ಬ್ರೇಕಿಂಗ್ ನ್ಯೂಸ್
09-10-23 04:17 pm Mangalore Correspondent ಕರಾವಳಿ
ಉಳ್ಳಾಲ, ಅ.9: ಖಾಸಗಿ ಮೆಡಿಕಲ್ ಮಾಫಿಯಾಗಳ ಮುಂದೆ ಸರಕಾರಿ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳು ದುರ್ಬಲಗೊಳ್ಳುತ್ತಿದ್ದು ಬಡವರು ಪ್ರತಿ ನಿತ್ಯ ತಮಗೆ, ತಮ್ಮವರಿಗೆ ವಕ್ಕರಿಸಿರುವ ಮಾರಕ ರೋಗ ವಾಸಿ ಮಾಡಲು ಜಾಲತಾಣಗಳಲ್ಲಿ ಭಿಕ್ಷೆ ಬೇಡುವ ಪರಿಸ್ಥಿತಿಯನ್ನ ನಾವೆಲ್ಲ ನೋಡುತ್ತಿದ್ದೇವೆ, ಬಡವರ ದೇಹಗಳು ಕೋಟಿ ರೂಪಾಯಿಗಳನ್ನ ವ್ಯಯಿಸಿ ಖಾಸಗಿ ಮೆಡಿಕಲ್ ಕಾಲೇಜು ಕಲಿಯುತ್ತಿರುವ ವಿದ್ಯಾರ್ಥಿಗಳ ಅಧ್ಯಯನದ ಪ್ರಯೋಗದ ವಸ್ತುವಾಗಿದೆ ಎಂದು ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಆಕ್ರೋಶ ವ್ಯಕ್ತಪಡಿಸಿದರು.
ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ನುರಿತ ವೈದ್ಯರು, ಸಿಬ್ಬಂದಿಗಳ ಸಹಿತ ಮೂಲಭೂತ ಸೌಲಭ್ಯ ಒದಗಿಸಲು ಆಗ್ರಹಿಸಿ ಡಿವೈಎಫ್ ಐ ಉಳ್ಳಾಲ ತಾಲೂಕು ಸಮಿತಿ ವತಿಯಿಂದ ಸೋಮವಾರ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.


ಉಳ್ಳಾಲ ತಾಲೂಕಿನ ಏಕೈಕ ಆರೋಗ್ಯ ಕೇಂದ್ರವನ್ನ ದುಸ್ಥಿತಿಗೆ ತಳ್ಳಲು ಇಲ್ಲಿನ ಮೆಡಿಕಲ್ ಮಾಫಿಯಾವೇ ಕಾರಣ. ಕ್ಷೇತ್ರದ ಶಾಸಕರಾಗಿರುವ ಯು.ಟಿ ಖಾದರ್ ಅವರು ಆರೋಗ್ಯ ಸಚಿವರಾಗಿದ್ದಾಗಲೇ ಇಲ್ಲಿಗೆ ಖಾಯಂ ವೈದ್ಯರು, ಸಿಬ್ಬಂದಿಗಳನ್ನ ನೇಮಿಸಬಹುದಿತ್ತು. ಈಗ ಖಾದರ್ ಅವರು ಮತ್ತೆ ಗೆದ್ದು ವಿಧಾನಸಭೆಯ ಸಭಾದ್ಯಕ್ಷರಾಗಿದ್ದರೂ ತಮ್ಮ ಕ್ಷೇತ್ರದ ಆರೋಗ್ಯ ಕೇಂದ್ರಕ್ಕೆ ಮೂಲಭೂತ ಸೌಕರ್ಯಗಳನ್ನ ಪೂರೈಸಲು ಸಂಪೂರ್ಣ ವಿಫಲರಾಗಿದ್ದಾರೆ. ಇಲ್ಲಿಗೆ ಅಪರೂಪಕ್ಕೆ ಭೇಟಿ ನೀಡುವ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಂದ ಮಾತ್ರೆಗಳನ್ನ ತಗೊಳ್ಳುವ ದುಸ್ಥಿತಿ ಜನರಿಗೆ ಬಂದಿದೆ. ರೋಗಿಗಳಿಗೆ ಔಷಧಿಯೂ ಸಿಗಲ್ಲ, ರೋಗಿಗಳನ್ನ ಇಲ್ಲಿಂದ ಬೇರೆಡೆಗೆ ಸಾಗಿಸಲು 108 ತುರ್ತು ವಾಹನವೂ ಇಲ್ಲ. ಹೆರಿಗೆಯಾದ ಬಾಣಂತಿಯರಿಗೆ ಬಿಸಿ ನೀರಿನ ವ್ಯವಸ್ಥೆ ಇಲ್ಲ. ಹೆರಿಗೆ ಆದವರಿಗೆ ತಾಯಿ ಕಾರ್ಡ್ ಕೊಡಿಸಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಇಮ್ತಿಯಾಝ್ ಆರೋಪಿಸಿದರು.

