ಒಣದ್ರಾಕ್ಷಿ ನೆನೆಸಿದ ನೀರನ್ನು ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಹೆಚ್ಚಿನ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ!

19-07-23 09:06 pm       Source: Vijayakarnataka   ಡಾಕ್ಟರ್ಸ್ ನೋಟ್

ಈ ಒಂದು ಮ್ಯಾಜಿಕ್ ಡ್ರಿಂಕ್ ನಿಮ್ಮ ಆರೋಗ್ಯದ ಮೇಲೆ ಚಮತ್ಕಾರವನ್ನೇ ಮಾಡುತ್ತದೆ. ಆದರೆ ನೀವು ಇದನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಅಷ್ಟೇ!

ನಾವು ಬೆಳಗ್ಗೆ ಮೊದಲನೆಯ ಆಹಾರವಾಗಿ ಏನನ್ನು ತಿನ್ನುತ್ತೇವೆ ಅದು ನಮ್ಮ ಇಡೀ ದಿನದ ಕಾರ್ಯ ಚಟುವಟಿಕೆ ಯನ್ನು ನಿಯಂತ್ರಿಸುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ನಮ್ಮ ಮೊದಲ ಆಹಾರ ಎಂದಿಗೂ ಆರೋಗ್ಯಕರವಾಗಿ ಕೂಡಿರಬೇಕು.

ಗಟ್ಟಿಯಾದ ಆಹಾರಕ್ಕಿಂತ ದ್ರವಹಾರ ಆರೋಗ್ಯಕ್ಕೆ ಬಹಳ ಒಳ್ಳೆಯದು. ನಾವು ಇಲ್ಲಿ ಒಂದು ಅದ್ಭುತವಾದ ಪಾನೀ ಯದ ಬಗ್ಗೆ ಮಾತನಾಡಲು ಹೊರಟಿದ್ದೇವೆ. ಅದುವೇ ಒಣದ್ರಾಕ್ಷಿ ಹಣ್ಣಿನ ನೀರು. ಇಡೀ ರಾತ್ರಿ ಒಣದ್ರಾಕ್ಷಿ ಹಣ್ಣು ಗಳನ್ನು ನೆನೆ ಹಾಕಿ ಅದರ ನೀರನ್ನು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಅದ್ಭುತ ವಾದ ಆರೋಗ್ಯದ ಲಾಭಗಳನ್ನು ನಿರೀಕ್ಷೆ ಮಾಡಬಹುದು.

ಖಾಲಿ ಹೊಟ್ಟೆಗೆ ಒಣದ್ರಾಕ್ಷಿ ನೀರು!

ಖಾಲಿ ಹೊಟ್ಟೆಗೆ ಒಣದ್ರಾಕ್ಷಿ ನೀರು!:

ದೇಹಕ್ಕೆ ಸಿಗಬೇಕಾದ ಪೌಷ್ಟಿಕಾಂಶಗಳ ಜೊತೆಗೆ ಆರೋಗ್ಯವನ್ನು ಬಹು ಆಯಾಮದಲ್ಲಿ ಅಭಿವೃದ್ಧಿಪಡಿಸುವ ಗುಣ ಒಣ ದ್ರಾಕ್ಷಿ ನೀರಿಗೆ ಇದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಈ ಕೆಳಗಿನ ಆರೋಗ್ಯ ಲಾಭಗಳು ಸಿಗುತ್ತವೆ.

ದೇಹವನ್ನು ವಿಷಕಾರಿ ಮುಕ್ತವಾಗಿಸುತ್ತದೆ

ದೇಹವನ್ನು ವಿಷಕಾರಿ ಮುಕ್ತವಾಗಿಸುತ್ತದೆ:

  • ನಮ್ಮ ದೇಹದಲ್ಲಿ ಇರುವ ಲಿವರ್ ಬಗ್ಗೆ ನಿಮಗೆಲ್ಲಾ ಗೊತ್ತು. ಇದು ನೈಸರ್ಗಿಕವಾಗಿ ವಿಷಕಾರಿ ಅಂಶಗಳಿಂದ ನಮ್ಮನ್ನು ಕಾಪಾಡುತ್ತದೆ.
  • ನಾವು ತಿನ್ನುವ ಕೆಟ್ಟ ಆಹಾರ ಪದಾರ್ಥಗಳು ಮತ್ತು ಅನಾರೋಗ್ಯಕರ ಜೀವನ ಶೈಲಿ ಲಿವರ್ ಭಾಗವನ್ನು ಹಾಳು ಮಾಡುತ್ತದೆ. ಈ ಸಂದರ್ಭದಲ್ಲಿ ಹೊರಗಿನಿಂದ ಲಿವರ್ ಭಾಗ ವನ್ನು ಸ್ವಚ್ಛ ಮಾಡುವ ಅವಶ್ಯಕತೆ ಎದುರಾಗುತ್ತದೆ.
  • ಲಿವರ್ ಭಾಗವನ್ನು ವಿಷಕಾರಿ ಅಂಶದಿಂದ ಮುಕ್ತವಾ ಗಿಸಲು ಒಣ ದ್ರಾಕ್ಷಿಯನ್ನು ನೆನೆಸಿದ ನೀರು ಸಹಾಯ ಮಾಡುತ್ತದೆ. ಇಡೀ ರಾತ್ರಿ ಒಣ ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿ ಬೆಳಗಿನ ಸಮಯ ದಲ್ಲಿ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವನೆ ಮಾಡುವುದರಿಂದ ಕೇವಲ ಮಾತ್ರವಲ್ಲ ನಮ್ಮ ಇಡೀ ದೇಹ ಸ್ವಚ್ಛವಾಗುತ್ತದೆ ಎಂದು ಹೇಳ ಬಹುದು.
  • ಅಷ್ಟೇ ಅಲ್ಲದೆ ಒಣ ದ್ರಾಕ್ಷಿಯಲ್ಲಿ ನಾರಿನ ಅಂಶ ಅಧಿಕ ವಾಗಿರುವುದರಿಂದ ನಮ್ಮ ಲಿವರ್ ಭಾಗ ಬೈಲ್ ಜ್ಯೂಸ್ ಉತ್ಪತ್ತಿ ಮಾಡಲು ಇದು ನೆರವಾಗುತ್ತದೆ.​

Food Poisoning Symptoms | CDC

ಹೊಟ್ಟೆಯ ಆರೋಗ್ಯಕ್ಕೆ ಉತ್ತಮ:

  • ಕರಗದೇ ಇರುವ ನಾರಿನ ಅಂಶ ಮತ್ತು ನೈಸರ್ಗಿಕವಾದ ದ್ರವ ಒಣದ್ರಾಕ್ಷಿಯಲ್ಲಿ ಹೆಚ್ಚಾಗಿ ಕಂಡುಬರುವುದರಿಂದ ಇದನ್ನು ನೆನೆಸಿದ ನೀರನ್ನು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಮ್ಮ ಜೀರ್ಣಶಕ್ತಿ ಹೆಚ್ಚಾಗುತ್ತದೆ.
  • ನಮ್ಮ ಕರುಳಿನ ಭಾಗ ಸ್ವಚ್ಛವಾಗುತ್ತದೆ ಮತ್ತು ಮಲ ಬದ್ಧತೆ ಸಮಸ್ಯೆ ದೂರವಾಗುತ್ತದೆ. ನೈಸರ್ಗಿಕವಾಗಿ ನಮ್ಮ ಹೊಟ್ಟೆ ಯನ್ನು ಸ್ವಚ್ಛಪಡಿಸಿಕೊಳ್ಳಲು ಇದೊಂದು ಉತ್ತಮ ಪರಿಹಾರ.​

A nutritionist shares 3 food hacks to prevent acidity | Health News, The  Indian Express

ಗ್ಯಾಸ್ಟ್ರಿಕ್ ಸಮಸ್ಯೆಗೆ ರಾಮಬಾಣ:

