ಬ್ರೇಕಿಂಗ್ ನ್ಯೂಸ್
10-08-22 02:42 pm Source: Vijayakarnataka ಸಿನಿಮಾ
ಔಟ್ ಅಂಡ್ ಔಟ್ ಫ್ಯಾಮಿಲಿ ಕಮರ್ಶಿಯಲ್ ಸೀರಿಯಲ್ಗಳ ಮಧ್ಯೆ ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದು ‘ಶನಿ’ (Shani) ಧಾರಾವಾಹಿ. ಶನಿದೇವನ ಚರಿತ್ರೆ ಕುರಿತಾದ ಕಥಾಹಂದರ ಹೊಂದಿದ್ದ ಪೌರಾಣಿಕ ಧಾರಾವಾಹಿ ‘ಶನಿ’. ಈ ಸೀರಿಯಲ್ನಲ್ಲಿ ಶನಿದೇವನ ಪಾತ್ರ ನಿಭಾಯಿಸಿದವರು ಸುನೀಲ್ (Sunil). ‘ಶನಿ’ ಸೀರಿಯಲ್ ಮುಗಿದ ನಂತರ ಕಿರುತೆರೆಯಿಂದ ಗ್ಯಾಪ್ ಪಡೆದಿದ್ದ ಸುನೀಲ್ ಇದೀಗ ಕಮ್ ಬ್ಯಾಕ್ ಮಾಡಿದ್ದಾರೆ.
ಹೌದು.. ‘ಶನಿ’ ಸೀರಿಯಲ್ ಖ್ಯಾತಿಯ ನಟ ಸುನೀಲ್ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಹೊಸ ಧಾರಾವಾಹಿಯಲ್ಲಿ ಸುನೀಲ್ ಅಭಿನಯಿಸಿದ್ದಾರೆ. ಆ ಹೊಸ ಸೀರಿಯಲ್ ಯಾವುದು ಅಂದ್ರಾ..?
ಕೆಂಡಸಂಪಿಗೆ (Kendasampige)
‘ಕೆಂಡಸಂಪಿಗೆ’ ಎಂಬ ಹೊಸ ಸೀರಿಯಲ್ನಲ್ಲಿ ಸುನೀಲ್ ಅಭಿನಯಿಸಿದ್ದಾರೆ. ಅತೀ ಶೀಘ್ರದಲ್ಲೇ ‘ಕೆಂಡಸಂಪಿಗೆ’ ಸೀರಿಯಲ್ (Kendasampige Serial) ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಸೀರಿಯಲ್ನಲ್ಲಿ ಅಕ್ಕ- ತಮ್ಮನ ನಡುವಿನ ಪ್ರೀತಿಯೇ ಹೈಲೈಟ್ ಅಗಿದ್ದು, ತಮ್ಮನ ಪಾತ್ರದಲ್ಲಿ ಸುನೀಲ್ ಅಭಿನಯಿಸಿದ್ದಾರೆ.
ಪ್ರೋಮೋ ಔಟ್
‘ಕೆಂಡಸಂಪಿಗೆ’ ಧಾರಾವಾಹಿಯ ಪ್ರೋಮೋ ಬಿಡುಗಡೆಯಾಗಿದ್ದು, ಸಖತ್ ರಫ್ ಅಂಡ್ ಟಫ್ ಪಾತ್ರದಲ್ಲಿ ಸುನೀಲ್ ಕಾಣಿಸಿಕೊಂಡಿದ್ದಾರೆ. ಸುನೀಲ್ ಅವರ ಪಂಚಿಂಗ್ ಡೈಲಾಗ್ ವೀಕ್ಷಕರಿಗೆ ಇಷ್ಟವಾಗಿದೆ.
ಪ್ರಸಾರ ಯಾವಾಗ?
ಆಗಸ್ಟ್ 22 ರಿಂದ ಸಂಜೆ 6:30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಕೆಂಡಸಂಪಿಗೆ’ ಪ್ರಸಾರವಾಗಲಿದೆ.
