ನಿರೂಪಣೆಯಿಂದ ಮತ್ತೆ ಧಾರಾವಾಹಿ ಕಡೆ ಮುಖ ಮಾಡಿದ ಮಾಸ್ಟರ್ ಆನಂದ್

07-12-20 11:38 am       Source: FILMIBEAT   ಸಿನಿಮಾ

ನಿರ್ದೇಶಕ ಮತ್ತು ನಿರೂಪಕ ಮಾಸ್ಟರ್ ಆನಂದ್ ಈಗ ಮತ್ತೆ ಧಾರಾವಾಹಿ ನಿರ್ದೇಶನದ ಕಡೆ ಮುಖ ಮಾಡಿದ್ದಾರೆ.

ಸ್ಯಾಂಡಲ್ ವುಡ್ ನಟ, ನಿರ್ದೇಶಕ ಮತ್ತು ನಿರೂಪಕ ಮಾಸ್ಟರ್ ಆನಂದ್ ಈಗ ಮತ್ತೆ ಧಾರಾವಾಹಿ ನಿರ್ದೇಶನದ ಕಡೆ ಮುಖ ಮಾಡಿದ್ದಾರೆ.

ಬಾಲನಟನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಮಾಸ್ಟರ್ ಆನಂದ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ನಟನೆ ನಿರ್ದೇಶನದ ಜೊತೆಗೆ ರಿಯಾಲಿಟಿ ಶೋ ಹೋಸ್ಟ್ ಆಗಿ ಜನಪ್ರಿಯತೆ ಪಡೆದಿರುವ ಮಾಸ್ಟರ್ ಆನಂದ್ ಇದೀಗ ಮತ್ತೆ ಧಾರಾವಾಹಿ ನಿರ್ದೇಶನ ಮಾಡಲು ತಯಾರಿ ನಡೆಸಿದ್ದಾರೆ.

ಮೂರು ವರ್ಷಗಳ ಹಿಂದೆ ನಿಗೂಢ ರಾತ್ರಿ ಎಂಬ ಹಾರರ್ ಥ್ರಿಲ್ಲರ್ ಧಾರಾವಾಹಿ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದರು. ಇದೀಗ ಮತ್ತೆ ಹೊಸ ಧಾರಾವಾಹಿ ಪ್ರಾರಂಭ ಮಾಡುತ್ತಿದ್ದು, ತನ್ನ ಧಾರಾವಾಹಿಗೆ ಆಡಿಷನ್ ಕರೆದಿದ್ದಾರೆ. ಈ ಬಗ್ಗೆ ಮಾಸ್ಟರ್ ಆನಂದ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

ಆಡಿಷನ್ ಜೊತೆಗೆ ಎಚ್ಚರಿಕೆ ನೀಡಿದ ಆನಂದ್

ಮಾಸ್ಟರ್ ಆನಂದ್ ಆಡಿಷನ್ ಕರೆಯುವ ಜೊತೆಗೆ ಒಂದು ಎಚ್ಚರಿಕೆಯನ್ನು ನೀಡಿದ್ದಾರೆ. ಆಡಿಷನ್ ನಲ್ಲಿ ತುಂಬಾ ಮೋಸವಾಗುತ್ತೆ, ಮಾಸ್ಟರ್ ಆನಂದ್ ಧಾರಾವಾಹಿಗೆ ಕಲಾವಿದರು ಬೇಕು ಎಂದು ಹೇಳಿ ಹಣ ಕೇಳಿ ಮೋಸ ಮಾಡುತ್ತಾರೆ. ಹಾಗಾಗಿ ನೇರವಾಗಿ ನಾನೇ ವಿಡಿಯೋ ಮೂಲಕ ಹೇಳುತ್ತಿರುವೆ, ಇದನ್ನ ಮಾತ್ರ ಪರಿಗಣಿಸಿ ಎಂದು ಮಾಸ್ಟರ್ ಆನಂದ್ ಬಹಿರಂಗ ಪಡಿಸಿದ್ದಾರೆ.

ಕಲಾವಿದರು ಬೇಕಾಗಿದ್ದಾರೆ

ಯಾರೆಲ್ಲ ಕಲಾವಿದರು ಬೇಕಾಗಿದ್ದಾರೆ ಎಂದು ಆನಂದ್ ವಿವರವಾಗಿ ಹೇಳಿದ್ದಾರೆ. 24ರಿಂದ 30 ವರ್ಷ ವಯಸ್ಸಿನ ನಾಯಕ ನಟ, 18ರಿಂದ 30ವರ್ಷದ ನಟಿ, 16ರಿಂದ 60 ವರ್ಷದ ಪೋಷಕ ನಟಿ ಪಾತ್ರಕ್ಕೆ ಕಲಾವಿದರು ಬೇಕಾಗಿದ್ದಾರೆ' ಎಂದು ಹೇಳಿದ್ದಾರೆ.

This News Article is a Copy of FILMIBEAT