  • ನಮ್ಮ ರಕ್ತದಲ್ಲಿ ಕೂಡ ಆಮ್ಲಿಯ ಮಟ್ಟ ಹೆಚ್ಚಾದರೆ ಮತ್ತು ನಮ್ಮ ಉಸಿರಾಟ ವ್ಯವಸ್ಥೆಯಲ್ಲಿ ಆಮ್ಲಗಳು ಹೆಚ್ಚಾಗುವುದರಿಂದ ಆರೋಗ್ಯಕ್ಕೆ ತೊಂದರೆ ಜಾಸ್ತಿ.
  • ಆದರೆ ಕಪ್ಪು ದ್ರಾಕ್ಷಿಯನ್ನು ನೆನೆಸಿ ಅದರ ನೀರು ಕುಡಿಯುವು ದರಿಂದ ನಮ್ಮ ದೇಹಕ್ಕೆ ಪೊಟಾಸಿಯಂ ಮತ್ತು ಮೆಗ್ನೀಷಿಯಂ ಪ್ರಮಾಣ ಹೆಚ್ಚಾಗಿ ಸಿಗುತ್ತದೆ. ಇದರಿಂದ ನಮ್ಮ ಹೊಟ್ಟೆಯ ಭಾಗದ ಆಮ್ಲಗಳು ನಿಯಂತ್ರಣಕ್ಕೆ ಬಂದು ಗ್ಯಾಸ್ಟ್ರಿಕ್ ಸಮಸ್ಯೆ ಪರಿಹಾರ ವಾಗುತ್ತದೆ.

ರಕ್ತ ಹೀನತೆ ಸಮಸ್ಯೆಗೆ ಇಲ್ಲಿದೆ 'ಪರಿಹಾರ' | Kannada Dunia | Kannada News |  Karnataka News | India News

ರಕ್ತಹೀನತೆ ಸಮಸ್ಯೆಯನ್ನು ದೂರ ಮಾಡುತ್ತದೆ:

ನೆನೆಸಿದ ಒಣ ದ್ರಾಕ್ಷಿ ನೀರಿನಲ್ಲಿ ನಮಗೆ ಕಬ್ಬಿಣದ ಅಂಶ, ಬಿ ಕಾಂಪ್ಲೆಕ್ಸ್ ವಿಟಮಿನ್ ಮತ್ತು ತಾಮ್ರದ ಅಂಶ ಅಪಾರವಾಗಿ ಸಿಗುತ್ತದೆ. ಇವುಗಳಿಂದ ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಹೆಚ್ಚಾಗುತ್ತದೆ. ತಾಮ್ರದ ಅಂಶ ನಾವು ಸೇವನೆ ಮಾಡುವ ಆಹಾರದಲ್ಲಿ ಕಬ್ಬಿಣದ ಅಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

What Does It Matter If You Have High Cholesterol?

ರಕ್ತದಲ್ಲಿ ಕೊಲೆಸ್ಟ್ರಾಲ್ ನಿಯಂತ್ರಣವಾಗುತ್ತದೆ:

  • ನೆನೆಸಿದ ಒಣ ದ್ರಾಕ್ಷಿಯ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಮ್ಮ ರಕ್ತ ಶುದ್ಧೀಕರಣ ವಾಗುತ್ತದೆ ಮತ್ತು ನಮ್ಮ ಕರುಳು ಸ್ವಚ್ಛವಾಗಿ ಚೆನ್ನಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ನಮ್ಮ ಹೃದಯ ಕೂಡ ಆರೋಗ್ಯಕರವಾಗಿ ಉಳಿಯುತ್ತದೆ.
  • ಅತ್ಯಂತ ಪರಿಣಾಮಕಾರಿಯಾಗಿ ನಮ್ಮ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಹಾಗೂ ಟ್ರೈಗ್ಲಿಸರೈಡ್ ಪ್ರಮಾಣವನ್ನು ಇದು ನಿಯಂತ್ರಣ ಮಾಡುತ್ತದೆ.

kerala natural spices Seedless Black Raisin(black dry grapes) Raisins Price  in India - Buy kerala natural spices Seedless Black Raisin(black dry grapes)  Raisins online at Flipkart.com

ಒಣದ್ರಾಕ್ಷಿ ಶಕ್ತಿ ವರ್ಧಕ:

ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಬೇರೆ ಏನನ್ನು ತಿನ್ನದೇ ಒಣದ್ರಾಕ್ಷಿ ನೆನೆಸಿದ ನೀರನ್ನು ಕುಡಿಯುವುದರಿಂದ ದೇಹಕ್ಕೆ ಅಪಾರವಾದ ಶಕ್ತಿ ಲಭಿಸುತ್ತದೆ. ನಾವು ಇದರಿಂದ ಇಡೀ ದಿನ ಉತ್ತಮವಾಗಿ ಕಾರ್ಯ ಚಟುವಟಿಕೆ ಮಾಡಲು ಅನುಕೂಲ ವಾಗುತ್ತದೆ. ಏಕೆಂದರೆ ಬೆಳಗ್ಗೆ ನಾವು ಸೇವಿಸುವ ಮೊದಲನೆಯ ಆಹಾರ ನಮ್ಮ ದೈಹಿಕ ಸದೃಢತೆಯನ್ನು ಕಾಪಾಡುತ್ತದೆ.

13 Eating Habits That Drastically Change Your Weight Loss Efforts, Say  Dietitians — Eat This Not That

ದೇಹದ ತೂಕ ನಿಯಂತ್ರಣ ಮಾಡುತ್ತದೆ:

ಒಣದ್ರಾಕ್ಷಿ ಹಣ್ಣುಗಳಲ್ಲಿ ನೈಸರ್ಗಿಕವಾಗಿ ಎರಡು ಬಗೆಯ ಸಕ್ಕರೆ ಅಂಶಗಳು ಇರುತ್ತವೆ. ಅವುಗಳೆಂದರೆ ಫ್ರಕ್ಟೂಸ್ ಮತ್ತು ಗ್ಲುಕೋಸ್. ಇವುಗಳು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆ ಯಲ್ಲಿ ನಮ್ಮ ದೇಹ ಸೇರಿದರೆ ನಮಗೆ ಹೆಚ್ಚು ಸಮಯದವರೆಗೆ ದೇಹಕ್ಕೆ ಅಗತ್ಯವಾದ ಶಕ್ತಿ ಸಿಗುತ್ತದೆ ಮತ್ತು ಅನಾರೋಗ್ಯಕರ ಆಹಾರಗಳನ್ನು ಸೇವನೆ ಮಾಡುವ ಸಾಧ್ಯತೆಯಿಂದ ತಪ್ಪಿಸಿ ಕೊಳ್ಳಬಹುದು. ಇದರಿಂದ ಸುಲಭವಾಗಿ ನಮ್ಮ ದೇಹದ ತೂಕ ನಿಯಂತ್ರಣವಾಗುತ್ತದೆ.

Newsroom - Understanding your blood pressure numbers

ಅಧಿಕ ರಕ್ತದ ಒತ್ತಡ ನಿಯಂತ್ರಣವಾಗುತ್ತದೆ:

  • ಪೊಟಾಸಿಯಂ ಪ್ರಮಾಣ ಅಪಾರವಾಗಿರುವ ಒಣ ದ್ರಾಕ್ಷಿ ಹಣ್ಣುಗಳು ರಕ್ತದ ಒತ್ತಡವನ್ನು ನಿಯಂತ್ರಣ ಮಾಡು ವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
  • ಆಂಟಿ ಆಕ್ಸಿಡೆಂಟ್ ಅಂಶಗಳು ಮತ್ತು ನಾರಿನ ಅಂಶ ಹೆಚ್ಚಾ ಗಿರುವ ಒಣದ್ರಾಕ್ಷಿ ಹಣ್ಣುಗಳು ನಮ್ಮ ರಕ್ತನಾಳ ಗಳ ಕಾರ್ಯ ಚಟುವಟಿಕೆಯನ್ನು ಉತ್ತಮಪಡಿಸಿ ಬಿಪಿ ಕಂಟ್ರೋಲ್ ಮಾಡಲು ಅನುಕೂಲ ಮಾಡಿಕೊಡುತ್ತವೆ. ಒಣದ್ರಾಕ್ಷಿ ಹಣ್ಣು ಗಳನ್ನು ನೀರಿನಲ್ಲಿ ನೆನೆ ಹಾಕುವುದ ರಿಂದ ರಕ್ತದ ಒತ್ತಡವನ್ನು ಸುಲಭವಾಗಿ ನಿಯಂತ್ರಣ ಮಾಡಿಕೊಳ್ಳಬಹುದು.​

