ಬ್ರೇಕಿಂಗ್ ನ್ಯೂಸ್
02-10-23 03:44 pm Mangalore Correspondent ಕರಾವಳಿ
ಉಳ್ಳಾಲ, ಅ.2: ಗಾಂಧಿ ಜಯಂತಿಯಂದು ಮದ್ಯ ಮಾರಾಟ ನಿಷೇಧವಿದ್ದರೂ ತೊಕ್ಕೊಟ್ಟಿನ ವಿನಮ್ರ ಬಾರಲ್ಲಿ ಎಗ್ಗಿಲ್ಲದೆ ಮದ್ಯ ಮಾರಾಟ ನಡೆಸಲಾಗಿದ್ದು ಕ್ವಾಟ್ರಿಗೆ 40 ರೂಪಾಯಿ ಹೆಚ್ಚುವರಿ ವಸೂಲಿ ಮಾಡಿದರೂ ಪಾನಪ್ರಿಯರು ಹಿಡಿ ಶಾಪ ಹಾಕಿ ಮದ್ಯ ಖರೀದಿಸಿದ್ದಾರೆ.
ರಾಷ್ಟ್ರಪಿತ ಗಾಂಧಿ ಜಯಂತಿಯಂದು ಮದ್ಯ ಮಾರಾಟ ನಿಷೇಧ ನಡುವೆ ತೊಕ್ಕೊಟ್ಟಿನ ವಿನಮ್ರ ಬಾರಲ್ಲಿ ಎಗ್ಗಿಲ್ಲದೆ ಮದ್ಯ ಮಾರಾಟ ನಡೆಯುತ್ತಿದೆ. ಮದ್ಯ ನಿಷೇಧದ ಲಾಭ ಎತ್ತಿದ ವಿನಮ್ರ ಬಾರ್ ನವರು ಪ್ರತಿ ಮದ್ಯದ ಬ್ರಾಂಡಿಗೂ ಕ್ವಾಟ್ರಿಗೆ ನಲ್ವತ್ತರಂತೆ ಹೆಚ್ಚುವರಿ ಹಣವನ್ನ ಪೀಕಿಸಿ ಮದ್ಯ ಮಾರಾಟ ಮಾಡಿದ್ದಾರೆ. ಹೆಚ್ಚುವರಿ ಹಣ ದೋಚುತ್ತಿರುವುದರ ವಿರುದ್ಧ ಆಕ್ರೋಶಗೊಂಡ ಪಾನ ಪ್ರಿಯರೋರ್ವರು ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನ ವೀಡಿಯೋ ಮಾಡಿದ್ದಾರೆ.


ವಿನಮ್ರ ಬಾರ್ ನಲ್ಲಿ ಬೆಳ್ಳಂಬೆಳಗ್ಗೆಯೇ ಕುಡಿದು ತೂರಾಡುವುದು ಸಾಮಾನ್ಯ ಎನ್ನುವಂಥ ಸ್ಥಿತಿಯಿದೆ. ಬಾರ್ ಬೆಳಗ್ಗೆ 10 ಗಂಟೆ ನಂತರವೇ ತೆರೆಯಬೇಕೆಂದು ಅಬಕಾರಿ ಇಲಾಖೆ ನಿಯಮ ಇದ್ದರೂ ಈ ಬಾರಲ್ಲಿ ಮಾತ್ರ ಬೆಳಗ್ಗೆ 8 ಗಂಟೆಯಿಂದಲೇ ಮದ್ಯ ದೊರೆಯುತ್ತದೆ. ಅದಕ್ಕಾಗಿ ಹಗಲು ಕುಡುಕರಲ್ಲಿ ಬಾರ್ ನಲ್ಲಿ ಹೆಚ್ಚುವರಿ ದರವನ್ನು ಪೀಕಿಸುತ್ತಾರೆಂಬ ಆರೋಪ ಇದೆ. ಇಲ್ಲಿ ಬೆಳಗ್ಗೆಯೇ ಕುಡಿದು ಟೈಟಾಗುವ ಯುವಕರು ಬಾರ್ ಎದುರಲ್ಲೇ ಟೆಂಟ್ ಹಾಕಿ ಲೂಡೊ ಆಡುತ್ತಾರೆ. ನಿತ್ಯವೂ ಬೆಳ್ಳಂಬೆಳಗ್ಗೆ ಎಣ್ಣೆ ಕುಡಿಸುವ ಬಾರ್ ಮಹಾತ್ಮನ ಜನ್ಮ ದಿನಾಚರಣೆಯಂದು ಎಣ್ಣೆ ಪ್ರಿಯರಿಂದಲೇ ಡಬಲ್ ವಸೂಲಿ ಮಾಡಿ ಮದ್ಯ ನಿಷೇಧ ನಿಯಮವನ್ನೇ ಗಾಳಿಗೆ ತೂರಿದ್ದು ವಿಪರ್ಯಾಸ.
Mangalore Vinamra Bar opens at Thokottu amid Gandhi Jayanti lewing 40 Rs. More than the MRP price.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
10-01-26 03:22 pm
HK News Desk
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
10-01-26 10:45 pm
Mangalore Correspondent
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
Dr Meenakshi Jain at Mangaluru Lit Fest: ಉಪನಿ...
10-01-26 07:21 pm
ಕರಾವಳಿ ಟೂರಿಸಂ ಅಭಿವೃದ್ಧಿಗೆ ಜನಪ್ರನಿಧಿಗಳು, ಉದ್ಯಮ...
10-01-26 06:23 pm
ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ...
10-01-26 06:07 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm