ಬ್ರೇಕಿಂಗ್ ನ್ಯೂಸ್
30-09-22 02:01 pm Source: Vijayakarnataka ಸಿನಿಮಾ
'ಲೂಸಿಯಾ' ಸಿನಿಮಾ ಖ್ಯಾತಿಯ ಪವನ್ ಕುಮಾರ್ ಅವರು ಮಲಯಾಳಂ ನಟ ಫಹಾದ್ ಫಾಸಿಲ್ ( Fahadh Faasil ) ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಈ ಸಿನಿಮಾ ಬಗ್ಗೆ ನಿರ್ಮಾಣ ಸಂಸ್ಥೆಯೇ ಮಾಹಿತಿ ನೀಡಲಿ ಎಂದು ಪವನ್ ಅವರು ( Pawan Kumar ) ಮೌನ ತಾಳಿದ್ದರು. ಇದೀಗ ಈ ಬಗ್ಗೆ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯು ಟೈಟಲ್ ರಿವೀಲ್ ನೀಡಿ ವಿಷಯ ಅಧಿಕೃತಪಡಿಸಿದೆ.
ಫಹಾದ್ ಫಾಸಿಲ್ ಹಾಗೂ ಪವನ್ ಕುಮಾರ್ ಅವರ ಸಿನಿಮಾಕ್ಕೆ ಹೊಂಬಾಳೆ ಫಿಲ್ಮ್ಸ್ ಹಣ ಹೂಡಲಿದೆ. ಈ ಚಿತ್ರದಲ್ಲಿ 'ಸೂರರೈ ಪೋಟ್ರು' ಸಿನಿಮಾ ಖ್ಯಾತಿಯ ಅಪರ್ಣಾ ಬಾಲಮುರಳಿ ನಾಯಕಿಯಾಗಿ ನಟಿಸಲಿದ್ದಾರೆ. ಪ್ರೀತಾ ಜಯರಾಮನ್ ಅವರ ಕ್ಯಾಮರಾ ಕೆಲಸ, ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಈ ಚಿತ್ರಕ್ಕಿದೆ. ಮಲಯಾಳಂ, ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಅಂದಹಾಗೆ ಈ ಚಿತ್ರಕ್ಕೆ 'ಧೂಮಮ್' ಎಂದು ಹೆಸರು ಇಡಲಾಗಿದೆ.

'ಧೂಮಮ್' ಸಿನಿಮಾಕ್ಕೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಡಿ ವಿಜಯ್ ಕಿರಗಂದೂರು ಹಣ ಹೂಡುತ್ತಿದ್ದಾರೆ. ಈಗಾಗಲೇ 'ಕೆಜಿಎಫ್' ಸಿಕ್ವೇಲ್ಗಳ ಮೂಲಕ ದೊಡ್ಡ ಯಶಸ್ಸು ಪಡೆದಿರುವ ಈ ಸಂಸ್ಥೆ ಕೈತುಂಬ ಸಿನಿಮಾಗಳಿವೆ. ರಕ್ಷಿತ್ ಶೆಟ್ಟಿ ಜೊತೆಗೆ 'ರಿಚರ್ಡ್ ಆಂಟನಿ', ನಟ ಜಗ್ಗೇಶ್ ಜೊತೆ 'ರಾಘವೇಂದ್ರ ಸ್ಟೋರ್ಸ್', ಪ್ರಭಾಸ್ ಜೊತೆ 'ಸಲಾರ್' ಮುಂತಾದ ಸಿನಿಮಾಗಳನ್ನು ಹೊಂಬಾಳೆ ನಿರ್ಮಾಣ ಮಾಡುತ್ತಿದೆ.
ಪವನ್ ಕುಮಾರ್ ಸಿನಿಮಾ ಮಾಡಿದರೆ ಕನ್ನಡದ ತಂತ್ರಜ್ಞರನ್ನು ತಮ್ಮ ಜತೆ ಎಲ್ಲಾ ಭಾಷೆಗೂ ಕರೆದುಕೊಂಡು ಹೋಗುತ್ತಾರೆ. ಅಂತೆಯೇ ಈ ಸಿನಿಮಾದಲ್ಲಿ ಕನ್ನಡದ ತಂತ್ರಜ್ಞರೇ ಕೆಲಸ ಮಾಡುತ್ತಿದ್ದಾರೆ, ಪುನೀತ್ ರಾಜ್ಕುಮಾರ್ಗೆ ಪವನ್ ಬರೆದುಕೊಂಡಿದ್ದ ‘ದ್ವಿತ್ವ’ ಸಿನಿಮಾದ ಕಥೆಯನ್ನು ಫಹಾದ್ ಫಾಸಿಲ್ಗೆ ಮಾಡುತ್ತಾರೆ ಎಂಬ ಚರ್ಚೆಗಳು ಈಗಾಗಲೇ ಶುರುವಾಗಿವೆ. ಅದಕ್ಕೆ ಪವನ್ ಅವರೇ ಉತ್ತರ ನೀಡಬೇಕಿದೆ.
ತೆಲುಗು ಮತ್ತು ಹಿಂದಿಯಲ್ಲಿ ವೆಬ್ ಸಿರೀಸ್ ಮಾಡಿ ಗಮನ ಸೆಳೆದಿರುವ, ತಮಿಳಿನಲ್ಲಿ ತಮ್ಮದೇ ‘ಯು ಟರ್ನ್’ ಸಿನಿಮಾ ಮಾಡಿ ಹೆಸರು ಮಾಡಿರುವ ಪವನ್ ಅವರು ಸದ್ಯ 'ಗಾಳಿಪಟ 2' ಚಿತ್ರದಿಂದ ಸಿಕ್ಕ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಇದರ ಜೊತೆಗೆ ಅವರು ಸಿನಿಮಾ ನಿರ್ದೇಶನವನ್ನು ಗಮನದಲ್ಲಿಟ್ಟುಕೊಂಡು, ಆ ನಿಟ್ಸಿನಲ್ಲಿ ಕೆಲಸ ಮಾಡುತ್ತಲಿದ್ದಾರೆ.
ಕಳೆದ ವರ್ಷ ಪವನ್ ಕುಮಾರ್ ‘ದ್ವಿತ್ವ’ ಸಿನಿಮಾ ( Dvitva ) ಘೋಷಿಸಿದ್ದರು. ಇದರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಟಿಸಬೇಕಿತ್ತು. ಕಂಟೆಂಟ್ ಸಿನಿಮಾ ಮಾಡುವ ಪವನ್ ಅವರು ಪುನೀತ್ ಜೊತೆ ಸೇರಿಕೊಂಡು ಅದ್ಭುತವಾದ ಚಿತ್ರ ಕೊಡುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಪುನೀತ್ ಅವರ ಅಕಾಲಿಕ ಮರಣದಿಂದ ಈ ಸಿನಿಮಾ ನಿಂತು ಹೋಯಿತು. ಇದಾದ ಮೇಲೆ ಪವನ್ ಏನು ಮಾಡುತ್ತಾರೆ ಎಂಬ ಪ್ರಶ್ನೆಯಿತ್ತು. ಅದಕ್ಕೀಗ ಅಧಿಕೃತವಾಗಿಯೇ ಉತ್ತರ ಸಿಕ್ಕಿದೆ.
Hombale Films Announces New Movie With Fahadh Faasil Aparna Balamurali Pawan Kumar Titled As Dhoomam.
18-12-25 12:37 pm
HK News Desk
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು ; ಸದನಕ್ಕ...
17-12-25 10:30 pm
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm