ಬ್ರೇಕಿಂಗ್ ನ್ಯೂಸ್
12-12-20 01:10 pm Source: FILMIBEAT Bharath Kumar K ಸಿನಿಮಾ
ಬೆಂಗಳೂರು, ಡಿ.12: ಕನ್ನಡದ ದಿಗ್ಗಜ ನಟ ವಿಷ್ಣುವರ್ಧನ್ ಅವರನ್ನು ನಿಂದಿಸಿರುವ ತೆಲುಗು ನಟನ ವಿರುದ್ಧ ವಿಷ್ಣು ಸೇನಾ ಸಮತಿ ಸಿಡಿದೆದ್ದಿದೆ. ವಿಷ್ಣುದಾದ ಗೌರವಕ್ಕೆ ಧಕ್ಕೆ ಬರುವಂತೆ ಸಂದರ್ಶನದಲ್ಲಿ ಹೇಳಿಕೆ ನೀಡಿರುವ ನಟನ ವಿರುದ್ಧ ಕನ್ನಡಿಗರು ಭಾರಿ ಆಕ್ರೋಶ ಹೊರಹಾಕಿದ್ದಾರೆ. ಕನ್ನಡದ ಹಿರಿಯ ನಟ ಜಗ್ಗೇಶ್, ಅನಿರುದ್ಧ್, ಪ್ರಥಮ್ ಸೇರಿದಂತೆ ಕನ್ನಡ ಪರ ಹೋರಾಟಗಾರರು ಸಹ ವಿಜಯ್ ರಂಗರಾಜು ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಸಂಬಂಧ ಈಗಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿರುವ ವಿಷ್ಣು ಸೇನಾ ಸಮಿತಿ ಈಗ ಕಾನೂನು ಹೋರಾಟಕ್ಕೆ ಮುಂದಾಗಿದೆ.

ವಿಷ್ಣು ಸೇನೆಯಿಂದ ಕಾನೂನು ಹೋರಾಟ
ಕನ್ನಡದ ಯಜಮಾನನ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿರುವ ನಟನ ವಿರುದ್ಧ ವಿಷ್ಣು ಸೇನೆ ಸಮತಿ ಕಾನೂನು ಹೋರಾಟಕ್ಕೆ ತೀರ್ಮಾನಿಸಿದ್ದು, ಸರಣಿ ದೂರುಗಳನ್ನು ದಾಖಲಿಸಲು ಕರೆ ನೀಡಿದೆ. ನಿಮ್ಮ ನಿಮ್ಮ ಏರಿಯಾದ ಪೊಲೀಸ್ ಠಾಣೆಯಲ್ಲಿ ತೆಲುಗು ನಟನ ವಿರುದ್ಧ ದಾಖಲಿಸಿ ಎಂದು ವಿಷ್ಣು ಸೇನೆ ಮನವಿ ಮಾಡಿದೆ. ಈ ಕುರಿತು ವಿಷ್ಣು ಸೇನೆ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಫೇಸ್ಬುಕ್ನಲ್ಲಿ ವಿವರವಾಗಿ ತಿಳಿಸಿ ಕೇಳಿಕೊಂಡಿದ್ದಾರೆ.
ಆ ವ್ಯಕ್ತಿಯ ನೆಮ್ಮದಿ ಹಾಳು ಮಾಡುವುದರಲ್ಲಿ ತಪ್ಪೇನಿಲ್ಲ
''ದೇವರಂತಹ ಯಜಮಾನ್ರ ಮೇಲೆ ಆರೋಪ ಮಾಡಿದ ವ್ಯಕ್ತಿಯ ನೆಮ್ಮದಿ ಹಾಳು ಮಾಡುವುದು ತಪ್ಪೇನಲ್ಲ. ಆದ್ದರಿಂದ ನಿಮ್ಮ ನಿಮ್ಮ ಏರಿಯಾದ ಪೊಲೀಸ್ ಸ್ಟೇಶನ್ಗಳಿಗೆ ಹೋಗಿ ಆತನ ವಿರುದ್ಧ ಒಂದು ದೂರು ಕೊಡಿ. ನಿಮ್ಮದು ಯಾವುದೇ ಸಂಘವಾಗಿದ್ದರೂ ಅಥವಾ ಸಂಘ ಇಲ್ಲದಿದ್ದರೂ ದೂರು ಕೊಡಲು ಅಡ್ಡಿಯೇನಿಲ್ಲ. ನಾನು ಮತ್ತು ವಕೀಲರು ಅದಕ್ಕೆ ಬೇಕಾದ ಡ್ರಾಫ್ಟ್ ರೆಡಿ ಮಾಡುತ್ತಿದ್ದೇವೆ. ಅದನ್ನು ನಿಮ್ಮೊಂದಿಗೆ ಮಧ್ಯಾಹ್ನದೊಳಗೆ ಹಂಚಿಕೊಳ್ಳುವೆ'' ಎಂದು ಮಾಹಿತಿ ನೀಡಿದ್ದಾರೆ.

ದೂರಿನ ಪ್ರತಿಯನ್ನು ಫಿಲಂ ಚೇಂಬರ್ಗೆ ಕಳುಹಿಸಿ
''ಆ ಡ್ರಾಫ್ಟ್ ನೋಡಿದ ಮೇಲೆ ದೂರು ಯಾವತರ ದಾಖಲಿಸಬೇಕು ಎಂಬುದೊಂದು ಐಡಿಯಾ ನಿಮಗೆ ಬರಬಹುದು. ಅಥವಾ ಡ್ರಾಫ್ಟ್ ಇಲ್ಲದೆಯೂ ದೂರು ದಾಖಲಿಸುವ ಕ್ರಮ ನಿಮಗೇ ಗೊತ್ತಿರಬಹುದು. ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ದೂರು ದಾಖಲಿಸೋಣ. ದೂರು ದಾಖಲಾದ ಮೇಲೆ ಅದರ ಒಂದೊಂದು ಪ್ರತಿಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಕಳಿಸುವುದು ಮರೆಯಬೇಡಿ. ಇಷ್ಟು ಮಾತ್ರ ಮಾಡಬಹುದಲ್ವಾ?'' ಎಂದು ವಿಶೇಷ ರೀತಿಯಲ್ಲಿ ಹೋರಾಟಕ್ಕೆ ವಿಷ್ಣು ಸೇನೆ ಹೆಜ್ಜೆ ಇಟ್ಟಿದೆ.
This News Article is a Copy of FILMIBEAT
17-12-25 12:45 pm
Bangalore Correspondent
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
ದೆಹಲಿಯಲ್ಲು ಹೈಕಮಾಂಡ್ ಡಿನ್ನರ್ ಮೀಟಿಂಗ್ ; ಡಿಸಿಎಂ...
15-12-25 02:23 pm
17-12-25 01:38 pm
HK News Desk
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ...
15-12-25 08:09 pm
16-12-25 10:25 pm
Mangalore Correspondent
Bride Missing, Mangalore: ಬೇರೆ ಲವ್ ಇದೆಯೆಂದರೂ...
16-12-25 08:53 pm
ಕೇರಳಕ್ಕೆ ನಾಲ್ಕು ಲಕ್ಷ ಮೌಲ್ಯದ ಎಂಡಿಎಂ ಡ್ರಗ್ಸ್ ಸಾ...
16-12-25 05:24 pm
ಕೊರಗ ಸಮುದಾಯದಲ್ಲಿ ಮೊಟ್ಟಮೊದಲ ವೈದ್ಯಕೀಯ ಪದವಿ ಪಡೆದ...
16-12-25 04:26 pm
ಆವರಣ ಗೋಡೆ ಕಾಮಗಾರಿ ವೇಳೆ ಗುಡ್ಡ ಕುಸಿತ ; ಮಣ್ಣಿನಡಿ...
16-12-25 01:23 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm