ನಾಳೆಯಿಂದ ಮಾಸ್ಕ್ ಹಾಕದಿದ್ದರೆ ಹುಷಾರ್ ! ಉಳ್ಳಾಲದಲ್ಲಿ ಕೋವಿಡ್ ಜಾಗೃತಿ ಜಾಥಾ

23-03-21 05:12 pm       Mangaluru correspondent   ಕರಾವಳಿ

ಕೋವಿಡ್ 19 ಬಗ್ಗೆ ಜನರು ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದು ಇಂದು ಜನಸಾಮಾನ್ಯರಿಗೆ ಅಭಿಯಾನದಡಿ ಎಚ್ಚರಿಕೆ ನೀಡುತ್ತಿದ್ದು ನಾಳೆಯಿಂದ ಮಾಸ್ಕ್ ಹಾಕದೆ ಸಾಮಾಜಿಕ ಅಂತರ ಕಾಪಾಡದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಉಳ್ಳಾಲ ನಗರ ಆಯುಕ್ತ ರಾಯಪ್ಪ ಖಡಕ್ ಎಚ್ಚರಿಕೆ  ನೀಡಿದ್ದಾರೆ. 

ಉಳ್ಳಾಲ, ಮಾ.23: ಕೋವಿಡ್ 19 ಬಗ್ಗೆ ಜನರು ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದು ಇಂದು ಜನಸಾಮಾನ್ಯರಿಗೆ ಅಭಿಯಾನದಡಿ ಎಚ್ಚರಿಕೆ ನೀಡುತ್ತಿದ್ದು ನಾಳೆಯಿಂದ ಮಾಸ್ಕ್ ಹಾಕದೆ ಸಾಮಾಜಿಕ ಅಂತರ ಕಾಪಾಡದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಉಳ್ಳಾಲ ನಗರ ಆಯುಕ್ತ ರಾಯಪ್ಪ ಖಡಕ್ ಎಚ್ಚರಿಕೆ  ನೀಡಿದ್ದಾರೆ. 

ಜಿಲ್ಲಾಧಿಕಾರಿ ಆದೇಶದಂತೆ ಉಳ್ಳಾಲ ನಗರಸಭೆ ಅಧಿಕಾರಿಗಳು ಉಳ್ಳಾಲದಲ್ಲಿ ನಡೆದ ಕೋವಿಡ್ 19 ಜಾಗೃತಿ ಅಭಿಯಾನ ಜಾಥದಲ್ಲಿ ಸಾರ್ವಜನಿಕರಿಗೆ ಎಚ್ಚರ ನೀಡಿದ್ದಾರೆ. ನಗರ ಸಭಾ ಅಧ್ಯಕ್ಷರು ,ಸದಸ್ಯರು‌, ಸಿಬ್ಬಂದಿಗಳ ಜೊತೆ ಸೇರಿ ಆಯುಕ್ತರು ಇಂದು ಉಳ್ಳಾಲ ನಗರಾದ್ಯಂತ ಕೋವಿಡ್ 19 ಬಗ್ಗೆ ಜಾಗೃತಿ ಅಭಿಯಾನ ಮೂಡಿಸಿದರು. ಜನಸಾಮಾನ್ಯರು, ರಿಕ್ಷಾ ಚಾಲಕರು, ದ್ವಿಚಕ್ರ ಸವಾರರು, ಬಸ್ಸು ಪ್ರಯಾಣಿಕರಿಗೆ ಉಚಿತವಾದ ಮಾಸ್ಕ್ ಗಳನ್ನು ವಿತರಿಸಿ ಆರೋಗ್ಯ ಕಾಪಾಡುವಂತೆ ಮನವಿ ಮಾಡಿದರು. ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ನಾಳೆಯಿಂದ ಎಲ್ಲರೂ ಕಟ್ಟುನಿಟ್ಟಾಗಿ ಕೋವಿಡ್ 19 ನಿಯಮಗಳನ್ನು ಪಾಲಿಸುವಂತೆ ಎಚ್ಚರಿಕೆ ನೀಡಿದರು. 

ನಗರಸಭಾ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಸದಸ್ಯರಾದ ಸಪ್ನಾ ಹರೀಶ್, ಅಬ್ದುಲ್ ಬಶೀರ್ ,ಇ.ಎಮ್ ಜಬ್ಬಾರ್ ,ಮುಶ್ತಾಕ್ ಪಟ್ಲ ಮತ್ತು ನಗರಸಭಾ ಸಿಬ್ಬಂದಿಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

A Campaign was held against covid 19 in Ullal region and it is said that it's mandatory for everyone to wear a mask to avoid being charged with a fine.