ಪುತ್ತೂರು ; ಬೈಕ್ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿ ಸಾವು

22-03-21 11:03 am       Mangalore Correspondent   ಕರಾವಳಿ

ಬೈಕ್ ಅಪಘಾತದಲ್ಲಿ ಕಾಲೇಜು​​ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಪುತ್ತೂರು ರಸ್ತೆಯ ಮಾಂತೂರು ಎಂಬಲ್ಲಿ ನಡೆದಿದೆ. 

ಪುತ್ತೂರು, ಮಾ.22 : ಸವಣೂರು - ಪುತ್ತೂರು ರಸ್ತೆಯ ಮಾಂತೂರು ಎಂಬಲ್ಲಿ ಬೈಕ್ ಅಪಘಾತಕ್ಕೀಡಾಗಿದ್ದು ಕಾಲೇಜು​​ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ನಿನ್ನೆ ರಾತ್ರಿ ನಡೆದಿದೆ. 

ಮಡಿಕೇರಿ ತಾಲೂಕಿನ ಸೋಮವಾರ ಪೇಟೆ ನಿವಾಸಿ ಬೋಜಪ್ಪ - ಉಮಾವತಿ ದಂಪತಿ ಪುತ್ರ ಚೇತನ್ ಮೃತ ಯುವಕ. ಮತ್ತೊಬ್ಬ ಯುವಕ ಬೆಳ್ಳಾರೆ ನಿವಾಸಿ ಸುದೀಪ್ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚೇತನ್ ಪುತ್ತೂರಿನಲ್ಲಿ ಪಿಜಿ ಯಲ್ಲಿದ್ದುಕೊಂಡು ವಿವೇಕಾನಂದ ಕಾಲೇಜಿಗೆ ಹೋಗುತ್ತಿದ್ದ. ಮಾರ್ಚ್ 21 ರಂದು ಮಾಣಿ ಸಾದಿಕುಕ್ಕುವಿನಲ್ಲಿ ಜಾತ್ರೆಗೆ ಸ್ನೇಹಿತ ಸುದೀಪ್ ಜೊತೆ ಹೋಗಿದ್ದ. ರಾತ್ರಿ ವೇಳೆಗೆ ಸ್ನೇಹಿತ ಸುದೀಪ್ ಅವರ ಬೆಳ್ಳಾರೆ ಮನೆಗೆ ಹೋಗುತ್ತಿದ್ದಾಗ ಮಾಂತೂರು ಸಮೀಪ ಬೈಕ್ ಅಪಘಾತವಾಗಿದೆ.

In a tragic incident, a youth died after a bike accident in Puttur. He was a resident of Madikeri.