ಬ್ರೇಕಿಂಗ್ ನ್ಯೂಸ್
19-02-22 09:27 pm Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ಪವಿತ್ರ ತುಳಸಿ ಗಿಡದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ! ಇದರ ಎಲೆ, ಬೀಜಗಳು, ಕಾಂಡಗಳು ಎಲ್ಲವೂ ಕೂಡ ಒಂದಲ್ಲ ಒಂದು ರೀತಿಯಿಂದ ಪ್ರಯೋಜನಕ್ಕೆ ಬರುತ್ತಾ ಇರುತ್ತದೆ. ಪುರಾತನ ಕಾಲದಿಂದಲೂ ಕೂಡ ತುಳಸಿ ಗಿಡದ ಎಲೆಗಳನ್ನು ಆಯುರ್ವೇದದಲ್ಲಿ ಔಷಧಿಯಾಗಿಯೂ ಬಳಸಿ ಕೊಂಡು ಬರಲಾಗುತ್ತಾ ಇದೆ. ತುಳಸಿ ಎಲೆಯಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇದೆ ಎಂದು ಹೇಳಲಾಗುತ್ತದೆ. ಕೆಲವೊಂದು ಅಧ್ಯಯನಗಳು ಕೂಡ ಇದನ್ನು ಸಾಬೀತು ಮಾಡಿವೆ. ಆದರೆ ಇದು ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ, ಇದರ ಎಲೆಗಳಂತೆಯೇ, ಇದರಲ್ಲಿರುವ ಬೀಜಗಳು ಕೂಡ ಅಷ್ಟೇ ಆರೋಗ್ಯಕಾರಿ ಪ್ರಯೋಜನಗಳನ್ನು ಒಳಗೊಂಡಿದೆ.
ಇತ್ತೀಚಿಗೆ ಸಂಶೋಧಕರು, ಕೂಡ ತುಳಸಿ ಬೀಜಗಳಲ್ಲಿರುವ ಆರೋಗ್ಯ ವಿಚಾರಗಳ ಬಗ್ಗೆ ಸರಿಯಾಗಿ ಅಧ್ಯಾಯನ ನಡೆಸಿ, ಇದರಲ್ಲಿರುವ ಆರೋಗ್ಯ ಪ್ರಯೋಜನಗಳ ಬಗ್ಗೆ ಮಾಹಿತಿಯನ್ನು ಹಂಚಿ ಕೊಂಡಿದ್ದಾರೆ. ತುಳಸಿ ಬೀಜಗಳನ್ನು ನಮ್ಮ ದೈನಂದಿನ ಆರೋಗ್ಯ ಕ್ರಮದಲ್ಲಿ ಬಳಸುವುದರಿಂದ ಕೆಟ್ಟ ಆರೋಗ್ಯ ಪರಿಸ್ಥಿತಿ ದೂರವಾಗಿ ಅತ್ಯುತ್ತಮವಾದ ಆರೋಗ್ಯದ ಲಾಭಗಳು ಸಿಗುತ್ತವೆ. ಬನ್ನಿ ಇಂದಿನ ಲೇಖನದಲ್ಲಿ ಈ ಪವಿತ್ರ ತುಳಸಿ ಬೀಜಗಳ ಆರೋಗ್ಯ ಪ್ರಯೋಜನಗಳ ಬಗ್ಗೆ ನೋಡೋಣ..
ದೇಹದ ತೂಕ ಕಡಿಮೆ ಆಗಲು ನೆರವಾಗುತ್ತದೆ
ಕೆಮ್ಮು ಮತ್ತು ಶೀತಕ್ಕೆ ರಾಮಬಾಣ
ನೈಸರ್ಗಿಕ ವಿಧಾನದಲ್ಲಿ ನಮಗೆ ಬರುವಂತಹ ಶೀತ ಮತ್ತು ಕೆಮ್ಮಿನ ಸಮಸ್ಯೆಯನ್ನು ಹೋಗಲಾಡಿ ಸುವಲ್ಲಿ ತುಳಸಿ ಬೀಜಗಳು ತುಂಬಾನೇ ಆರೋಗ್ಯಕಾರಿ. ಇನ್ನು ಗಿಡಮೂಲಿಕೆ ಔಷಧಿಗಳಲ್ಲಿ ತುಳಸಿ ಬೀಜಗಳಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ.
ಈಗಲೂ ಕೂಡ ಆಯುರ್ವೇದ ಪಂಡಿತರು ಶೀತ ಕೆಮ್ಮು ಮತ್ತು ಅಸ್ತಮಾ ಸಮಸ್ಯೆಯನ್ನು ದೂರಮಾಡಲು, ಈ ತುಳಸಿ ಬೀಜಗಳನ್ನು ಬಳಸುತ್ತಿದ್ದಾರೆ. ತುಳಸಿ ಬೀಜಗಳಲ್ಲಿ ಆಂಟಿ ಸ್ಪಾಸ್ಮೊಡಿಕ್ ಗುಣಲಕ್ಷಣಗಳು ಹೇರಳವಾಗಿ ಕಂಡು ಬರುವುದರಿಂದ, ಇವು ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತವೆ.
ಚರ್ಮದ ಸಮಸ್ಯೆಗಳಿಗೆ
ಚರ್ಮದ ಸಮಸ್ಯೆಗಳಾದ ಇಸುಬು, ಸೋರಿಯಾಸಿಸ್ ಅಥವಾ ಇನ್ನಿತರ ಯಾವುದಾದರೂ ಚರ್ಮದ ಸೋಂಕುಗಳು ಕಂಡುಬಂದಿದ್ದರೆ, ತುಳಸಿ ಬೀಜಗಳನ್ನು ಸಣ್ಣಗೆ ಪೌಡರ್ ರೀತಿ ಮಾಡಿಕೊಂಡು, ಇದಕ್ಕೆ ಒಂದೆರಡು ಟೇಬಲ್ ಚಮಚ ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ ಸೋಂಕು ಇರುವ ಭಾಗದಲ್ಲಿ ಹಚ್ಚಬಹುದು. ಉತ್ತಮ ಫಲಿತಾಂಶಕ್ಕೆ ಒಂದೆರಡು ವಾರ ನಿರಂತರವಾಗಿ ಈ ಮನೆಮದ್ದನ್ನು ಬಳಸುತ್ತಾ ಬಂದರೆ, ಈ ಸಮಸ್ಯೆಯಿಂದ ಪಾರಾಗಬಹುದು.
ಬಾಡಿ ಹೀಟ್ ಕಮ್ಮಿ ಮಾಡುತ್ತೆ!
ತುಳಸಿ ಬೀಜಗಳ ನೆನೆಸಿಟ್ಟ ತಂಪು ಪಾನೀಯ ಬೀಸಿಗೆಯಲ್ಲಿ ತುಂಬಾನೇ ಫೇಮಸ್! ಯಾಕೆಂದರೆ ಈ ಬೀಜಗಳು ದೇಹಕ್ಕೆ ತಂಪು ನೀಡುವುದರ ಜೊತೆಗೆ, ದೇಹದ ಉಷ್ಣಾಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಜೊತೆಗೆ ನಮ್ಮ ಹೊಟ್ಟೆಯ ಕೆಲವು ಆರೋಗ್ಯದ ಅಸ್ವಸ್ಥತೆಗಳನ್ನು ದೂರ ಮಾಡುವ ಲಕ್ಷಣಗಳನ್ನು ಪಡೆದಿವೆ.
ತಲೆ ಕೂದಲಿನ ಆರೈಕೆ
ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿಗೆಯೇ ತಲೆ ಕೂದಲು ಬೆಳ್ಳಗಾಗುವುದು ಮತ್ತು ಉದುರಿ ಹೋಗುವುದು ಹೆಚ್ಚಿನವರಿಗೆ ಕಾಡುತ್ತಲೇ ಇರುತ್ತದೆ. ಆದರೆ ಈ ಸಮಸ್ಯೆಯನ್ನು ನಿಯಂತ್ರಿಸಲು ರಾಸಾಯನಿಕ ಉತ್ಪನ್ನಗಳನ್ನು ಉಪಯೋಗಿಸುವ ಬದಲು, ಮನೆಯಲ್ಲಿಯೇ ತುಳಸಿ ಬೀಜಗಳನ್ನು ಬಳಸಿ ಮಾಡಿದ ಹೇರ್ ಪ್ಯಾಕ್ ಬಳಸಿದರೆ, ಕೂದಲಿನ ಸಮಸ್ಯೆಯಿಂದ ಪಾರಾಗಬಹುದು.
