ಸಿ ಎಂ ಸೂಚನೆಗೆ ಡೊಂಟ್ ಕ್ಯಾರ್ ಅಂದಿರುವ ಡಿ ಸಿ ಎಂ ಲಕ್ಷ್ಮಣ ಸವದಿ

03-08-20 01:15 pm       Headline Karnataka News Network   ಕರ್ನಾಟಕ

ಸಿಎಂ ಬಿ ಎಸ್ ಯಡಿಯೂರಪ್ಪ‌ ಭೇಟಿ ಬಳಿಕ ಸೆಲ್ಫ್ ಕ್ವಾರಂಟೈನ್ ಆಗದೆ ಡಿಸಿಎಂ‌ ಲಕ್ಷ್ಮಣ ಸವದಿ, ನೂರಾರ ಜನರನ್ನು ಸೇರಿಸಿ ನೂತನ ಆರ್‌ಟಿಓ ಕಚೇರಿ ಉದ್ಘಾಟಿಸಿದ್ದಾರೆ.

ಬೆಳಗಾವಿ (ಆ.03):  ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೊರೊನಾ ಪಾಸಿಟಿವ್ ಆದ ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ಸಂಪರ್ಕ ಕ್ಕೆ ಬಂದವರೆಲ್ಲಾ ಸುರಕ್ಷತೆಯ ದೃಷ್ಠಿಯಿಂದ ಸೆಲ್ಫ್ ಕ್ವಾರಂಟೈನ್ ಆಗಲು ಸೂಚಿಸಿದ್ದರು.ಆದರೆ ಸಿ ಎಂ ಸೂಚನೆಗೆ ಡೊಂಟ್ ಕ್ಯಾರ್ ಅಂದಿರುವ ಡಿ ಸಿ ಎಂ ಲಕ್ಷ್ಮಣ ಸವದಿ ಜನರ ಸುರಕ್ಷತೆಯನ್ನು ಲೆಕ್ಕಿಸದೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.

ಸಿಎಂ‌ ಭೇಟಿ ಬಳಿಕ ಸೆಲ್ಫ್ ಕ್ವಾರಂಟೈನ್ ಆಗದೆ ಡಿಸಿಎಂ‌ ಲಕ್ಷ್ಮಣ ಸವದಿ, ನೂರಾರ ಜನರನ್ನು ಸೇರಿಸಿ ನೂತನ ಆರ್‌ಟಿಓ ಕಚೇರಿ ಉದ್ಘಾಟಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ನೂತನ‌ ಆರ್‌ಟಿ‌ಓ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ 250 ಕ್ಕೂ ಹೆಚ್ಚು ಜನರು ಭಾಗಿದ್ದರು.

ಆರ್‌ಟಿ‌ಓ ಕಚೇರಿ ಸಮಾರಂಭದಲ್ಲಿ ಕೊವಿಡ್ ನಿಯಮಗಳನ್ನು ಗಾಳಿಗೆ ತೂರಿದ ಡಿಸಿಎಂ ಸವದಿ, ಸಚಿವ ಶ್ರೀಮಂತ ಪಾಟೀಲ, ಮತ್ತಿತರು ಸಾಮಾಜಿಕ ಅಂತರ ಮರೆತು ಕಚೇರಿ ಉದ್ಘಾಟಿಸಿದ್ದಾರೆ.ಅಥಣಿ ಶಾಸಕ ಮಹೇಶ ಕುಮಟಳ್ಳಿ, ಕುಡಚಿ ಶಾಸಕ ಪಿ ರಾಜೀವ್ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಕುರಿತು ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಕೊರೊನಾ ಬಗ್ಗೆ ಎಚ್ಚರಿಕೆಯಿಂದಿರಿ ಎಂದ ಹೇಳುವ ಸರಕಾರದ ಪ್ರತಿನಿಧಿಗಳೇ ಕೊರೊನಾ ಸೂಪರ್ ಸ್ಪ್ರೆಡ್ಡರ್  ಆಗ್ತಾರ ಅನ್ನೂ ಭಯ ಜನರನ್ನು ಕಾಡ ತೊಡಗಿದೆ. ಜನರಿಗೊಂದು ನ್ಯಾಯ ಜನಪ್ರತಿನಿಧಿಗಳಿಗೆ ಒಂದು ನ್ಯಾಯನಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡತೊಡಗಿದ್ದಾರೆ.

ಸಾಮಾನ್ಯ ಜನರ ಸಭೆ, ಸಮಾರಂಭಗಳಿಗೆ ಅನ್ವಯಿಸುವ ನಿಯಮಗಳು ಜನಪ್ರತಿನಿಧಗಳಿಗೆ ಏಕೆ ಇಲ್ವೆ?