1.23 ಕೇಜಿ ಚಿನ್ನದ ಜೊತೆ ದುಬೈನಿಂದ ಬಂದ ಯುವಕ ಕಸ್ಟಮ್ಸ್ ಬಲೆಗೆ

26-03-21 06:41 pm       Mangaluru correspondent   ಕರಾವಳಿ

ದುಬೈನಿಂದ ಅಕ್ರಮವಾಗಿ ಚಿನ್ನ ತರುತ್ತಿದ್ದ ವ್ಯಕ್ತಿಯನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಮಂಗಳೂರು, ಮಾ.26: ದುಬೈನಿಂದ ಅಕ್ರಮವಾಗಿ ಚಿನ್ನ ತರುತ್ತಿದ್ದ ವ್ಯಕ್ತಿಯನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಕಾಸರಗೋಡು ಜಿಲ್ಲೆಯ ಇಸ್ಮಾಯಿಲ್ ಅಹ್ಮದ್ ಕಲ್ಲಾರ್ ಬಂಧಿತ ವ್ಯಕ್ತಿ. ಪೌಡರ್ ರೂಪದಲ್ಲಿದ್ದ ಚಿನ್ನವನ್ನು ಗಮ್ ಜೊತೆಗೆ ಬೆರೆಸಿಕೊಂಡು ತನ್ನ ಒಳ ಉಡುಪಿನಲ್ಲಿ ಬಚ್ಚಿಟ್ಟುಕೊಂಡು ಬರುತ್ತಿದ್ದಾಗ ಕಸ್ಟಮ್ಸ್ ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿಬಿದಿದ್ದಾನೆ. ಆತನನ್ನು ಇನ್ನಷ್ಟು ತಪಾಸಣೆಗೆ ಒಳಪಡಿಸಿದಾಗ ಚೈನ್ ಮಾದರಿಯ ಕಚ್ಚಾ ಚಿನ್ನ ಹೊಂದಿರುವುದನ್ನು ಪತ್ತೆ ಮಾಡಲಾಗಿದೆ.

ಒಟ್ಟು 1.23 ಕೆಜಿ ಚಿನ್ನ ಹೊಂದಿದ್ದು, ಅದರ ಮೌಲ್ಯ 57.14 ಲಕ್ಷ ಎಂದು ಅಂದಾಜಿಸಲಾಗಿದೆ. ಡೆಪ್ಯುಟಿ ಕಮಿಷನರ್ ಕಪಿಲ್ ಗದೆ ನೇತೃತ್ವದಲ್ಲಿ ಎಸ್ಪಿ ದರ್ಜೆಯ ಅಧಿಕಾರಿಗಳಾದ ಶ್ರೀಕಾಂತ್, ನಾಗೇಶ್ ಕುಮಾರ್, ನವೀನ್ ಕಾರ್ಯಾಚರಣೆ ನಡೆಸಿದ್ದರು. ದುಬೈನಿಂದ ಇಂದು ಬೆಳಗ್ಗೆ ಸ್ಪೈಸ್ ಜೆಟ್ ಮೂಲಕ ಮಂಗಳೂರಿಗೆ ಬಂದಿದ್ದ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Customs officials at the Mangaluru International Airport on Friday March 26 seized over a kilo of gold that was being smuggled by a passenger.