ಹೀಗೆ ಮಾಡಿ:
ಒಂದೆರಡು ಒಣಗಿದ ನೆಲ್ಲಿಕಾಯಿ ಮತ್ತು ತುಳಸಿ ಬೀಜಗಳ ಪುಡಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಇನ್ನು ಇವೆರಡನ್ನೂ ಕೂಡ ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಅದಕ್ಕೆ ಒಂದೆರಡು ಚಮಚ ತೆಂಗಿನ ಎಣ್ಣೆಯನ್ನು ಹಾಕಿ, ನಯವಾದ ಪೇಸ್ಟ್ ಮಾಡಿಕೊಳ್ಳಿ ಇಷ್ಟಾದ ಮೇಲೆ ಬ್ರಷ್ನ ಸಹಾಯದಿಂದ ತಲೆಯ ನೆತ್ತಿ ಭಾಗಕ್ಕೆ ಹಚ್ಚಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಬಾರಿ ಆದರೂ ಈ ಮನೆಮದ್ದನ್ನು ಟ್ರೈ ಮಾಡಿ.
ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ
ತುಳಸಿ ಎಲೆಗಳಲ್ಲಿ ಇರುವಂತೆಯೇ ಇದರ ಬೀಜಗಳಲ್ಲಿ ಕೂಡ ಅಷ್ಟೇ, ಅಧಿಕ ಪ್ರಮಾಣದಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಕಂಡು ಬರುವುದರಿಂದ, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದರ ಜೊತೆಗೆ, ಫ್ರೀ ರಾಡಿಕಲ್ ಗಳ ಹಾನಿಯನ್ನು ತಪ್ಪಿಸುವಲ್ಲಿ ಕೂಡ ಸಹಾಯ ಮಾಡುತ್ತದೆ.
The Health Benefits Of Basil Seeds That You May Not Have Known.
27-06-24 05:32 pm
Bangalore Correspondent
Heart attack, Kodagu, Madikeri: ಕೊಡಗು ; ಹೃದಯಾ...
27-06-24 04:11 pm
DK Shivakumar, Siddaramaiah, Vokkaliga seer:...
27-06-24 02:56 pm
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವ್ಯಕ್ತಿಯನ್ನ...
27-06-24 02:53 pm
Valmiki Scam, fraud crime ; ವಾಲ್ಮೀಕಿ ನಿಗಮದ ಹಗ...
26-06-24 07:37 pm
26-06-24 05:50 pm
HK News Desk
ಪುಣೆ ಪೋರ್ಷೆ ಕಾರು ಆ್ಯಕ್ಸಿಡೆಂಟ್ ಕೇಸ್ ; ಎರಡು ಜೀ...
25-06-24 09:51 pm
ಸ್ಪೀಕರ್ ಹುದ್ದೆಗೆ ಎನ್ಡಿಎ ಒಕ್ಕೂಟದಿಂದ ಮತ್ತೆ ಓಂ ಬ...
25-06-24 08:25 pm
Ayodhya Ram temple water leak; ತರಾತುರಿಯಲ್ಲಿ ಲ...
25-06-24 02:56 pm
NEET scam, CBI: ನೀಟ್ ಪರೀಕ್ಷೆ ಅಕ್ರಮ ; ಎಫ್ಐಆರ್...
23-06-24 09:39 pm
27-06-24 10:59 pm
Mangalore Correspondent
Mangalore rain, Belthangady, current shock: ಬ...
27-06-24 10:29 pm
Mangalore rain, school college holiday: ದಕ್ಷಿ...
27-06-24 07:36 pm
IAS Suhas LY, Para Badminton: ಪ್ಯಾರಾ ಬ್ಯಾಡ್ಮಿ...
27-06-24 07:14 pm
illegal sand, Pavoor Uliya, Muneer Katipalla;...
27-06-24 03:01 pm
27-06-24 05:10 pm
Bangalore Correspondent
Tumkur police, crime, Child Trafficking: ತುಮಕ...
27-06-24 01:34 pm
Pavoor-Uliya Kudru, Mangalore, Sand Mining: ಪ...
26-06-24 11:10 pm
MLA Harish Gowda, Honey Trap: ಮೈಸೂರಿನಲ್ಲಿ ಶಾಸ...
26-06-24 06:15 pm
Mangalore crime, Surathkal Police: ಸುರತ್ಕಲ್ ಬ...
25-06-24 11:06 pm