ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಎರಡು ಟ್ರಕ್‌, ಬಸ್‌ ಗಳು ಢಿಕ್ಕಿ ; ಒಂದೇ ಕುಟುಂಬದ ಐವರ ದುರ್ಮರಣ 

03-01-23 12:40 pm       HK News Desk   ದೇಶ - ವಿದೇಶ

ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಎರಡು ಟ್ರಕ್‌, ಬಸ್‌ ಗಳು ಢಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತಪಟ್ಟಿರುವ ದಾರುಣ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ವೇಪ್ಪೂರ್ ಬಳಿ ಮಂಗಳವಾರ ಬೆಳಿಗ್ಗೆ  ರಂದು ನಡೆದಿದೆ.

ತಮಿಳುನಾಡು, ಜ.3 : ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಎರಡು ಟ್ರಕ್‌, ಬಸ್‌ ಗಳು ಢಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತಪಟ್ಟಿರುವ ದಾರುಣ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ವೇಪ್ಪೂರ್ ಬಳಿ ಮಂಗಳವಾರ ಬೆಳಿಗ್ಗೆ  ರಂದು ನಡೆದಿದೆ.

ಎರಡು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಘಟನೆಯಲ್ಲಿ ದುರಂತ ಅಂತ್ಯ ಕಂಡಿದ್ದಾರೆ.

ತಿರುಚ್ಚಿ-ಚೆನ್ನೈ ಹೆದ್ದಾರಿಯಲ್ಲಿ ಕುಟುಂಬವೊಂದು ಕಾರನ್ನು ಪಾರ್ಕ್‌ ಮಾಡಿ ನಿಂತಿತ್ತು. ಈ ವೇಳೆ ಎರಡು ಟ್ರಕ್‌ಗಳು ಮತ್ತು ಎರಡು ಖಾಸಗಿ ಬಸ್‌ಗಳು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದವರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.

Road mishap involving 5 vehicles kills 2 kids, 3 adults in Tamil Nadu's  Cuddalore | Video - India Today

ಮೃತರು ಒಂದೇ ಕುಟುಂಬದವರು ಎಂದು ಹೇಳಲಾಗಿದ್ದು, ಮೃತದೇಹವನ್ನು ಹೊರ ತೆಗೆದು ಆಸ್ಪತ್ರೆಗೆ ರವಾನಿಸಲಾಗಿದೆ.

ಮೃತರು ಚೆನ್ನೈನ ನಂಗನಲ್ಲೂರು ಎನ್ನಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

Five people, including two children and two men, were killed in a tragic accident near Veppur in Tamil Nadu’s Cuddalore when multiple vehicles collided with a car. A total of five vehicles were involved in the accident, including two trucks and two private buses. A family had parked their car on the Trichy-Chennai highway. Two trucks and two private buses collided with the car, killing it occupants. Fire and Rescue services retrieved the body from the cramped vehicle.