ಬ್ರೇಕಿಂಗ್ ನ್ಯೂಸ್
30-07-23 09:20 pm Mangalore Correspondent ಕ್ರೈಂ
ಉಳ್ಳಾಲ, ಜು.30: ಮಂಗಳೂರಿನಲ್ಲಿ ಕಳವಾಗಿದ್ದ ಬೈಕ್ ಒಂದು ತೊಕ್ಕೊಟ್ಟಿನಲ್ಲಿ ಪತ್ತೆಯಾಗಿದ್ದು ಬೈಕನ್ನ ಚಲಾಯಿಸುತ್ತಿದ್ದ ಕಳ್ಳ ಸಿಸಿಟಿವಿ ಫೂಟೇಜಲ್ಲಿ ಸೆರೆಯಾಗಿದ್ದಾನೆ. ಅಷ್ಟಕ್ಕೂ ಮಾರ್ಕೆಟಲ್ಲಿ ಮೌಲ್ಯವಿಲ್ಲದ ಬೈಕ್ ಗಳನ್ನ ಕದಿಯೋ ಖದೀಮರು ಕದ್ದ ಬೈಕ್ ನಂಬರ್ ಪ್ಲೇಟ್ ಕಳಚಿ ಅಡ್ಡ ಕಸುಬಿಗೆ ಬಳಸುತ್ತಿರುವ ಶಂಕೆ ಮೂಡಿದೆ.
ಕೊಲ್ಯ ಸಾರಸ್ವತ ಕಾಲನಿಯ ಸಂಜಯ್(23) ಎಂಬವರು ಚಲಾಯಿಸುತ್ತಿದ್ದ ಬೈಕ್ ಕಳೆದ ಜುಲೈ 20 ರಂದು ಮಂಗಳೂರಿನಲ್ಲಿ ಕಳವಾಗಿದ್ದು ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜುಲೈ 20 ರಂದು ಸಂಜಯ್ ತನ್ನ ಸ್ನೇಹಿತ ಶ್ರವಣ್ ಅವರ ತಂದೆಯ ಹೀರೋ ಹೋಂಡಾ ಫ್ಯಾಷನ್ ಪ್ರೋ ಬೈಕಲ್ಲಿ ಶ್ರವಣ್ ಗೆ ನೂತನ ಉದ್ಯೋಗಕ್ಕೆ ಸೇರಿಸಲೆಂದು ತೆರಳಿದ್ದರು. ಶರವು ದೇವಸ್ಥಾನದ ಬಳಿಯ ಎಕ್ಸೆಲ್ ಮಿಸ್ ಚೀಫ್ ಮಾಲ್ ಬಳಿಯಲ್ಲಿ ಸಂಜೆ 5 ಗಂಟೆಗೆ ಬೈಕನ್ನ ಪಾರ್ಕ್ ಮಾಡಿ ಪಕ್ಕದ ಕಂಪನಿಯೊಂದಕ್ಕೆ ಕೆಲಸ ಕೇಳಲೆಂದು ತೆರಳಿದ್ದರು. ಸಂಜಯ್ ಮತ್ತು ಶ್ರವಣ್ ಕಂಪನಿಯಿಂದ ಮರಳಿದಾಗ ಪಾರ್ಕ್ ಮಾಡಲಾಗಿದ್ದ ಬೈಕ್ ನಾಪತ್ತೆಯಾಗಿತ್ತು. ಸ್ನೇಹಿತರು, ಸಂಬಂಧಿಕರಲ್ಲಿ ವಿಚಾರ ತಿಳಿಸಿ ಹುಡುಕಾಡಿದರೂ ಬೈಕ್ ಸಿಗದೆ ಇದ್ದ ಕಾರಣ ಜುಲೈ 26 ರಂದು ಸಂಜಯ್ ನಗರದ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇಂದು ಸಂಜೆ ತೊಕ್ಕೊಟ್ಟಿನ ಒಳ ಪೇಟೆಯ ಆಮಂತ್ರಣ ಸಭಾಂಗಣದ ಎದುರು ಭಾಗದ ಮೆಡಿಕಲ್ ಸೆಂಟರ್ ಎದುರುಗಡೆ ಕಳವಾದ ಬೈಕ್ ಪತ್ತೆಯಾಗಿದೆ. ಅಲ್ಲಿನ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಮಧ್ಯಾಹ್ನದ ವೇಳೆ ಬೈಕನ್ನ ಓರ್ವನು ಅಲ್ಲಿ ತಂದು ನಿಲ್ಲಿಸಿದ್ದು ಆತನನ್ನ ಮತ್ತೋರ್ವ ಸ್ವಾಗತಿಸಿ ಮಾತನಾಡಿಸಿದ ದೃಶ್ಯ ದಾಖಲಾಗಿದೆ. ಬೈಕ್ನ ನಂಬರ್ ಪ್ಲೇಟನ್ನ ಕಳಚಲಾಗಿದೆ, ಅಷ್ಟಕ್ಕೂ 18 ಸಾವಿರ ಮಾರ್ಕೆಟ್ ಮೌಲ್ಯದ ಬೈಕ್ ಕಾಳ ಧಂದೆಯಲ್ಲಿ ಮಾರಿದರೂ 8 ಸಾವಿರಕ್ಕಿಂತ ಹೆಚ್ಚು ಮೌಲ್ಯ ಸಿಗಲು ಕಷ್ಟ. ಕದ್ದ ಬೈಕ್ ಗಳನ್ನ ಖದೀಮರು ಅಡ್ಡ ಕಸುಬಿಗೆ ಬಳಸುತ್ತಿರುವ ಶಂಕೆ ಮೂಡಿದ್ದು, ಪೊಲೀಸರು ಈ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಶ್ರವಣ್ ತಂದೆ ಸಂದೀಪ್ ಅವರು ಬೈಕ್ ಗುರುತು ಪತ್ತೆಹಚ್ಚಿದ್ದು , ಬಂದರು ಠಾಣೆ ಪೊಲೀಸರು ಬೈಕನ್ನ ವಶಕ್ಕೆ ಪಡೆದಿದ್ದಾರೆ.
