ಬ್ರೇಕಿಂಗ್ ನ್ಯೂಸ್
13-10-22 01:50 pm Source: Vijayakarnataka ಸಿನಿಮಾ
ಸದ್ಯ ಎಲ್ಲ ಕಡೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರದ್ದೇ ಸದ್ದು. ಈ ವರ್ಷದ ಟ್ರೆಂಡಿಂಗ್ 'ರಾ ರಾ ರಕ್ಕಮ್ಮ..' ನೀಡಿದ ಮೇಲೆ 'ಗುರು ಶಿಷ್ಯರು' ಚಿತ್ರಕ್ಕಾಗಿ 'ಆಣೆ ಮಾಡಿ ಹೇಳುತೀನಿ..' ಕೊಟ್ಟಿದ್ದರು ಅಜನೀಶ್ ಲೋಕನಾಥ್. ಆನಂತರ ಅವರೀಗ 'ಕಾಂತಾರ' ಮೂಲಕ ಭರ್ಜರಿ ಸದ್ದು ಮಾಡುತ್ತಿದ್ದಾರೆ. ಇದೀಗ ಅಜನೀಶ್ ಲೋಕನಾಥ್ ಕಡೆಯಿಂದ ಒಂದು ಗುಡ್ ನ್ಯೂಸ್ ಕೂಡ ಕೇಳಿಬಂದಿದೆ. ಏನದು? ಅಜನೀಶ್ ಟಾಲಿವುಡ್ಗೆ ರೀ-ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ 'ಮೆಗಾ ಸ್ಟಾರ್' ಫ್ಯಾಮಿಲಿಯ ಸಾಯಿ ಧರಮ್ ತೇಜ್ ನಟನೆಯ ಹೊಸ ಸಿನಿಮಾಗೆ ಸಂಗೀತ ನೀಡಲಿದ್ದಾರೆ.
ಸಾಯಿ ಧರಮ್ ತೇಜ್ ಸಿನಿಮಾಗೆ ಅಜನೀಶ್ ಸಂಗೀತ
'ಮೆಗಾ ಸ್ಟಾರ್' ಚಿರಂಜೀವಿ ಅವರ ಸಹೋದರಿಯ ಮಗ ಸಾಯಿ ಧರಮ್ ತೇಜ್ ಅವರ 15ನೇ ಸಿನಿಮಾ ಸೆಟ್ಟೇರಿದ್ದು ಶೂಟಿಂಗ್ ಕೂಡ ಶುರುವಾಗಿದೆ. ಕಳೆದ ವರ್ಷ ಅಪಘಾತದಿಂದ ಗಾಯಗೊಂಡಿದ್ದ ಸಾಯಿ ಧರಮ್ ತೇಜ್, ಇದೀಗ ಪುನಃ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಈಗ ಅವರು ಹೊಸ ಸಿನಿಮಾವನ್ನು ಆರಂಭಿಸಿದ್ದಾರೆ. ಆ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿರುವುದು ವಿಶೇಷ. ಈ ಕುರಿತು ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಿದೆ. 'ನಮ್ಮ ತಂಡಕ್ಕೆ ಸ್ವಾಗತ ಸಹೋದರ ಅಜನೀಶ್ ಲೋಕನಾಥ್.. ಇನ್ನಷ್ಟು ಸಂಗೀತಮಯವಾಗಲಿ..' ಎಂದು ಸಾಯಿ ಧರಮ್ ತೇಜ್ ಹೇಳಿಕೊಂಡಿದ್ದಾರೆ.
ಈ ಸಿನಿಮಾಗೆ ಕಾರ್ತಿಕ್ ದಂಡು ನಿರ್ದೇಶನ ಮಾಡುತ್ತಿದ್ದು, 'ರಂಗಸ್ಥಲಂ', 'ಪುಷ್ಪ' ಖ್ಯಾತಿಯ ನಿರ್ದೇಶಕ ಸುಕುಮಾರ್ ಈ ಸಿನಿಮಾಗೆ ಸ್ಕ್ರಿಪ್ಟ್ ಬರೆದಿರುವುದು ವಿಶೇಷ. ಸದ್ಯಕ್ಕಿನ್ನೂ ಶೀರ್ಷಿಕೆ ನಿಗದಿಯಾಗಿಲ್ಲ. ಈ ಸಿನಿಮಾಕ್ಕೆ ಬಿವಿಎಸ್ಎನ್ ಪ್ರಸಾದ್ ಹಣ ಹಾಕುತ್ತಿದ್ದಾರೆ.
