'ಮಹಾನಾಯಕ'ನನ್ನು ಮನಸಾರೆ ಮೆಚ್ಚಿದ ಯಶ್ !!

29-10-20 11:34 am       Headline Karnataka News Network   ಸಿನಿಮಾ

ಯಾವುದೇ ಕಾರಣಕ್ಕೂ ಮಹಾನಾಯಕ ಧಾರಾವಾಹಿ ಪ್ರಸಾರ ನಿಲ್ಲಿಸಬೇಡಿ ಎಂದು ತಮಗೆ ಧೈರ್ಯ ತುಂಬಿದ್ದು ರಾಕಿಂಗ್ ಸ್ಟಾರ್ ಯಶ್.

ಬೆಂಗಳೂರು,ಅಕ್ಟೋಬರ್ .29 : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಹಾನಾಯಕ' ಧಾರಾವಾಹಿಯನ್ನು ನಿಲ್ಲಿಸುವಂತೆ ಕೆಲ ದಿನಗಳ ಹಿಂದೆ  ಬೆದರಿಕೆ ಕರೆಗಳು ಬಂದಿದ್ದನ್ನು ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು ಹಾಗೂ ಇದಕ್ಕೆಲ್ಲ ಅಂಜದೆ ನಾವು ಧಾರಾವಾಹಿ ಪ್ರಸಾರ ಮಾಡಲಿದ್ದೇವೆ ಎಂದು ಕೂಡ  ಹೇಳಿದ್ದರು.

ಕಳೆದ ವಾರ ನಡೆದ ಜ಼ೀ ಕುಟುಂಬ ಆವಾರ್ಡ್ಸ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ರಾಘವೇಂದ್ರ ಹುಣಸೂರ್ ರವರು, ಯಾವುದೇ ಕಾರಣಕ್ಕೂ ಧಾರಾವಾಹಿ ಪ್ರಸಾರ ನಿಲ್ಲಿಸಬೇಡಿ ಎಂದು ಕರೆ ಮಾಡಿ ಧೈರ್ಯ ತುಂಬಿದ್ದು ರಾಕಿಂಗ್ ಸ್ಟಾರ್ ಯಶ್ ಎಂದು ಹೇಳಿದ್ದಾರೆ.

ನಟ ರಾಕಿಂಗ್ ಸ್ಟಾರ್ ಯಶ್ ಮಾತನಾಡಿ, ಇಡೀ ಸಮಾಜನೆ ಅಂಬೇಡ್ಕರ್ ಅವರನ್ನು ತುಳಿಯೋಕೆ ಪ್ರಯತ್ನ ಪಟ್ಟರೂ ಕೂಡ ಅದನ್ನೆಲ್ಲ ಮೀರಿ ಎದ್ದು ನಿಂತ ಮಹಾನ್ ವ್ಯಕ್ತಿ. ಮಹಾನಾಯಕನ ಬಗ್ಗೆ ಧಾರಾವಾಹಿ ಮಾಡಿ ಸಣ್ಣ ಪುಟ್ಟ ತೊಂದರೆ ಬಂದಾಗ ಹೆದರಿದರೆ ಆ ವ್ಯಕ್ತಿಯ ಬದುಕಿಗೆ ಅರ್ಥವಿರಲ್ಲಾ. ಈ ಸಮಯದಲ್ಲಿ ಯಾರು ತಮ್ಮ‌ ಮೇಲೆ ಅನುಮಾನ ಪಡುತ್ತಿರುತ್ತಾರೆ ಅವರ ಎದುರಿಗೆ ಗೆದ್ದು ಚಪ್ಪಾಳೆ ಗಿಟ್ಟಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಇದೆ ಸಮಯದಲ್ಲಿ  ಡಾ. ಬಿ ಆರ್ ಅಂಬೇಡ್ಕರ್ ಅವರ ಜೀವನಕಥೆ ಹೊಂದಿರುವ 'ಮಹಾನಾಯಕ' ಧಾರಾವಾಹಿಯ ಮತ್ತೊಂದು ಹೊಸ ಹಾಡನ್ನು ಯಶ್  ಬಿಡುಗಡೆ ಮಾಡಿದ್ದಾರೆ.