ಬಿಎಂಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಪ್ರಬಲ ಕಾಂಗ್ರೆಸ್ ಪ್ರತಿಪಾದಕ ನಿಕೇತರಾಜ್ ಮೌರ್ಯಗೆ ಮುಖಭಂಗ ; ಎರಡೇ ದಿನದಲ್ಲಿ ಅಧಿಕಾರದಿಂದ ಇಳಿಸಿದ ಸರ್ಕಾರ ! ಅಧ್ಯಕ್ಷ- ಉಪಾಧ್ಯಕ್ಷ ಅದಲು- ಬದಲು 

30-09-25 01:08 pm       Bangalore Correspondent   ಕರ್ನಾಟಕ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಅಧ್ಯಕ್ಷರಾಗಿ ನಿಕೇತರಾಜ್ ಮೌರ್ಯ ಅವರನ್ನು ಎರಡೇ ದಿನದಲ್ಲಿ ಬದಲಿಸಲಾಗಿದೆ. ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದ ವಿ.ಎಸ್. ಆರಾಧ್ಯ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಿ ರಾಜ್ಯ ಸರಕಾರ ಸೋಮವಾರ ಆದೇಶ ಹೊರಡಿಸಿದೆ.

ಬೆಂಗಳೂರು, ಸೆ.30 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಅಧ್ಯಕ್ಷರಾಗಿ ನಿಕೇತರಾಜ್ ಮೌರ್ಯ ಅವರನ್ನು ಎರಡೇ ದಿನದಲ್ಲಿ ಬದಲಿಸಲಾಗಿದೆ. ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದ ವಿ.ಎಸ್. ಆರಾಧ್ಯ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಿ ರಾಜ್ಯ ಸರಕಾರ ಸೋಮವಾರ ಆದೇಶ ಹೊರಡಿಸಿದೆ.

ಬಿಎಂಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದ ನಿಕೇತ್ ರಾಜ್ ಮೌರ್ಯ ಅವರಿಗೆ ಇದೀಗ ಬಿಎಂಟಿಸಿ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಆಮೂಲಕ ಅವರಿಗೆ ಒಮ್ಮೆ ಸ್ಥಾನ ಕೊಟ್ಟು ಮತ್ತೆ ಡಿಮೋಷನ್ ಮಾಡಿದಂತಾಗಿದೆ. 

ಸೆ.25ರಂದು ಬಿಎಂಟಿಸಿ ಅಧ್ಯಕ್ಷರನ್ನಾಗಿ ನಿಕೇತ್‌ರಾಜ್‌ ಮೌರ್ಯ ಅವರನ್ನು ನೇಮಕ ಮಾಡಲಾಗಿತ್ತು. ಬಳಿಕ ನಿಕೇತ್‌ರಾಜ್‌ ಮೌರ್ಯ ಅಧಿಕಾರವನ್ನೂ ಸ್ವೀಕಾರ ಮಾಡಿದ್ದರು. ಆದರೆ, ಸೆ.29ರಂದು ಅವರನ್ನು ಬಿಎಂಟಿಸಿ ಉಪಾಧ್ಯಕ್ಷರನ್ನಾಗಿ ಮರು ನೇಮಿಸಿ ಆದೇಶದಲ್ಲಿ ತಿಳಿಸಲಾಗಿದೆ. ಬಿಎಂಟಿಸಿ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದ ವಿ.ಎಸ್.ಆರಾಧ್ಯ ಅವರನ್ನು ಅಧ್ಯಕ್ಷರನ್ನಾಗಿ ಮರು ನೇಮಿಸಲಾಗಿದೆ. ನಿಕೇತ್ ರಾಜ್ ಮೌರ್ಯ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪರವಾಗಿ ಮಾಧ್ಯಮ ಡಿಬೇಟ್ ನಲ್ಲಿ ಪ್ರಮುಖವಾಗಿ ಗುರುತಿಸಿದ್ದರು. ಪ್ರಚಾರ ಸಂದರ್ಭದಲ್ಲಿಯೂ ಪ್ರಬಲ ಭಾಷಣಕಾರರಾಗಿ ಕೆಲಸ ನಿಭಾಯಿಸಿದ್ದರು. 

ಇದಲ್ಲದೆ, ಇತರ 5 ನಿಗಮ ಮಂಡಳಿಗಳಿಗೂ ಹೊಸತಾಗಿ ಅಧ್ಯಕ್ಷರನ್ನು ನೇಮಿಸಲಾಗಿದೆ. ತೀವ್ರ ಲಾಬಿ, ಕೆಲವರ ವಿರೋಧ ಕೇಳಿಬಂದಿದ್ದರಿಂದ ಸಿಎಂ ಸಿದ್ದರಾಮಯ್ಯ ಈ ಬದಲಾವಣೆ ಮಾಡಿದ್ದಾರೆ. ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಹಾಗೂ ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರನ್ನಾಗಿ ಸೈಯದ್ ಮೆಹಮೂದ್ ಚಿಸ್ತಿ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರನ್ನಾಗಿ ಶರಣಪ್ಪ ಸಲಾದ್ ಪುರ್, ರಾಜ್ಯ ಬೀಜ ನಿಗಮ ನಿಯಮಿತ ಅಧ್ಯಕ್ಷರನ್ನಾಗಿ ಆಂಜನಪ್ಪ, ರಾಜ್ಯ ಸಾಂಬಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷರನ್ನಾಗಿ ನೀಲಕಂಠರಾವ್ ಎಸ್. ಮೂಲಗೆ ಹಾಗೂ ಜವಾಹರ ಬಾಲಭವನ ಸೊಸೈಟಿ ಉಪಾಧ್ಯಕ್ಷರನ್ನಾಗಿ ಅನಿಲ್ ಕುಮಾರ್ ಜಮಾದಾ‌ರ್ ಅವರನ್ನು ನೇಮಿಸಿ ಹೊಸ ಆದೇಶ ಮಾಡಲಾಗಿದೆ.

Nikethraj Maurya, who had recently assumed charge as BMTC Chairman, has been replaced within two days and reassigned as Vice-Chairman. V.S. Aradhya has been appointed as the new Chairman. The government has also announced fresh appointments to five other state corporations.