ಜೂ.ಚಿರುವನ್ನು ನೋಡಲು ಚೆನ್ನೈ ನಿಂದ ಬೆಂಗಳೂರಿಗೆ ಬಂದಿಳಿದ ಅರ್ಜುನ್ ಸರ್ಜಾ !!

24-10-20 03:16 pm       Headline Karnataka News Network   ಸಿನಿಮಾ

ಸೋದರಳಿಯನ ಮಗನನ್ನ ನೋಡಲು ಚಿರು ಸೋದರ ಮಾವ ಅರ್ಜುನ್ ಸರ್ಜಾ ಬೆಂಗಳೂರಿಗೆ ಬಂದಿಳಿದಿದ್ದು ಕುಟುಂಬ ಸಮೇತರಾಗಿ ಅಕ್ಷ ಆಸ್ಪತ್ರೆಗೆ ತೆರಳಿದ್ದಾರೆ.

ಬೆಂಗಳೂರು, ಅಕ್ಟೋಬರ್ .24 : ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮಗನನ್ನು ನೋಡಲು  ಅರ್ಜುನ್ ಸರ್ಜಾ ರವರು  ಚೆನ್ನೈನಿಂದ ಬೆಂಗಳೂರಿಗೆ ಕುಟುಂಬ ಸಮೇತರಾಗಿ ಬಂದಿಳಿದಿದ್ದಾರೆ.

ಇಂದು ಬೆಳಗ್ಗೆ ಮೊಮ್ಮಗನನ್ನು ನೋಡಲು ಅಕ್ಷ ಆಸ್ಪತ್ರೆಗೆ ತೆರಳಿದ್ದು, ಅರ್ಜುನ್ ಸರ್ಜಾ ಜೊತೆ ಪುತ್ರಿ ಐಶ್ವರ್ಯ ಸರ್ಜಾ ಮತ್ತು ಕುಟುಂಬದವರು ಕೂಡ ಆಸ್ಪತ್ರೆಗೆ ತೆರಳಿದ್ದಾರೆ. ಅರ್ಜುನ್​ ಸರ್ಜಾ ಆಸ್ಪತ್ರೆಗೆ ಬರುತ್ತಿದ್ದಂತೆ  ನಟ ಧ್ರುವ ಸರ್ಜಾ ಹಾಗೂ ಕಿಶೋರ್​ ಸರ್ಜಾ ಪುತ್ರ ಸೂರಜ್​ ಸರ್ಜಾ ಅವರು ಕೂಡ  ಆಸ್ಪತ್ರೆಗೆ ಧಾವಿಸಿದ್ದಾರೆ.

ಮೇಘನಾ ರಾಜ್​ ಸರ್ಜಾಗೆ ಹೆರಿಗೆಯಾದ ದಿನ ಅರ್ಜುನ್​ ಸರ್ಜಾ ಚೆನ್ನೈನಲ್ಲಿ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರಿಂದ ಮೊಮ್ಮಗನನ್ನ ನೋಡಲು ಅರ್ಜುನ್​ ಸರ್ಜಾರಿಗೆ ಸಾಧ್ಯವಾಗಿರಲಿಲ್ಲ. ಆದ್ರೆ, ಅದೇ ದಿನ ಮೊಮ್ಮಗನ ಜೊತೆ ವಿಡಿಯೋ ಕಾಲ್​ನಲ್ಲಿ ಒಂದಷ್ಟು ಸಂಭಾಷಣೆ ನಡೆಸಿದ್ದರು.