ಕೊಣಾಜೆ: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ ; ಓರ್ವ ವಶಕ್ಕೆ 9 ಗೋವುಗಳ ರಕ್ಷಣೆ

23-04-21 10:53 am       Mangalore Correspondent   ಕರಾವಳಿ

ಅಕ್ರಮ ಕಸಾಯಿಖಾನೆಗೆ ಕೊಣಾಜೆ ಪೊಲೀಸರು ದಾಳಿ ನಡೆಸಿ  9 ದನಗಳನ್ನು ರಕ್ಷಿಸಿದ್ದು, ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ಕೊಣಾಜೆ, ಎ.23 : ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಅರಂತಾಡಿ ಎಂಬಲ್ಲಿ ಗುಡ್ಡ ಪ್ರದೇಶದಲ್ಲಿದ್ದ ಅಕ್ರಮ ಕಸಾಯಿಖಾನೆಗೆ ಕೊಣಾಜೆ ಪೊಲೀಸರು ಗುರುವಾರ ದಾಳಿ ನಡೆಸಿ  9 ದನಗಳನ್ನು ರಕ್ಷಿಸಿದ್ದು, ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ಮಿಜಾರು ತೋಡಾರ್ ನಿವಾಸಿ ಹಂಝ(22) ಬಂಧಿತ ಆರೋಪಿಯಾಗಿದ್ದು, ಈತನ ಜೊತೆಗಿದ್ದ ಇತರ ನಾಲ್ವರು ದಾಳಿ ಸಂದರ್ಭದಲ್ಲಿ ಪರಾರಿಯಾಗಿದ್ದಾರೆ. ಆರೋಪಿಗಳು ಬಾಳೆಪುಣಿ ಗ್ರಾಮದ ಅರಂತಾಡಿ ಗುಡ್ಡ ಪ್ರದೇಶದಲ್ಲಿ ಮಾಂಸ ಮಾಡುವ ಉದ್ದೇಶದಿಂದ ಒಂಬತ್ತು ದನಗಳನ್ನು ಕಟ್ಟಿ ಹಾಕಿದ್ದರು ಎನ್ನಲಾಗಿದೆ.

ಖಚಿತ ಮಾಹಿತಿ ಪಡೆದ ಕೊಣಾಜೆ‌ ಪೊಲೀಸರು  ಸ್ಥಳಕ್ಕೆ ದಾಳಿ ನಡೆಸಿ ದನಗಳನ್ನು ರಕ್ಷಿಸಿದ್ದಾರೆ. ನಾಲ್ವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಓರ್ವನನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಕ್ಷಣೆ‌ ಮಾಡಿದ ದನಗಳನ್ನು ಪಜೀರು ಗೋವನಿತಾಶ್ರಮಕ್ಕೆ ಹಸ್ತಾಂತರಿಸಲಾಗಿದೆ.

The Konaje police raided on an illegal slaughterhouse and have rescued nine cows and have arrested one. The arrested has been identified as Hamza (22).