ಬ್ರೇಕಿಂಗ್ ನ್ಯೂಸ್
24-04-21 11:17 pm Mangaluru correspondent ಕರಾವಳಿ
ಮಂಗಳೂರು, ಎ.24: ಕಳೆದ ಬಾರಿ ದಿಢೀರ್ ಲಾಕ್ಡೌನ್ ಎದುರಾದಾಗಲೂ ಬೀದಿಯಲ್ಲಿ ಮಲಗುವ ಅನಾಥರು, ಭಿಕ್ಷುಕರು, ಹೊಟೇಲ್ ಊಟವನ್ನೇ ನಂಬಿಕೊಂಡು ಬದುಕುವ ಬಡವರು ಊಟಕ್ಕಿಲ್ಲದೆ ಪರದಾಡಿದ್ದರು. ಈ ಬಾರಿ ವಾರಾಂತ್ಯದ ಕರ್ಫ್ಯೂ ಸಂದರ್ಭವೂ ಅದೇ ಸ್ಥಿತಿ ಎದುರಾಗಿತ್ತು. ಮಂಗಳೂರು ನಗರದಲ್ಲಿ ಅಲ್ಲಲ್ಲಿ ಮಲಗುವ ಬಡಪಾಯಿಗಳಿಗೆ ಊಟಕ್ಕಿಲ್ಲದೆ ಪರದಾಡುವ ಸ್ಥಿತಿ ಬಂದಿತ್ತು. ಇದನ್ನು ಮನಗಂಡ ಕೆಲವು ಸಂಸ್ಥೆಗಳು ಸಂಜೆ ಹೊತ್ತಿಗೆ ಊಟದ ವ್ಯವಸ್ಥೆ ಮಾಡಿದ್ದವು.


ಶಾಸಕ ವೇದವ್ಯಾಸ ಕಾಮತ್ ನೇತೃತ್ವದ ಮಂಗಳೂರಿನ ಸೇವಾಂಜಲಿ ಟ್ರಸ್ಟ್ ನಿಂದ 500 ಮಂದಿಗೆ ಆಗುವಷ್ಟು ಊಟ ತಯಾರಿಸಿ, ಬೀದಿ ಅಲೆಯುವ ಮಂದಿಗೆ ವಿತರಿಸಲಾಯಿತು. ಸಂಜೆ ಹೊತ್ತಿಗೆ ಮಿನಿ ಟೆಂಪೋದಲ್ಲಿ ಹಾಕ್ಕೊಂಡು ಬಂದ ಟ್ರಸ್ಟ್ ಸದಸ್ಯರು ಊಟ, ಊಟ ಎಂದು ಕರೆಯುತ್ತಲೇ ಎಲ್ಲೆಲ್ಲೋ ಅನ್ನ, ನೀರು ಇಲ್ಲದೆ ಮೂಲೆ ಸೇರಿದ್ದವರು ಓಡೋಡಿ ಬಂದರು. ನೆಹರು ಮೈದಾನ, ಸ್ಟೇಟ್ ಬ್ಯಾಂಕ್, ಹಂಪನಕಟ್ಟೆ ಪರಿಸರದಲ್ಲಿ ರಸ್ತೆ ಬದಿಯನ್ನೇ ಜೀವನ ಮಾಡಿಕೊಂಡಿರುವ ಅದೆಷ್ಟೋ ಮಂದಿಯಿದ್ದಾರೆ.


ಹೊಟೇಲ್ ಗಳಿದ್ದರೆ ಬೇಡಿದ ಹಣದಲ್ಲಿ ಒಂದಷ್ಟು ಹೊಟ್ಟೆಗಿಳಿಸಿಕೊಳ್ಳುತ್ತಾರೆ. ಈಗ ಕರ್ಫ್ಯೂ ಕಾರಣದಿಂದ ಹೊಟೇಲ್ ಇನ್ನಿತರ ಎಲ್ಲವೂ ಬಂದ್ ಆಗಿದ್ದರಿಂದ ಬಡಪಾಯಿಗಳ ಹೊಟ್ಟೆಗೆ ಬೀಗ ಬಿದ್ದಿತ್ತು. ಸೇವಾಂಜಲಿಯವರು ಊಟ ರೆಡಿ ಮಾಡಿಕೊಂಡು ತಂದಾಗ ಅದೆಷ್ಟೋ ಹೊಟ್ಟೆ ತಣ್ಣಗೆ ಮಾಡಿಕೊಂಡಿದ್ದಾರೆ. ಟ್ರಸ್ಟ್ ಸದಸ್ಯರು ಹಾಳೆ ತಟ್ಟೆಯಲ್ಲಿ ಪಲಾವ್ ಹಾಕಿ ಕೊಡುತ್ತಿದ್ದರೆ, ಕೆಲವರು ಮತ್ತಷ್ಟು ತೆಗೆದು ತಿನ್ನುತ್ತಿದ್ದರು.


ಹಂಪನಕಟ್ಟೆಯಲ್ಲಿ ಕಾಶ್ಮೀರಿ ಮುಸ್ಲಿಮರು ಕೂಡ ಇದ್ದರು. ಎಲ್ಲೋ ಮೂಲೆಯಲ್ಲಿ ಕುಟುಂಬದ ಜೊತೆ ವಾಸಿಸುತ್ತಾ ಬೀದಿಯಲ್ಲಿ ಬಟ್ಟೆಗಳನ್ನು ಮಾರುವ ವೃತ್ತಿಯವರು. ಈ ಬಾರಿ ರಮ್ಜಾನ್ ಉಪವಾಸ ಆಚರಿಸಿದ್ದ ಅವರಿಗೂ ಇಂದು ಊಟ ಸಿಗದೆ ಕಂಗಾಲಾಗಿದ್ದರು. ಸೇವಾಂಜಲಿ ಟ್ರಸ್ಟ್ ಊಟ ತಂದಿದ್ದನ್ನು ನೋಡಿ, ದೇವರೇ ಬಂದಂಗಾಯ್ತು ಅನ್ನುತ್ತಲೇ ಅವರಿಗೆ ಆಶೀರ್ವಾದ ಕೋರುತ್ತಾ ತಟ್ಟೆಯಲ್ಲಿ ಕೊಟ್ಟ ಅನ್ನವನ್ನು ಜೋಪಾನವಾಗಿ ತೆಗೆದು ಮನೆಗೊಯ್ದಿದ್ದು ಅಲ್ಲಿನ ಚಿತ್ರಣವನ್ನು ಕಟ್ಟಿಕೊಟ್ಟಿತ್ತು.
No food no Restaurants in Mangalore city but Sevanjali trust came forward to lend free food to the hungry on streets during the weekend curfew on Saturday.
18-12-25 12:37 pm
HK News Desk
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು ; ಸದನಕ್ಕ...
17-12-25 10:30 pm
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm