ವೀಕೆಂಡ್ ಕರ್ಫ್ಯೂ ; ಭಕ್ತರಿಲ್ಲದೆ ಬಡವಾದ ಸೋಮೇಶ್ವರ ಸೋಮನಾಥನ ಬ್ರಹ್ಮಕಲಶೋತ್ಸವ

24-04-21 01:25 pm       Mangalore Correspondent   ಕರಾವಳಿ

ಕೋವಿಡ್ ನಿಯಂತ್ರಣದ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ಹೇರಿದ್ದು ಅದರ ಎಫೆಕ್ಟ್ ಇತಿಹಾಸ ಪ್ರಸಿದ್ಧ ಸೋಮೇಶ್ವರ ಸೋಮನಾಥ ದೇವರ ಬ್ರಹ್ಮಕಲಶೋತ್ಸವಕ್ಕೆ ತಟ್ಟಿದೆ. 

ಉಳ್ಳಾಲ, ಎ.24: ಕೋವಿಡ್ ನಿಯಂತ್ರಣದ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಹೇರಿದ್ದು ಅದರ ಎಫೆಕ್ಟ್ ಇತಿಹಾಸ ಪ್ರಸಿದ್ಧ ಸೋಮೇಶ್ವರ ಸೋಮನಾಥ ದೇವರ ಬ್ರಹ್ಮಕಲಶೋತ್ಸವಕ್ಕೆ ತಟ್ಟಿದೆ. 

ವೀಕೆಂಡ್ ಕರ್ಪ್ಯೂನಿಂದಾಗಿ ಸೋಮನಾಥ ಕ್ಷೇತ್ರದಲ್ಲಿ ಭಕ್ತ ಜನರಿಲ್ಲದೆ ಕೇವಲ ಬ್ರಹ್ಮಕಲಶೋತ್ಸವ ಸಮಿತಿ ಪ್ರಮುಖರು, ಸ್ವಯಂಸೇವಕರ ಉಪಸ್ಥಿತಿಯಲ್ಲಿ ಸೋಮನಾಥನಿಗೆ ಅರ್ಚಕ ವರ್ಗದವರಿಂದ ವೈಧಿಕ ವಿಧಿ ವಿಧಾನಗಳು ನಡೆಯುತ್ತಿವೆ. ನಾಳೆ ಕ್ಷೇತ್ರದಲ್ಲಿ ಪರಿವಾರ ದೈವಗಳ ಪುನರ್ ಪ್ರತಿಷ್ಠಾ ವಿಧಿ ನಡೆಯಲಿದ್ದು ಕರ್ಫ್ಯೂ ಇರುವುದರಿಂದ ಭಕ್ತ ಜನರು ಬರಲು ಸಾಧ್ಯವಾಗದ ಸ್ಥಿತಿ ಎದುರಾಗಲಿದೆ. 

ಎ.26 ರ ಸೋಮವಾರ ಸೋಮನಾಥನಿಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು ಬ್ರಹ್ಮರಥ ಸಮರ್ಪಣೆಯಾಗಲಿದೆ. ಇಂದು ಕರ್ಫ್ಯೂ ಹಿನ್ನೆಲೆಯಲ್ಲಿ ಉಳ್ಳಾಲ, ತೊಕ್ಕೊಟ್ಟು , ದೇರಳಕಟ್ಟೆ ಪ್ರದೇಶಗಳು 10 ಗಂಟೆಗೆ ಸಂಪೂರ್ಣ ಸ್ಥಬ್ದಗೊಂಡಿದೆ. ಜನ ಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿವೆ.

Covid weekend lockdown in Mangalore Shree Somanatha Temple of Someshwara found empty with no devotees.