ಯು.ಟಿ.ಖಾದರ್ ಅವರೇ ತಾವು ಕ್ಷೇತ್ರದ ಜನರ ಮತಗಳಿಂದ ಜಯ ಗಳಿಸಿದ್ದೀರಿ ಹೊರತು ಖಾಸಗಿ ಆಸ್ಪತ್ರೆ ಮಾಲಕರಿಂದಲ್ಲ. ತಮ್ಮ ಕ್ಷೇತ್ರದ ಬಡವರು ಆರೋಗ್ಯ ರಕ್ಷಣೆಗಾಗಿ ಯಾರಲ್ಲೂ ಕೈ ಚಾಚಬಾರದೆಂಬ ದೃಷ್ಟಿಯನ್ನಿಟ್ಟು ಸಮುದಾಯ ಆರೋಗ್ಯ ಕೇಂದ್ರಗಳನ್ನ ಬಲಪಡಿಸಿ. ತಮ್ಮ ಜೀವಿತಾವಧಿಯಲ್ಲಿ ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜೊಂದನ್ನ ನಿರ್ಮಿಸಿ ಸಾರ್ಥಕತೆ ಪಡೆಯಿರಿ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ನಮ್ಮ ಜಿಲ್ಲೆಗೆ ಉಸ್ತುವಾರಿಯಾಗಿದ್ದು ಖಾಸಗಿ ಮೆಡಿಕಲ್ ಕಾಲೇಜುಗಳ ಲಾಬಿಯನ್ನ ಅವರು ಹೇಗೆ ಎದುರಿಸುತ್ತಾರೆ ಎಂದು ನೋಡುತ್ತೇವೆ ಎಂದರು.

ಅಂಬುಲೆನ್ಸ್, ವೈದ್ಯರು ಪ್ರತ್ಯಕ್ಷ
ಇಂದು ಸಮುದಾಯ ಆರೋಗ್ಯ ಕೇಂದ್ರದ ಎದರು ಪ್ರತಿಭಟನೆ ಇರುವುದನ್ನು ತಿಳಿದು ತಾಲೂಕು ಆರೋಗ್ಯಾಧಿಕಾರಿ ಸಹಿತ ವೈದ್ಯರುಗಳು ಬೀಡು ಬಿಟ್ಟಿದ್ದು, ಯಾವತ್ತೂ ಇರದ 108 ತುರ್ತು ಅಂಬುಲೆನ್ಸ್ ವಾಹನವೂ ಆಸ್ಪತ್ರೆ ಮುಂದುಗಡೆ ಠಿಕಾಣಿ ಹೂಡಿದ್ದು ವ್ಯವಸ್ಥೆ ಸರಿಪಡಿಸಲು ಜನಾಕ್ರೋಶವೇ ಮದ್ದು ಎಂದು ತೋರಿಸಿದಂತಿದೆ.
Dyfi district president B K Imtiyaz said that government hospitals and community health centres are weakening in the face of private medical mafias and we are witnessing the poor begging on social media every day to cure the deadly disease that has afflicted themselves and their own.
10-04-26 06:53 pm
HK News Desk
ಚಿಕ್ಕಮಗಳೂರು ; ಚಂದ್ರದ್ರೋಣ ಪರ್ವತ ಬಳಿ ನಾಪತ್ತೆಯಾಗ...
10-04-26 03:25 pm
PUC Result 2026, State Topper: ಪಿಯುಸಿ ರಿಸಲ್ಟ್...
09-04-26 09:30 pm
ಗ್ಯಾರಂಟಿ ಯೋಜನೆಗಳ ಬಗ್ಗೆ ವರದಿ ಕೇಳಿದ ಚುನಾವಣಾ ಆಯೋ...
09-04-26 04:33 pm
ಶರಣ್ಯ ನಾಪತ್ತೆ ಪ್ರಕರಣದಲ್ಲಿ ಟ್ವಿಸ್ಟ್ ; ನಕ್ಸಲ್ ಲ...
09-04-26 03:37 pm
11-04-26 09:05 pm
Giridhar Shetty
ಚಂದ್ರನ ಸುತ್ತಿ ಮರಳಿದ ನಾಸಾದ ಗಗನಯಾತ್ರಿಗಳು ; ಸುರಕ...
11-04-26 12:44 pm
ಶಾಂತಿ ಮಾತುಕತೆಗಿಳಿದ ಪಾಕಿಸ್ತಾನ ವಿರುದ್ಧ ಕಿಡಿಕಾರಿ...
10-04-26 11:05 pm
ಮನೆಯಲ್ಲಿ ಭಾರೀ ನಗದು ಪತ್ತೆ ಪ್ರಕರಣ ; ನ್ಯಾಯಮೂರ್ತಿ...
10-04-26 01:26 pm
Lebanon News: ಲೆಬನಾನ್ ಮೇಲೆ ಇಸ್ರೇಲ್ ಭಾರೀ ಬಾಂಬ್...
09-04-26 11:03 pm
11-04-26 05:05 pm
Mangalore Correspondent
Fr Melvin J Pinto Death: ಸೈಂಟ್ ಅಲೋಶಿಯಸ್ ಶಿಕ್ಷ...
10-04-26 10:12 pm
ಭರತನಾಟ್ಯ ಗುರು ಶ್ರಾವಣ್ ಉಳ್ಳಾಲ್ ಹಳದಿ ಕಾಮಾಲೆ ರೋಗ...
10-04-26 09:49 pm
ಉಪ ಚುನಾವಣೆ ಫಲಿತಾಂಶಕ್ಕೂ ನಾಯಕತ್ವ ಬದಲಾವಣೆಗೂ ಸಂಬಂ...
10-04-26 06:05 pm
Puc 2026, Result, Mangalore: ಮೂವರು ಮಕ್ಕಳಾದರೂ...
10-04-26 12:35 pm
11-04-26 11:14 pm
HK News Desk
ಕಾಲೇಜು ಗೆಳತಿಯ ಪ್ರೀತಿ ಹುಚ್ಚಾಟ ; ಮಜಾ ಉಡಾಯಿಸಿದ ಬ...
11-04-26 03:09 pm
ಧಾರವಾಡ ಯೂತ್ ಕಾಂಗ್ರೆಸ್ ಮುಖಂಡನ ಹತ್ಯೆ ; ಮನೆಗೆ ನು...
11-04-26 12:04 pm
ಕುಂಭಮೇಳದ ಮೊನಾಲಿಸಾ ಅಂತರ್ಧರ್ಮೀಯ ವಿವಾಹಕ್ಕೆ ಕುತ್ತ...
10-04-26 11:06 pm
Red Corner Notice, Mangalore crime: ದೇರಳಕಟ್ಟೆ...
09-04-26 09:16 pm