ಕಿರುಕುಳ, ಪ್ರೇಮದ ನಾಟಕಕ್ಕೆ ಅಪ್ರಾಪ್ತೆ ಆತ್ಮಹತ್ಯೆ ಪ್ರಕರಣ ; ನಾಪತ್ತೆಯಾಗಿದ್ದ ಹಿಂದೂ ಕಾರ್ಯಕರ್ತನ ಬಂಧನ

17-01-23 08:06 pm       HK News Desk   ಕರ್ನಾಟಕ

ಜಿಲ್ಲೆಯ ಕಳಸದಲ್ಲಿ ಅಪ್ರಾಪ್ತ ವಯಸ್ಕ ಹುಡುಗಿ ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಚಿಕ್ಕಮಗಳೂರು, ಜ.17: ಜಿಲ್ಲೆಯ ಕಳಸದಲ್ಲಿ ಅಪ್ರಾಪ್ತ ವಯಸ್ಕ ಹುಡುಗಿ ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಹಿಂದೂ ಸಂಘಟನೆಯ ಕಾರ್ಯಕರ್ತ ನಿತೇಶ್ ನನ್ನು ಪೊಲೀಸರು ಮಂಗಳವಾರ ಚಿಕ್ಕಮಗಳೂರು ಬಸ್ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಆರೋಪಿ ನಿತೇಶ್ ಮತ್ತು 17 ವರ್ಷದ ಹುಡುಗಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಪ್ರೇಮಿಗಳ ನಡುವೆ ಜಗಳವಾದ ಕಾರಣ ಹುಡುಗಿ ಜನವರಿ 10ರಂದು ವಿಷ ಸೇವನೆ ಮಾಡಿದ್ದಳು. ಜನವರಿ 14ರಂದು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.

ಯುವತಿ ಸಾಯುವ ಮುನ್ನ ಆಸ್ಪತ್ರೆ ಬೆಡ್ ಮೇಲೆ ಸಾವಿಗೆ ಕಾರಣ ಬರೆದಿದ್ದಳು. ಅದರಲ್ಲಿ ತನ್ನ ಪ್ರೇಮಿ ನಿತೇಶ್ ಕುರಿತಾಗಿ ಬರೆದಿದ್ದಳು. ಈ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ನಿತೇಶ್ ನಾಪತ್ತೆಯಾಗಿದ್ದ. ಇದೀಗ ಕುದುರೆಮುಖ ಪೊಲೀಸರು ಆರೋಪಿ ಸೆರೆ ಹಿಡಿದಿದ್ದಾರೆ.

ಅಪ್ರಾಪ್ತ ಬಾಲಕಿ ವಿಷ ಸೇವಿಸಿ ಆತ್ಮಹತ್ಯೆ ; ಬಿಜೆಪಿ ಕಾರ್ಯಕರ್ತನ ಲವ್ ದೋಖಾ, ಕಿರುಕುಳ, ಕೇಸ್​ ದಾಖಲಿಸಿಕೊಳ್ಳದ ಪೊಲೀಸ್ರಿಗೆ SP ಕ್ಲಾಸ್..!

A 25-year-old BJP worker has been arrested in connection with the alleged suicide case of a minor girl in Karnataka‘s Chikkamagaluru district, police said on Monday. A student of the Pre-University College, she had consumed pesticide and died on January 14 at a hospital. In her suicide note, the 17-year-old victim had blamed the accused Nitesh for her decision to take the extreme step.