ಬ್ರೇಕಿಂಗ್ ನ್ಯೂಸ್
26-11-22 01:54 pm Source: Vijayakarnataka ಸಿನಿಮಾ
ಸ್ಯಾಂಡಲ್ವುಡ್ ಭಾರತೀಯ ಚಿತ್ರರಂಗದ ಶೈನಿಂಗ್ ಸ್ಟಾರ್ ಆಗಿದೆ. ಕನ್ನಡದ ಸಿನಿಮಾಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಮೊನ್ನೆಯಷ್ಟೇ ಕನ್ನಡದ ಪ್ರತಿಭಾವಂತ ನಟ ಪ್ರಮೋದ್ ‘ಸಲಾರ್’ ಸಿನಿಮಾದಲ್ಲಿ ನಟಿಸುವ ಸುದ್ದಿ ಹೊರಬಿದ್ದಿತ್ತು. ಈಗ ‘ಧೂಮಂ’ ಎಂಬ ಬಹುಭಾಷಾ ಸಿನಿಮಾದಲ್ಲಿ ಹಲವು ಕನ್ನಡದ ಕಲಾವಿದರು ಮತ್ತು ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ.
ಲೂಸಿಯಾ, ಯೂ ಟರ್ನ್ ಸಿನಿಮಾಗಳ ಮೂಲಕ ಪ್ರತಿಭಾವಂತ ನಿರ್ದೇಶಕ ಎಂದು ಹೆಸರು ಮಾಡಿರುವ ಪವನ್ ಕುಮಾರ್ ‘ಧೂಮಂ’ ಸಿನಿಮಾವನ್ನು ಮಲಯಾಳಂನ ಖ್ಯಾತ ನಟ ಫಹದ್ ಫಾಸಿಲ್ಗೆ ನಿರ್ದೇಶನ ಮಾಡುತ್ತಿದ್ದಾರೆ. ಇದನ್ನು ಕೆಜಿಎಫ್ ನಿರ್ಮಾಪಕರು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿಹಲವು ದಿನಗಳ ಕಾಲ ಚಿತ್ರೀಕರಣ ಮುಗಿಸಿದ್ದಾರೆ ಕೂಡ.
‘ಧೂಮಂ ಒಂದು ಸಸ್ಪೆನ್ಸ್ ಸಿನಿಮಾ. ನನ್ನ ಹಿಂದಿನ ಸಿನಿಮಾಗಳಂತೆ ಇಲ್ಲಿಯೂ ಹೊಸ ರೀತಿಯ ನಿರೂಪಣೆ ಇರುತ್ತದೆ. ನಾನು ಯಾವುದೇ ಭಾಷೆಯಲ್ಲಿ ಕೆಲಸ ಮಾಡಿದರೂ ಕನ್ನಡದವರು ಇದ್ದೇ ಇರುತ್ತಾರೆ. ಈ ಬಾರಿಯೂ ಅದು ರಿಪೀಟ್ ಆಗಿದೆ. ‘ಧೂಮಂ’ನಲ್ಲಿ ಅಚ್ಯುತ್ ಕುಮಾರ್, ಕಿರಣ್ ನಾಯಕ್ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ ಪವನ್ ಕುಮಾರ್.
‘ಧೂಮಂ’ ಚಿತ್ರವನ್ನು ಬಹುಭಾಷಾ ಸಿನಿಮಾ ಎಂದು ಕರೆದರೂ ಫಹದ್ ಫಾಸಿಲ್ ಮತ್ತು ಅಪರ್ಣಾ ಬಾಲಮುರಳಿ ಇರುವುದರಿಂದ ಮಲಯಾಳಂ ಸಿನಿಮಾ ಎಂದೇ ಪರಿಗಣಿತವಾಗುತ್ತದೆ. ಇದು ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿತಯಾರಾಗುತ್ತಿದೆ.
ಲವಲವಿಕೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ಅಚ್ಯುತ್ ಕುಮಾರ್ ಮತ್ತು ಕಿರಣ್ ನಾಯಕ್ ಅವರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಚ್ಯುತ್ ಕುಮಾರ್ ಈಗಾಗಲೇ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಮಲಯಾಳಂ ಚಿತ್ರರಂಗಕ್ಕೆ ‘ಧೂಮಂ’ ಸಿನಿಮಾ ಮೂಲಕ ಕಾಲಿಟ್ಟಿದ್ದಾರೆ. ಕನ್ನಡದ ಕಿರುತೆರೆ, ಹಿರಿತೆರೆಯಲ್ಲಿ ಹೆಚ್ಚಾಗಿ ಪೊಲೀಸ್ ಅಧಿಕಾರಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನಟ ಕಿರಣ್ ನಾಯಕ್ಗೂ ಇದು ಮೊದಲ ಮಲಯಾಳಂ ಸಿನಿಮಾ. ಕಿರಣ್ ಈಗಾಗಲೇ ಪವನ್ ಕುಮಾರ್ ಅವರ ತೆಲುಗು ಮತ್ತು ತಮಿಳಿನ ‘ಯೂ ಟರ್ನ್’ ಸಿನಿಮಾದಲ್ಲಿಯೂ ನಟಿಸಿದ್ದಾರೆ.
ಒಟ್ಟಾರೆ ಕನ್ನಡದ ಒಂದಷ್ಟು ಪ್ರತಿಭಾವಂತರು ಉತ್ತಮ ನಿರ್ಮಾಣ ಸಂಸ್ಥೆ ಮತ್ತು ನಿರ್ದೇಶಕರುಗಳಿಂದ ಇತರೆ ಭಾಷೆಯ ಪ್ರೇಕ್ಷಕರು ಮತ್ತು ಚಿತ್ರರಂಗಕ್ಕೆ ಪರಿಚಯಗೊಳ್ಳುತ್ತಿರುವುದು ಗಮನಾರ್ಹ.
‘ಧೂಮಂ’ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಇನ್ನೊಂದೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಮುಂದಿನ ಶೆಡ್ಯೂಲ್ ಹೈದರಾಬಾದ್ನಲ್ಲಿ ನಡೆಯಲಿದ್ದು. ಇಲ್ಲಿಯವರೆಗೂ ಬಹಳ ಚೆನ್ನಾಗಿ ಚಿತ್ರೀಕರಣವಾಗಿದೆ ಎಂದಿದ್ದಾರೆ ನಿರ್ದೇಶಕ ಪವನ್ ಕುಮಾರ್
Fahadh Faasil Dhoomam Movie Actor Achyuth Kumar And Kiran Nayak.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am