ದೀನಬಂಧು ಆಶ್ರಮದಲ್ಲಿ ಬೆಳೆದ ಹುಡುಗ ಸುನೀಲ್
ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಪುತ್ರ ಜಯದೇವ್ ಅವರು ಚಾಮರಾಜನಗರದಲ್ಲಿ ನಡೆಸುತ್ತಿರುವ ದೀನಬಂಧು ಆಶ್ರಮದ ಹುಡುಗ ಸುನೀಲ್. ಇದೇ ಆಶ್ರಮದಲ್ಲೇ ಸುನೀಲ್ ವಿದ್ಯಾಭ್ಯಾಸ ಪಡೆದುಕೊಂಡಿದ್ದಾರೆ. ಚಿಕ್ಕವಯಸ್ಸಿನಿಂದಲೂ ನಟನೆಯಲ್ಲಿ ಸುನೀಲ್ ಅವರಿಗೆ ಅತೀವ ಆಸಕ್ತಿಯಿತ್ತು.
ಶನಿ ಸೀರಿಯಲ್ಗೆ ಸುನೀಲ್ ಆಯ್ಕೆ ಆಗಿದ್ದು ಹೇಗೆ?
ಯಕ್ಷಗಾನ ಕಲಿಯಲು ಉಡುಪಿಗೆ ಹೋಗಿದ್ದಾಗ, ಅಲ್ಲಿ ‘ಶನಿ’ ಸೀರಿಯಲ್ ಆಡಿಷನ್ ನಡೆಯುತ್ತಿತ್ತು. ಆಡಿಷನ್ನಲ್ಲಿ ಕಾಸ್ಟಿಂಗ್ ಡೈರೆಕ್ಟರ್ ನೀಡಿದ ಡೈಲಾಗ್ಅನ್ನ ಸುನೀಲ್ ಪರ್ಫೆಕ್ಟ್ ಆಗಿ ಹೇಳಿದರು. ಪರಿಣಾಮ, ‘ಶನಿ’ ಪಾತ್ರಕ್ಕೆ ಸುನೀಲ್ ಆಯ್ಕೆಯಾದರು.
ಅಸಲಿಗೆ, ‘ಶನಿ’ ಪಾತ್ರಕ್ಕಾಗಿ ಸುಮಾರು 500 ಮಂದಿಯನ್ನು ಆಡಿಷನ್ ಮಾಡಲಾಗಿತ್ತು. 500 ಮಂದಿ ಪೈಕಿ ಆಯ್ಕೆ ಆಗಿದ್ದು ಸುನೀಲ್. ‘ಶನಿ’ ಸೀರಿಯಲ್ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ‘ಕೆಂಡಸಂಪಿಗೆ’ ಸೀರಿಯಲ್ ಮೂಲಕ ಕಿರುತೆರೆ ವೀಕ್ಷಕರ ಮನೆ ಮನ ಗೆಲ್ಲಲು ಸುನೀಲ್ ಮರಳುತ್ತಿದ್ದಾರೆ.
Sunil Of Shani Serial Fame Makes Comeback With Kendasampige Serial.
05-09-25 11:15 pm
Bangalore Correspondent
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
ಕಾಂಗ್ರೆಸಿನ ಯಾರ ಮನೆಯ ನಾಯಿ ಸ್ವಾತಂತ್ರ್ಯಕ್ಕಾಗಿ ಹೋ...
03-09-25 09:00 pm
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
05-09-25 08:12 pm
Mangalore Correspondent
ತಡರಾತ್ರಿ ಫಾಸ್ಟ್ ಫುಡ್ ಗೌಜಿ ಪ್ರಶ್ನಿಸಿದ್ದಕ್ಕೆ ಸಿ...
05-09-25 05:09 pm
ಸೌಜನ್ಯಾ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಿದ್ದೇ ಆರ್....
04-09-25 11:07 pm
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
06-09-25 01:58 pm
Udupi Correspondent
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am
Mangalore Cow Slaughter, Crime, Arrest: ಪೆರ್ನ...
05-09-25 10:53 pm
Mukka Murder, Mangalore, Crime: ಪತ್ನಿಯ ಅಶ್ಲೀಲ...
05-09-25 10:26 pm
Atm robbery, Ullal, Kotekar, Mangalore: ಕೋಟೆಕ...
05-09-25 08:36 pm