How to Keep your Mouth and Teeth Healthy | Oral Health Problems | Listerine®

ಬಾಯಿಯ ಆರೋಗ್ಯಕ್ಕೆ ಒಳ್ಳೆಯದು:

ಒಂದು ಲೋಟ ನೆನೆಸಿದ ಒಣದ್ರಾಕ್ಷಿ ಹಣ್ಣುಗಳ ನೀರು ಖಾಲಿ ಹೊಟ್ಟೆಯಲ್ಲಿ ನಮ್ಮ ಬಾಯಿಯ ಮೂಲಕ ನಮ್ಮ ದೇಹ ಸೇರುವುದರಿಂದ ನಮ್ಮ ಹಲ್ಲುಗಳ ಆರೋಗ್ಯ ಅಭಿವೃದ್ಧಿಯಾಗುತ್ತದೆ.

ಹಲ್ಲುಗಳಿಗೆ ಸಂಬಂಧಪಟ್ಟಂತೆ ಅನೇಕ ಸಮಸ್ಯೆಗಳು ಇವುಗ ಳಿಂದ ಪರಿಹಾರವಾಗುತ್ತದೆ. ಏಕೆಂದರೆ ಒಣ ದ್ರಾಕ್ಷಿ ಹಣ್ಣಿನ ನೀರಿನಲ್ಲಿ ಫೈಟೋ ಕೆಮಿಕಲ್ ಅಂಶಗಳು ಮತ್ತು ಓಲಿನೊಲಿಕ್ ಆಮ್ಲಗಳು ಹೆಚ್ಚಾಗಿ ಸಿಗುತ್ತವೆ. ಇದರಿಂದ ಹಲ್ಲುಗಳ ಹಾಗೂ ವಸಡುಗಳ ಆರೋಗ್ಯಕ್ಕೆ ತೊಂದರೆ ಉಂಟು ಮಾಡುವ ಕ್ರಿಮಿಗಳು ನಾಶವಾಗುತ್ತವೆ.​

How to control sugar level in body, make these 6 simple lifestyle changes |  Health - Hindustan Times

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣವಾಗುತ್ತದೆ:

  • ಸಕ್ಕರೆ ಕಾಯಿಲೆ ಹೆಚ್ಚಾಗಿರುವ ಇತ್ತೀಚಿನ ದಿನಗಳಲ್ಲಿ ಇದನ್ನು ನಿಯಂತ್ರಣ ಮಾಡಿಕೊಳ್ಳುವ ಬಗ್ಗೆ ಎಲ್ಲರೂ ಆಲೋಚನೆ ಮಾಡುತ್ತಿರುತ್ತಾರೆ. ಆದರೂ ಕೂಡ ಶುಗರ್ ಕಂಟ್ರೋಲ್ ಮಾಡಿ ಕೊಳ್ಳುವ ವಿಚಾರದಲ್ಲಿ ವಿಫಲ ರಾಗುತ್ತಾರೆ.
  • ಬೆಳಗಿನ ಸಮಯದಲ್ಲಿ ಪ್ರತಿದಿನ ಒಣದ್ರಾಕ್ಷಿ ಹಣ್ಣು ಗಳನ್ನು ನೆನೆಸಿ ಅದರ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳುವುದ ರಿಂದ ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆ ಹೆಚ್ಚಾಗುತ್ತದೆ ಮತ್ತು ರಕ್ತದಲ್ಲಿ ಬ್ಲಡ್ ಶುಗರ್ ಲೆವೆಲ್ ನಿಯಂತ್ರಣಕ್ಕೆ ಬರುತ್ತದೆ.​

The magic drink of soaked raisins water in an empty stomach will make wonders.