ಬ್ರೇಕಿಂಗ್ ನ್ಯೂಸ್
03-03-21 07:04 pm Mangaluru correspondent ಲೀಡರ್ಸ್ ರಿಪೋರ್ಟ್
ಉಳ್ಳಾಲ, ಮಾ.3: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರ ವ್ಯಾಪ್ತಿಯ ಉಳ್ಳಾಲ ನೇತ್ರಾವತಿ ನದಿಯ ಉಭಯ ಸೇತುವೆಗಳಿಗೆ 63 ಲಕ್ಷ ರೂಪಾಯಿ ವೆಚ್ಚದಲ್ಲಿ ಅಳವಡಿಸಲಾದ ಫೆನ್ಸಿಂಗ್ (ತಡೆ ಬೇಲಿ) ಹಾಗೂ ಸಿಸಿ ಕ್ಯಾಮರಾವನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಲೋಕಾರ್ಪಣೆ ಮಾಡಿದರು.
ಈ ವೇಳೆ ಮಾತನಾಡಿದ ಕಾಮತ್, ನೇತ್ರಾವತಿ ಸೇತುವೆಯಲ್ಲಿ ಕಾಫಿ ಡೇ ಮಾಲಕ ಸಿದ್ಧಾರ್ಥ ಸೇರಿದಂತೆ ಅನೇಕ ಸರಣಿ ಆತ್ಮಹತ್ಯೆಗಳು ನಡೆದು ಹೋದವು. ಸಿದ್ಧಾರ್ಥ್ ಆತ್ಮಹತ್ಯೆ ನಡೆದ ಸಂದರ್ಭ ಮೃತದೇಹದ ಶೋಧ ಕಾರ್ಯಕ್ಕೆ ಜಿಲ್ಲಾಡಳಿತವು ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿತ್ತು. ಪ್ರತಿ ಆತ್ಮಹತ್ಯೆ ನಡೆದಾಗಲೂ ಮೃತದೇಹ ಶೋಧಕ್ಕಾಗಿ ಜಿಲ್ಲಾಡಳಿತಕ್ಕೆ ಖರ್ಚು ತಗಲುತ್ತದೆ. ಇದನ್ನೆಲ್ಲ ತಡೆಗಟ್ಟುವ ನಿಟ್ಟಿನಲ್ಲಿ 58 ಲಕ್ಷ ರೂ. ವೆಚ್ಚದಲ್ಲಿ ಎರಡು ಸೇತುವೆಯ ನಾಲ್ಕು ಅಂಚಿಗೂ ಕಬ್ಬಿಣದ ತಡೆಬೇಲಿ ಮತ್ತು ಸೇತುವೆಗೆ ತ್ಯಾಜ್ಯ ಎಸೆಯುವವರ ಮೇಲೆ ನಿಗಾ ಮತ್ತು ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು 5 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ಕಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರು ಅವರ ಕಾಳಜಿಯಿಂದ ಈ ಕಾಮಗಾರಿ ನಡೆದಿದ್ದು ಅನೇಕ ಆತ್ಮಹತ್ಯೆಗಳನ್ನು ತಡೆಯುವ ಉತ್ತಮ ಕಾರ್ಯವಾಗಿದೆ ಎಂದರು. ಸಿಸಿ ಕ್ಯಾಮೆರಾದ ನಿರ್ವಹಣೆಯ ಜವಬ್ದಾರಿಯನ್ನು ಕಂಕನಾಡಿ ನಗರ ಠಾಣೆಗೆ ವಹಿಸಲಾಗಿದೆ ಎಂದರು.
ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರು ಮಾತನಾಡಿ ದುರ್ಘಟನೆಗಳು ನಡೆಯಬಾರದೆಂಬ ಉದ್ದೇಶದಿಂದ ಈ ಕಾಮಗಾರಿ ನಡೆಸಲಾಗಿದೆ. ನೇತ್ರಾವತಿ ಸೇತುವೆ ಆತ್ಮಹತ್ಯೆಯ ಸ್ಪಾಟ್ ಆಗಿತ್ತು. ಶಾಸಕರ ವಿಶೇಷ ಮುತುವರ್ಜಿಯಿಂದ ಈ ಕಾಮಗಾರಿ ನಡೆಸಲಾಗಿದೆ ಎಂದರು.
ಮೂಡಾ ಕಮಿಷನರ್ ದಿನೇಶ್ ಕುಮಾರ್, ಕಾರ್ಪೊರೇಟರ್ ಗಳಾದ ಭಾಸ್ಕರ್ ಚಂದ್ರ ಶೆಟ್ಟಿ,ವೀಣಾ ಮಂಗಳ, ಭಾನುಮತಿ, ರೇವತಿ ಶ್ಯಾಂ ಸುಂದರ್ , ಮೂಡದ ಜೂನಿಯರ್ ಇಂಜಿನಿಯರ್ ಆರತಿ ಶೇಟ್,ಬಿಜೆಪಿ ಕ್ಷೇತ್ರ ಉಪಾಧ್ಯಕ್ಷ ಕಿರಣ್ ರೈ, ಪ್ರಮುಖರಾದ ದೀಪಕ್ ,ಪುಷ್ಪರಾಜ್, ರಾಂ ಪ್ರಸಾದ್, ಪ್ರಸಾದ್ ಬೋಳಾರ್, ಲೋಹಿತ್ ಶೆಟ್ಟಿ ,ಸಿಪ್ರಿಯಮ್, ಉದಯ್ ಕುದ್ರು, ಸುಜಾತ ಕೊಟ್ಟಾರಿ, ಜಗದೀಶ್ ಶೆಟ್ಟಿ, ಶ್ಯಾಂ ಪ್ರಸಾದ್ ,ಪ್ರಾಣೇಶ್, ಹರೀಶ್ ಕಡೆಕಾರ್ ಉಪಸ್ಥಿತರಿದ್ದರು.
In Ullal a 63 lakhs worth camera was installed and the fencing was inaugurated by MLA, Vedavyas Kamath.
27-01-26 09:57 pm
Bangalore Correspondent
ಮದುವೆಯಾದ ಎರಡೂವರೆ ತಿಂಗಳಿಗೆ ಬೇರೆ ಯುವಕನ ಹಿಂದೋಡಿದ...
27-01-26 09:34 pm
400 ಕೋಟಿ ದರೋಡೆ ; ನೋಟುಗಳ ಕಂತೆ ಗುಜರಾತ್ ರಾಜಕಾರಣಿ...
27-01-26 06:31 pm
15ಕ್ಕೂ ಹೆಚ್ಚು ಜನರನ್ನ ಮನಬಂದಂತೆ ಕಚ್ಚಿದ ಹುಚ್ಚು ನ...
27-01-26 04:50 pm
ಬೆಂಗಳೂರಿನ ಟ್ರಾಫಿಕ್, ಧೂಳಿನ ಮಾಲಿನ್ಯಕ್ಕೆ ಬೇಸತ್ತ...
24-01-26 08:31 pm
24-01-26 08:38 pm
HK staffer
ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ; ಕೆಎಸ...
23-01-26 06:44 pm
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
27-01-26 10:50 pm
Mangalore Correspondent
ಫೆ.1ರಂದು "ನಮ್ಮ ನಡಿಗೆ ತಲಪಾಡಿ ದೇವಿಪುರದ ಕಡೆಗೆ" ಬ...
27-01-26 08:58 pm
ದೇಶಕ್ಕಾಗಿ ತನ್ನ ಕಾಲುಗಳನ್ನೇ ಕಳೆದುಕೊಂಡ ಯೋಧನಿಗೆ ಸ...
27-01-26 06:46 am
ಪ್ರವಾಸಿಗರನ್ನು ವಿಹಾರಕ್ಕೆ ಒಯ್ಯುತ್ತಿದ್ದ ದೋಣಿ ಸಮು...
26-01-26 05:05 pm
ರೌಡಿಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ; ಪೊಲೀಸರ ಕೈಗೆ...
24-01-26 11:23 pm
27-01-26 10:18 pm
Bangalore Correspondent
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm
ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಬೋನಸ್ ಬಂದಿದೆ ! ಬಣ್...
27-01-26 03:21 pm
JAKEA Michael Rego, Rajeev Gowda Arrest: ಧಮ್ಕ...
27-01-26 12:22 pm