ಬ್ರೇಕಿಂಗ್ ನ್ಯೂಸ್
16-09-23 04:05 pm Mangalore Correspondent ಕರಾವಳಿ
ಮಂಗಳೂರು, ಸೆ.16: ವಾರದ ಹಿಂದೆ ನಾಗರ ಹಾವಿಗೆ ಡೀಸೆಲ್ ಎರಚಿ ಹಾವನ್ನು ನರಳುವಂತೆ ಮಾಡಿದ್ದ ವ್ಯಕ್ತಿಯೊಬ್ಬ ಈಗ ಆ ಹಾವಿನಂತೆಯೇ ಉರಿಯಿಂದ ನರಳತೊಡಗಿದ ಘಟನೆ ಕಿನ್ನಿಗೋಳಿಯಲ್ಲಿ ನಡೆದಿದೆ.
ಕಿನ್ನಿಗೋಳಿಯ ಬಹುಮಹಡಿ ಕಟ್ಟಡದ ಸಮೀಪ ಸೆ.5ರಂದು ನಾಗರ ಹಾವು ಕಂಡುಬಂದಿತ್ತು. ಕಟ್ಟಡದಲ್ಲಿ ವಾಚ್ ಮೇನ್ ಆಗಿದ್ದ ಬೆಳಗಾವಿ ಮೂಲದ ವ್ಯಕ್ತಿ ಹಾವಿಗೆ ಡೀಸೆಲ್ ಎರಚಿದ್ದು, ಕೂಡಲೇ ಹಾವು ಮೈ ಉರಿಯಿಂದ ಒದ್ದಾಡತೊಡಗಿತ್ತು. ಸ್ಥಳೀಯರು ಬಳಿಕ ಉರಗ ರಕ್ಷಕ ಯತೀಶ್ ಕಟೀಲು ಅವರಿಗೆ ವಿಷಯ ತಿಳಿಸಿದ್ದರು. ಅವರು ಹಾವನ್ನು ಹಿಡಿದು ಚಿಕಿತ್ಸೆ ನೀಡಿದ್ದಲ್ಲದೆ, ಮೈಗೆ ಶಾಂಪೂ ಹಾಕಿ ತೊಳೆದು ಶುಚಿ ಮಾಡಿದ್ದರು. ಆನಂತರ ಹಾವನ್ನು ಕಾಡಿಗೆ ಬಿಟ್ಟು ಬಂದಿದ್ದರು.
ಆದರೆ ಹಾವಿಗೆ ಡಿಸೇಲ್ ಎರಚಿದ್ದ ಕಾರ್ಮಿಕ ವ್ಯಕ್ತಿಗೆ ವಾರ ಕಳೆಯುವಷ್ಟರಲ್ಲಿ ಮೈ ಉರಿ ಬರತೊಡಗಿದೆ. ಮೈಯಲ್ಲಿ ಕೆಂಪು ಬೊಕ್ಕ ಕಂಡುಬಂದಿದ್ದು ಉರಿಯಿಂದ ನರಳಲು ಶುರು ಮಾಡಿದ್ದ. ಬಳಿಕ ಆತನ ಕುಟುಂಬಸ್ಥರು ಊರಿಗೆ ಮರಳಲು ತಿಳಿಸಿದಂತೆ, ಕುಟುಂಬ ಸಮೇತ ವಾಚ್ ಮೆನ್ ಕೆಲಸ ಬಿಟ್ಟು ಊರಿಗೆ ತೆರಳಿದ್ದಾರೆ.
ತುಳುನಾಡಿನಲ್ಲಿ ನಾಗರ ಹಾವನ್ನು ದೇವರೆಂದೇ ಪೂಜಿಸುತ್ತಾರೆ. ಹಾವಿಗೆ ಕಲ್ಲು ಹೊಡೆಯುವುದು, ಬಿಸಿ ನೀರು ಎರಚಿದರೂ ದೋಷ ಬರುತ್ತೆ ಎಂಬ ನಂಬಿಕೆಯಿದೆ. ಬೆಳಗಾವಿಯ ವ್ಯಕ್ತಿ ಡೀಸೆಲ್ ಎರಚಿದ್ದರಿಂದ ಹಾವು ಉರಿಯಿಂದ ಸಾಯುವ ಸ್ಥಿತಿ ಬಂದಿತ್ತು. ಇದೇ ಕಾರಣದಿಂದ ಹಾವಿನ ದೋಷ ಆ ವ್ಯಕ್ತಿಗೆ ತಾಗಿದೆ ಎನ್ನುವ ಮಾತು ಸ್ಥಳೀಯರಿಂದ ಕೇಳಿಬಂದಿದೆ.
Mangalore Man suffers with burning sensation after throwing diesel on snake Cobra in Kinnigoli.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
04-09-26 08:14 pm
HK News Staffer
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
04-09-26 04:44 pm
HK News Staffer
Blinkit Raid, Mangalore: ಬ್ಲಿಂಕ್ ಇಟ್ ಆನ್ಲೈನ್...
03-09-26 10:19 pm
ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತ...
03-09-26 09:10 pm
ಅಳಿವೆ ಬಾಗಿನಲ್ಲಿ ಹೂಳೆತ್ತದ ಕಾರಣ ಭಾರೀ ದುರಂತ ; ಮರ...
03-09-26 03:55 pm
Mangalore, Bajpe Kateel Road Closed: ಬಜ್ಪೆ -...
02-09-26 10:51 pm
04-09-26 08:16 pm
HK News Staffer
ಪಣಂಬೂರಿನಲ್ಲಿ ಚಾಲಕನ ಧಾವಂತಕ್ಕೆ ಬಸ್ ಪಲ್ಟಿ ; ಅಪಾಯ...
04-09-26 10:55 am
NITK, Mangalore, Forgery: ಎನ್ ಸಿಸಿ ಶಿಬಿರಗಳಲ್ಲ...
03-09-26 09:51 pm
ಅನ್ನಭಾಗ್ಯದ ಅಕ್ಕಿ ವಿಚಾರದಲ್ಲಿ ಕೊಲೆ, ಸುಲಿಗೆ ಬೆದರ...
03-09-26 09:36 pm
ಮುಲ್ಕಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನಕ್ಕೆ ಕನ್ನ ;...
03-09-26 09:15 pm