Bike stolen from Mangalore found in Thokottu, video of CCTV found.
24-09-25 03:55 pm
Bangalore Correspondent
ಕರ್ನಾಟಕ ಜನಸಂದಣಿ ನಿಯಂತ್ರಣ ಕಾಯ್ದೆ ರೆಡಿ ; ಏಳು ವರ...
23-09-25 07:26 pm
Karnataka High court, Caste census: ಜಾತಿ ಗಣತಿ...
22-09-25 07:07 pm
ಚಾಮುಂಡೇಶ್ವರಿ ಹೆಣ್ಣಿನ ಶಕ್ತಿಯ ಪ್ರತೀಕ, ದಸರಾ ನ್ಯಾ...
22-09-25 03:31 pm
ಬಿಜೆಪಿ ವಿರೋಧ ನಡುವೆಯೇ ಚಾಮುಂಡಿ ತಾಯಿಗೆ ಕೈಮುಗಿದು...
22-09-25 10:54 am
24-09-25 01:07 pm
HK News Desk
ಇಸ್ರೇಲ್ - ಪ್ಯಾಲೆಸ್ತೀನ್ ಯುದ್ಧ ನಿಲ್ಲಿಸಿದರೆ ಟ್ರಂ...
24-09-25 12:20 pm
Narendra Modi, Xi Jinping: ಭಾರತದಲ್ಲಿ ಸರ್ಕಾರ ಬ...
23-09-25 08:29 pm
ಕೋಲ್ಕತ್ತಾದಲ್ಲಿ ಭಾರೀ ಮಳೆ, ಪ್ರವಾಹಕ್ಕೆ ಸಿಲುಕಿ ಐವ...
23-09-25 11:05 am
Pakistans Khyber Pakhtunkhwa: ಪಾಕಿಸ್ತಾನದ ಖೈಬರ...
22-09-25 06:58 pm
24-09-25 10:48 pm
Mangalore Correspondent
ಖಾಸಗಿ ಜಮೀನಲ್ಲಿ ಅಕ್ರಮ ಹೆದ್ದಾರಿ ನಿರ್ಮಿಸಿದ್ದ ಪಿಡ...
24-09-25 08:46 pm
Priyank Kharge, Dharmasthala SIT: ಅಕ್ರಮ ಎಷ್ಟೇ...
24-09-25 07:38 pm
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ಪೀಕರ್ ಧ್ವನಿಯಡಗಿಸಿದ್...
24-09-25 06:55 pm
ಚಿನ್ನಯ್ಯ ಮತ್ತೆ ಬೆಳ್ತಂಗಡಿ ಕೋರ್ಟಿಗೆ ಹಾಜರು, ದೂರು...
23-09-25 11:01 pm
23-09-25 11:01 am
HK News Desk
ಮುಂಬೈನಿಂದ ಡ್ರಗ್ಸ್ ತಂದು ಮಂಗಳೂರಿನಲ್ಲಿ ಮಾರಾಟ ; ಎ...
22-09-25 08:16 pm
IAS Officer Manivannan, Cyber Fraud: ಹಿರಿಯ ಐಎ...
21-09-25 02:30 pm
ತುಂಬೆ, ಉಪ್ಪಿನಂಗಡಿಯಲ್ಲಿ ಹಟ್ಟಿಯಿಂದ ದನ ಕದ್ದು ಮಾಂ...
20-09-25 05:11 pm
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am