'ಸಿದ್ದರಾಮಯ್ಯಗೆ ಅಹಿಂದ ಮಾತ್ರ ಅರ್ಥ ಆಗೋದು, ದಲಿತ ಪದ ಅರ್ಥ ಆಗಲ್ಲ' 

14-08-20 08:42 am       Headline Karnataka News Network   ಕರ್ನಾಟಕ

ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಅಹಿಂದ ಮಾತ್ರ ಅರ್ಥವಾಗೋದು, ಭಾರತೀಯತೆ, ಹಿಂದುತ್ವ ಪದ ಅರ್ಥ ಆಗಲ್ಲ ಎಂದು ಸಚಿವ ಸಿ.ಟಿ ರವಿ ಕಿಡಿಕಾರಿದ್ದಾರೆ.

ಚಿಕ್ಕಮಗಳೂರು, ಆಗಸ್ಟ್ 14: ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಅಹಿಂದ ಮಾತ್ರ ಅರ್ಥವಾಗೋದು, ಭಾರತೀಯತೆ, ಹಿಂದುತ್ವ ಪದ ಅರ್ಥ ಆಗಲ್ಲ ಎಂದು ಸಚಿವ ಸಿ.ಟಿ ರವಿ ಕಿಡಿಕಾರಿದ್ದಾರೆ. ಚಿಕ್ಕ ಮಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ನ ಬಣ ರಾಜಕೀಯ, ಒಳ ರಾಜಕಾರಣ ಬೆಂಗಳೂರು ಗಲಭೆಗೆ ಕಾರಣ ಎಂದು ಆರೋಪಿಸಿದರು.

ಏನೋ ಸಂಚು ರೂಪಿಸಿ ನೆಪಕ್ಕಾಗಿ ಕಾಯುತ್ತಿದ್ದರು. ಈಗ ಗಲಭೆ ಸೃಷ್ಟಿಸಿದ್ದಾರೆ. ಸಿ.ಎ.ಎ, ರಾಮಮಂದಿರ ತೀರ್ಪು ವೇಳೆಯೂ ಇದೇ ರೀತಿಯ ಕೃತ್ಯಕ್ಕಾಗಿ ಎಸ್ ಡಿ ಪಿ ಐ ಸಂಚು ರೂಪಿಸಿತ್ತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್  ದಲಿತ ಪದ ಬಳಕೆಗೆ ಸಿದ್ದರಾಮಯ್ಯ ಟೀಕಿಸಿದ್ದರು. ಟ್ವೀಟ್ ಮೂಲಕ ಸಿದ್ದರಾಮಯ್ಯರನ್ನು ಟೀಕಿಸಿದ್ದ ಸಂತೋಷ್ ಅವರನ್ನು ಸಿ.ಟಿ ರವಿ ಸಮರ್ಥಿಸಿಕೊಂಡಿದ್ದಾರೆ. ಭಾರತೀಯತೆ ಹಿಂದುತ್ವ ಸಿದ್ದರಾಮಯ್ಯಗೆ ಅರ್ಥವಾಗಲ್ಲ. ನಿಮಗೆ ಅರ್ಥವಾಗಲಿ ಎಂದು ಸಂತೋಷ್ ದಲಿತ ಶಬ್ದ ಬಳಸಿದ್ದಾರೆ. ಸಂತೋಷ್ ಹಿಂದು ಎಂಬುದರಲ್ಲಿ ಯಾವುದೇ ಸಂಶಯವೆ ಬೇಡ ಎಂದು ತಿರುಗೇಟು ನೀಡಿದ್ದಾರೆ.