BJP ನಾಯಕಿ ಖುಷ್ಬೂ ಕಾರು ಅಪಘಾತ

18-11-20 12:09 pm       Headline Karnataka News Network   ಸಿನಿಮಾ

ನಟಿ-ರಾಜಕಾರಿಣಿ ಖುಷ್ಬೂ ಸುಂದರ್ ಪ್ರಯಾಣಿಸುತ್ತಿದ್ದ ಕಾರು ಬುಧವಾರ ಬೆಳಗ್ಗೆ ತಮಿಳುನಾಡಿನಲ್ಲಿ ಅಪಘಾತಕ್ಕೀಡಾಗಿದ್ದು, ಖುಷ್ಬೂ ಯಾವುದೇ ಗಾಯವಿಲ್ಲದೆ ಪಾರಾಗಿದ್ದಾರೆ.

ಚೆನ್ನೈ,ನವೆಂಬರ್ 18: ಕಳೆದ ತಿಂಗಳು ಬಿಜೆಪಿಗೆ ಸೇರಿದ ನಟಿ-ರಾಜಕಾರಿಣಿ ಖುಷ್ಬೂ ಸುಂದರ್ ಪ್ರಯಾಣಿಸುತ್ತಿದ್ದ ಕಾರು ಬುಧವಾರ ಬೆಳಗ್ಗೆ ತಮಿಳುನಾಡಿನಲ್ಲಿ ಅಪಘಾತಕ್ಕೀಡಾಗಿದ್ದು, ಖುಷ್ಬೂ ಯಾವುದೇ ಗಾಯವಿಲ್ಲದೆ ಪಾರಾಗಿದ್ದಾರೆ.

"ಮೆಲ್ಮಾರ್ವತೂರ್ ಬಳಿ ಅಪಘಾತ ಸಂಭವಿಸಿದೆ...ಟ್ಯಾಂಕರ್ ನಾವು ಪ್ರಯಾಣಿಸುತ್ತಿದ್ದ ಕಾರಿನತ್ತ ನುಗ್ಗಿತು. ಜನರ ಆಶೀರ್ವಾದ ಹಾಗೂ ದೇವರ ಅನುಗ್ರಹದಿಂದ ನಾನು ಸುರಕ್ಷಿತವಾಗಿದ್ದೇನೆ'' ಎಂದು ಟ್ವೀಟ್ ಮಾಡಿರುವ ಖುಷ್ಬೂ ಬಹಳಷ್ಟು ಹಾನಿಗೊಳಗಾಗಿರುವ ತನ್ನ ಕಾರಿನ ಎರಡು ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಖುಷ್ಬೂ ಅವರ ಕಾರಿಗೆ ಢಿಕ್ಕಿ ಹೊಡೆದಿರುವ ಟ್ಯಾಂಕರ್ ಚಾಲಕನನ್ನು ಬಂಧಿಸಲಾಗಿದೆ. ರಾಜ್ಯ ರಾಜಧಾನಿ ಚೆನ್ನೈನಿಂದ 97 ಕಿ.ಮೀ. ದೂರದಲ್ಲಿರುವ ಕಾಂಚೀಪುರಂನ ಮೆಲ್ಮಾರ್ವತೂರ್ ಪಟ್ಟಣದಲ್ಲಿ ಈ ಅಪಘಾತ ಸಂಭವಿಸಿದೆ. ಖುಷ್ಬೂ ಅವರು ಬಿಜೆಪಿ ಆಯೋಜಿಸಿರುವ ವೆಟ್ರಿ ವೆಲ್ ಯಾತ್ರೆಯಲ್ಲಿ ಭಾಗವಹಿಸಲು ಕಡಲೂರು ಜಿಲ್ಲೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

A container lorry hit a car in which actor-politician Kushboo Sundar was travelling, in Madurantakam on Wednesday morning. Ms. Kushboo did not sustain any injuries.