ಸವಲತ್ತು ಕೊಡಿಸುತ್ತೇನೆ. ಮುಸ್ಲಿಂ ಮಹಿಳೆಯರು ಬುರ್ಖಾ ತೆಗೆದಿಟ್ಟು ಬಂದು ಅಣ್ಣ ಅಂತ ಕೇಳುತ್ತಾರೆ. ಮನವಿ ಹಿಡಿದು ಬಂದವರನ್ನು ಯಾರಿಗೂ ಬೇಡ ಎಂದಿಲ್ಲ. ಶಾಸಕನಾಗಿ ಎಲ್ಲರ ಪ್ರತಿನಿಧಿ ಆಗಿರುತ್ತೇನೆ, ಜಾತಿ, ಧರ್ಮಕ್ಕೆ ಪ್ರತಿನಿಧಿ ಅಲ್ಲ ಎಂದರು.
ನಿಮಗೆ ಈ ಬಾರಿ ಟಿಕೆಟ್ ಸಿಗುವ ಗ್ಯಾರಂಟಿ ಇದೆಯೇ ಎಂದು ಕೇಳಿದ್ದಕ್ಕೆ, ಯಾಕೆ ಹಾಗೆ ಕೇಳ್ತೀರಿ. ಯಾರಿಗಾದರೂ ಸಿಗುತ್ತದೆ. ಬಿಜೆಪಿಯಲ್ಲಿ 74 ವರ್ಷ ಮೇಲ್ಪಟ್ಟವರಿಗೆ ಟಿಕೆಟ್ ಇಲ್ಲವೆಂದು ಕಾನೂನು ಇಲ್ಲ. ಹೈಕಮಾಂಡ್ ನಾಲ್ಕೈದು ಬಾರಿ ಸರ್ವೆ ಮಾಡಿದೆ, ಯಾರು ಗೆಲ್ತಾರೋ ಅವರಿಗೆ ಟಿಕೆಟ್ ಕೊಡುತ್ತಾರೆ ಎಂದರು. ನಿಮ್ಮ ಮಗನಿಗೆ ಟಿಕೆಟ್ ಕೇಳ್ತೀರಾ ಎಂದು ಕೇಳಿದ್ದಕ್ಕೆ, ಒಂದು ಮನೆಯಲ್ಲಿ ಎರಡು ಟಿಕೆಟ್ ಕೊಡಲ್ಲ ಎನ್ನುವ ಮೂಲಕ ತನಗೆ ಸಿಗದಿದ್ದರೆ ಮಗನಿಗೆ ಅನ್ನುವ ಸುಳಿವು ನೀಡಿದರು. 74 ವರ್ಷ ಮೀರಿದವರಿಗೆ ಟಿಕೆಟ್ ಇಲ್ಲ ಎಂತಾರಲ್ಲಾ ಎಂದು ಕೇಳಿದ್ದಕ್ಕೆ, 77 ವರ್ಷದ ಹೊರಟ್ಟಿಗೆ ಕೊಟ್ಟಿದ್ದಾರೆ. ಅವರನ್ನು ಸಭಾಪತಿ ಮಾಡಿದ್ದಾರೆ. ಅಂಥ ನಿಯಮ, ಕಾನೂನು ಬಿಜೆಪಿಯಲ್ಲಿ ಇಲ್ಲ. ಬಿಜೆಪಿ ನಾಯಕರಿಗೆ ವಯಸ್ಸಾಗಲ್ಲ. ಸಾಯೋ ವರೆಗೂ ರಾಜಕಾರಣ ಮಾಡಲು ಹಿರಿಯರು ಹೇಳಿದ್ದಾರೆ ಎಂದರು.
Without Mics and speakers will #Azaan not be heard questions BJP leader #ksEshwarappa in #Mangalore at #VijaySankalpRathYatra. Is your God deaf that your prayers can't be heard without #azan he questioned. #bjp #bjpnews #BreakingNews pic.twitter.com/YZMSUaPP7c
— Headline Karnataka (@hknewsonline) March 12, 2023
Controversial statement on Azan and Allah by Eshwarappa, Journalists question about destroying peace in Mangalore for which he justified stating he got severe headache listening to Azan during the speech.This is my view on banning loudspeakers. This isn't a competition between Muslims calling for prayers through loudspeakers and Hindus chanting Hanuman Chalisa. And because of the Azaan, it is an issue for students, patients and the elderly," he said.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm