ಬ್ರೇಕಿಂಗ್ ನ್ಯೂಸ್
05-06-26 06:19 pm HK News Staffer ಕರ್ನಾಟಕ
ಬೆಂಗಳೂರು, ಜೂನ್ 05: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನದ ಹೊಗೆ ಭುಗಿಲೆದ್ದಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಕೈತಪ್ಪಿದ ಹಿನ್ನೆಲೆ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರಕ್ಕೆ ಆರಂಭದಲ್ಲೇ ದೊಡ್ಡ ಆಘಾತ ನೀಡಿದ್ದಾರೆ.
ಕೋರಮಂಗಲದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಮಲಿಂಗಾರೆಡ್ಡಿ, ತಮ್ಮ ನಿರ್ಧಾರ ಅಚಲ ಎಂದು ಸ್ಪಷ್ಟಪಡಿಸಿದ್ದು, “ಯಾರನ್ನೂ ಭೇಟಿಯಾಗುವ ಪ್ರಶ್ನೆಯೇ ಇಲ್ಲ” ಎಂದು ಹಠ ಹಿಡಿದಿದ್ದಾರೆ ಎನ್ನಲಾಗಿದೆ. ಇದರಿಂದ ಸರ್ಕಾರ ರಚನೆಯಾದ ಕೇವಲ ಮೂರು ದಿನಗಳಲ್ಲೇ ಕಾಂಗ್ರೆಸ್ಗೆ ಮೊದಲ ದೊಡ್ಡ ರಾಜಕೀಯ ಸಂಕಷ್ಟ ಎದುರಾಗಿದೆ.
ಬೆಂಗಳೂರು ಅಭಿವೃದ್ಧಿ ಖಾತೆಗಾಗಿ ಪಟ್ಟು
ಬೆಂಗಳೂರು ನಗರಾಭಿವೃದ್ಧಿ ಇಲಾಖೆ ರಾಜ್ಯದ ಅತ್ಯಂತ ಪ್ರಭಾವಿ ಖಾತೆಗಳಲ್ಲಿ ಒಂದಾಗಿದೆ. ಈ ಖಾತೆಯ ವ್ಯಾಪ್ತಿಯಲ್ಲಿ ಜಿಬಿಎ, ಬಿಎಂಆರ್ಸಿಎಲ್, ಬಿಬಿಎಂಪಿ, ಬಿಡಿಎ ಹಾಗೂ ಜಲಮಂಡಳಿ ಸೇರಿದಂತೆ ಪ್ರಮುಖ ಸಂಸ್ಥೆಗಳು ಬರುತ್ತವೆ. ಬೆಂಗಳೂರು ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ಹರಿದುಬರುವ ಕಾರಣ ಈ ಖಾತೆಗೆ ರಾಜಕೀಯವಾಗಿ ವಿಶೇಷ ಮಹತ್ವವಿದೆ.
ಇದೇ ಕಾರಣಕ್ಕೆ ರಾಮಲಿಂಗಾರೆಡ್ಡಿ ಈ ಖಾತೆಗಾಗಿ ಪಟ್ಟು ಹಿಡಿದಿದ್ದರು. “ನಾನು ಬೆಂಗಳೂರಿನ ಎಂಟು ಬಾರಿ ಆಯ್ಕೆಯಾದ ಶಾಸಕ. ನಗರದ ಇಂಚಿಂಚೂ ನನಗೆ ಗೊತ್ತು. ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ದುಡಿದಿದ್ದೇನೆ. ಬೆಂಗಳೂರು ಅಭಿವೃದ್ಧಿಗೆ ನನ್ನದೇ ಕೊಡುಗೆ ಇದೆ” ಎಂಬುದು ಅವರ ವಾದವಾಗಿದೆ.
ಸಂಪರ್ಕಕ್ಕೆ ಸಿಗದ ರಾಮಲಿಂಗಾರೆಡ್ಡಿ
ರಾಜೀನಾಮೆ ನೀಡಿದ ಬಳಿಕ ರಾಮಲಿಂಗಾರೆಡ್ಡಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಪರಿಸ್ಥಿತಿ ಶಮನಗೊಳಿಸಲು ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಪಕ್ಷದ ಹಿರಿಯ ನಾಯಕರು ಸಂಪರ್ಕಿಸಲು ಪ್ರಯತ್ನಿಸಿದರೂ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎನ್ನಲಾಗಿದೆ.
ರಾಹುಲ್ ಗಾಂಧಿಯವರ ಖಡಕ್ ಸೂಚನೆ
ರಾಜ್ಯದಲ್ಲಿ ಉಂಟಾಗಿರುವ ಈ ಬೆಳವಣಿಗೆಯನ್ನು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರ ಗಮನಕ್ಕೆ ತರಲಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಹಾಗೂ ಇತರ ನಾಯಕರು ಪರಿಸ್ಥಿತಿಯ ಬಗ್ಗೆ ವಿವರಿಸಿದ ಬಳಿಕ ರಾಹುಲ್ ಗಾಂಧಿ ಕಠಿಣ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ರಾಜ್ಯಸಭಾ ಚುನಾವಣೆ ಸಂಬಂಧ ಬೆಂಗಳೂರಿಗೆ ಆಗಮಿಸಿದ್ದ ವೇಳೆ ಈ ವಿಚಾರವನ್ನು ಚರ್ಚಿಸಿದ ಅವರು, “ಮೊದಲು ಚರ್ಚೆ ಮಾಡಿ ಮನವೊಲಿಸಿ. ಮನವೊಲಿಕೆಗೆ ಬಗ್ಗದಿದ್ದರೆ ರಾಜೀನಾಮೆ ಅಂಗೀಕರಿಸಿ” ಎಂದು ರಾಜ್ಯ ನಾಯಕರಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಡಿಕೆಶಿ ಸರ್ಕಾರಕ್ಕೆ ಆರಂಭದಲ್ಲೇ ಅಗ್ನಿಪರೀಕ್ಷೆ
ಒಂದೆಡೆ ಹೊಸ ಸಚಿವ ಸಂಪುಟದ ಕಾರ್ಯಾರಂಭ, ಮತ್ತೊಂದೆಡೆ ಖಾತೆ ಹಂಚಿಕೆ ಅಸಮಾಧಾನದಿಂದ ಹಿರಿಯ ನಾಯಕರ ಬಂಡಾಯ ಕಾಂಗ್ರೆಸ್ ಹೈಕಮಾಂಡ್ಗೆ ತಲೆನೋವಾಗಿ ಪರಿಣಮಿಸಿದೆ. ರಾಮಲಿಂಗಾರೆಡ್ಡಿ ಮನವೊಲಿಕೆಗೆ ಒಪ್ಪುತ್ತಾರಾ ಅಥವಾ ಅವರ ರಾಜೀನಾಮೆ ಅಂಗೀಕಾರವಾಗುತ್ತದೆಯಾ ಎಂಬುದು ಇದೀಗ ರಾಜ್ಯ ರಾಜಕೀಯದ ಕುತೂಹಲದ ಕೇಂದ್ರಬಿಂದುವಾಗಿದೆ.
05-06-26 07:14 pm
HK News Staffer
ಬೆಂಗಳೂರು ಖಾತೆಗಾಗಿ ರಾಮಲಿಂಗಾರೆಡ್ಡಿ ಬಂಡಾಯ: ಮನವೊಲ...
05-06-26 06:19 pm
ರಾಮಲಿಂಗಾ ರೆಡ್ಡಿ ಕಚೇರಿ ಎದುರಲ್ಲಿ ಪ್ರತಿಭಟನೆ ; ಕಾ...
05-06-26 05:23 pm
ಡಿಕೆಶಿ ಸಂಪುಟದಲ್ಲಿ ಮೊದಲ ವಿಕೆಟ್ ಪತನ ; ಖಾತೆ ಹಂಚಿ...
05-06-26 10:29 am
ಖಾತೆ ಹಂಚಿಕೆ ಅಸಮಾಧಾನ ; ತನಗೆ ಸಚಿವ ಸ್ಥಾನವೇ ಬೇಡ !...
04-06-26 07:35 pm
05-06-26 02:34 pm
HK News Staffer
ಯೋಗಿಜೀ ನಮ್ಮನ್ನು ಕ್ಷಮಿಸಿ..! ಇನ್ನೆಂದೂ ಅಪರಾಧ ಕೃತ...
04-06-26 04:19 pm
20 ವರ್ಷಗಳ ಹಿಂದೆ ಬರೆದಿದ್ದ ಪರೀಕ್ಷೆಗೆ ಈಗ ಬಂತು ಸರ...
03-06-26 09:17 pm
ನೀಟ್, ಸಿಬಿಎಸ್ಇ ಪರೀಕ್ಷೆ ಅಕ್ರಮ; ಸಚಿವ ಧರ್ಮೇಂದ್ರ...
02-06-26 10:40 am
ನಟ ವಿಜಯ್ ಹಾದಿಯಲ್ಲೇ ಅಣ್ಣಾಮಲೈ ! ಬಿಜೆಪಿ ಬಿಟ್ಟು ದ...
02-06-26 10:01 am
05-06-26 01:25 pm
HK News Staffer
ಪಿನಾಕಿನಿ ಹೊಳೆಯಲ್ಲಿ ಹೆಚ್ಚಾದ ಹೂಳು, ಬದಲಾದ ಹರಿವಿನ...
04-06-26 12:51 pm
ಇನ್ನು ವಿಧಾನಮಂಡಲದಲ್ಲೂ ಡಿಜಿಟಲ್ ಟಚ್ ! 6 ತಿಂಗಳಲ್ಲ...
02-06-26 04:18 pm
Mithun Rai, Dk Shivakumar CM, Mangalore: ಮುಂದ...
02-06-26 01:18 pm
Ut Khader, Mangalore: ಡಿಸಿಎಂ ಆಗೋದು ಮಾಧ್ಯಮದಲ್ಲ...
02-06-26 01:06 pm
04-06-26 09:41 pm
HK News Staffer
ರಾಷ್ಟ್ರ ಮಟ್ಟದ ಪವರ್ ಲಿಫ್ಟರ್ ಸಂತೋಷ್ ಪೂಜಾರಿ ನಾಲ್...
04-06-26 05:31 pm
ದೆಹಲಿ ಹೋಟೆಲ್ ನಲ್ಲಿ ಭೀಕರ ಅಗ್ನಿ ಅವಘಡ ; 21 ಮಂದಿ...
04-06-26 03:29 pm
ಉಡುಪಿ ; ನೀರು ಸೇದುತ್ತಿದ್ದಾಗ ಬಾವಿಯೊಳಕ್ಕೆ ಬಿದ್ದ...
04-06-26 12:49 pm
ಮೊಬೈಲ್ ಚಟ ಬಿಟ್ಟು ಬಿಡುವಂತೆ ಗದರಿದ ತಾಯಿ; ಸುಳ್ಯದಲ...
02-06-26 09:27 pm