2009ರಲ್ಲೇ ಚಿತ್ರರಂಗ ಪ್ರವೇಶಿಸಿದ್ದ ಅಜನೀಶ್ ಲೋಕನಾಥ್ಗೆ ಬ್ರೇಕ್ ಸಿಕ್ಕಿದ್ದು 2014ರಲ್ಲಿ ತೆರೆಕಂಡ 'ಉಳಿದವರು ಕಂಡಂತೆ' ಚಿತ್ರದಿಂದ. ಆನಂತರ ಅವರು ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ನಂತರ 'ಕಿರಿಕ್ ಪಾರ್ಟಿ' ಸಿನಿಮಾಡ ಆಡಿಯೋ ಕೂಡ ಅದ್ಭುತ ಯಶಸ್ಸನ್ನು ಕಂಡಿತು. 'ಕಿರಿಕ್ ಪಾರ್ಟಿ' ಚಿತ್ರ ತೆಲುಗಿಗೆ ರಿಮೇಕ್ ಆದಾಗ ಅದಕ್ಕೂ ಅಜನೀಶ್ ಸಂಗೀತ ನೀಡಿದ್ದರು. ಆ ಮೂಲಕ ಅವರು ಟಾಲಿವುಡ್ಗೆ ಮೊದಲ ಬಾರಿಗೆ ಎಂಟ್ರಿ ನೀಡಿದ್ದರು. ನಂತರ ಬಂದ 'ನನ್ನು ದೊಚುಕುಂಡುವಟೆ' ಸಿನಿಮಾಕ್ಕೂ ಅಜನೀಶ್ ಸಂಗೀತ ನೀಡಿದ್ದರು. ಇದೀಗ ನಾಲ್ಕು ವರ್ಷಗಳ ನಂತರ ಮತ್ತೆ ತೆಲುಗಿಗೆ ರೀ-ಎಂಟ್ರಿ ನೀಡಿದ್ದಾರೆ ಅಜನೀಶ್.
ಸಖತ್ ಬ್ಯುಸಿ ಸಂಗೀತ ನಿರ್ದೇಶಕ
ಸದ್ಯ 'ಕಾಂತಾರ' ದೊಡ್ಡ ಯಶಸ್ಸು ಕಂಡಿದೆ. ಅಕ್ಟೋಬರ್ 28ರಂದು ತೆರೆಗೆ ಬರಲಿರುವ ಪುನೀತ್ ರಾಜ್ಕುಮಾರ್ ಅವರ ಬಹುನಿರೀಕ್ಷಿತ 'ಗಂಧದ ಗುಡಿ'ಗೂ ಕೂಡ ಅಜನೀಶ್ ಸಂಗೀತವಿದೆ. ನವೆಂಬರ್ 4ರಂದು ರಿಲೀಸ್ ಆಗಲಿರುವ 'ಬನಾರಸ್' ಹಾಡುಗಳಿಗೂ ಅಜನೀಶ್ ಸಂಗೀತ ಸಂಯೋಜಿಸಿದ್ದಾರೆ. ಆದಾದ ಮೇಲೆ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ', 'ಸ್ಪೂಕಿ ಕಾಲೇಜ್', 'ವಾಮನ', 'ಚಾಂಪಿಯನ್', 'ಕೈವ', 'ಹೊಯ್ಸಳ', 'ಯುಐ', 'ಬೆಲ್ ಬಾಟಂ 2', 'ಬಘೀರ', 'ರಿಚರ್ಡ್ ಆಂಟನಿ' ಇನ್ನೂ ಮುಂತಾದ ಸಿನಿಮಾಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಲಿದ್ದಾರೆ.
Kantara Music Director Ajaneesh Loknath Gets On Board For Sai Dharam Tejs New Movie.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm