ಶಾರ್ಟ್ ಸರ್ಕಿಟ್ ಗೆ ಗುಜರಿ ಅಂಗಡಿ ಧಗ ಧಗ ; ಸುಟ್ಟು ಕರಕಲಾದ ಸಾಮಾನು ಸರಂಜಾಮು !

20-03-21 04:50 pm       Mangalore Correspondent   ಕರಾವಳಿ

ಶಾರ್ಟ್ ಸರ್ಕ್ಯುಟ್ ನಿಂದ ಗುಜರಿಗೆ ಅಂಗಡಿ ಬೆಂಕಿ ಹತ್ತಿಕೊಂಡ ಘಟನೆ ಉಳ್ಳಾಲದಲ್ಲಿ ನಡೆದಿದೆ.

ಉಳ್ಳಾಲ, ಮಾ.20 : ಶಾರ್ಟ್ ಸರ್ಕ್ಯುಟ್ ನಿಂದ ಬೆಂಕಿ ಹತ್ತಿಕೊಂಡು ಗುಜರಿ ಅಂಗಡಿಯಲ್ಲಿದ್ದ ಪರಿಕರಗಳು ಧಗ ಧಗಿಸಿದ್ದು ಅಂಗಡಿಯಲ್ಲಿದ್ದ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಆಡಂಕುದ್ರುವಿನ ಐವನ್ ಡಿ ಸೋಜಾ ಎಂಬವರ ಜಾಗದಲ್ಲಿ ಬಾಡಿಗೆ ಆಧಾರದಲ್ಲಿ ಅನ್ವರ್ ಎಂಬವರು ಗುಜರಿ ವಹಿವಾಟು ನಡೆಸುತ್ತಿದ್ದು ಇಂದು ಮಧ್ಯಾಹ್ನ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯುಟ್ ನಿಂದಾಗಿ ಬೆಂಕಿ ಹತ್ತಿಕೊಂಡಿದೆ. ಅದಾಗಲೇ ಅಲ್ಲಿನ ಕಾರ್ಮಿಕರು ಅಂಗಡಿಯಿಂದ ಹೊರಬಂದು ಸಾಮಾನುಗಳನ್ನು ಹೊರಗಡೆ ಸಾಗಿಸುವ ಕೆಲಸದಲ್ಲಿ ತೊಡಗಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಗುಜರಿ ಅಂಗಡಿ ಹೊತ್ತಿ ಉರಿದಿದ್ದು ಅಪಾರ ಪ್ರಮಾಣದ ಗುಜರಿ ಪರಿಕರಗಳು ಬೆಂಕಿಗಾಹುತಿಯಾಗಿವೆ. ಅಂಗಡಿಯ ಹೊರಗಡೆಯೂ ಅಪಾರ ಪ್ರಮಾಣದ ಗುಜರಿಯನ್ನು ದಾಸ್ತಾನು ಇರಿಸಲಾಗಿತ್ತು. ಬೆಂಕಿಯ ಕೆನ್ನಾಲಿಗೆಗೆ ಜನರೇಟರ್ ಸೇರಿದಂತೆ ತೆಂಗಿನ ಮರವೊಂದು ಸುಟ್ಟು ಕರಕಲಾಗಿದೆ. 

ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿಯನ್ನ ನಂದಿಸಿದ್ದಾರೆ. ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.