ಬ್ರೇಕಿಂಗ್ ನ್ಯೂಸ್
15-12-20 11:46 am Source: FILMIBEAT Manjunatha C ಸಿನಿಮಾ
ತಮಿಳುನಾಡು, ಡಿ.15: ರಾಜಕೀಯ ಪ್ರವೇಶ ಮಾಡುವುದಾಗಿ ನಟ ರಜನೀಕಾಂತ್ ಈಗಾಗಲೇ ಅಧಿಕೃತವಾಗಿ ಘೋಷಿಸಿಯಾಗಿದೆ. ತಮ್ಮ ಪಕ್ಷದ ಹೆಸರು, ಚಿಹ್ನೆಯನ್ನು ಡಿಸೆಂಬರ್ 31 ರಂದು ಘೋಷಿಸುವುದಾಗಿ ರಜನೀಕಾಂತ್ ಈಗಾಗಲೇ ಹೇಳಿದ್ದಾರೆ. ಆದರೆ ರಜನೀಕಾಂತ್ ಘೋಷಿಸುವ ಮುನ್ನವೇ ಪಕ್ಷದ ಹೆಸರು, ಚಿಹ್ನೆ ಬಗ್ಗೆ ಮಾಹಿತಿ ಬಹಿರಂಗಗೊಂಡಿದೆ. ಹಲವು ತಮಿಳು ಚಾನೆಲ್ಗಳು ಈ ಬಗ್ಗೆ ಸುದ್ದಿಯನ್ನು ಬಿತ್ತರಿಸುತ್ತಿದ್ದು, ರಜನೀಕಾಂತ್ ಪಕ್ಷದ ಹೆಸರನ್ನು 'ಮಕ್ಕಳ್ ಸೇವೈ ಕಚ್ಚಿ' ಎಂದು ಚುನಾವಣಾ ಆಯೋಗದ ಬಳಿ ನೊಂದಾವಣಿ ಮಾಡಿಸಿದ್ದು, ಪಕ್ಷದ ಚಿಹ್ನೆ ಆಟೊ ರಿಕ್ಷಾ ಆಗಿದೆಯಂತೆ.
'ಮಕ್ಕಳ್ ಸೇವೈ ಕಚ್ಚಿ' ಎಂದರೆ, 'ಜನರಿಗೆ ಸೇವೆ ಮಾಡುವ ಪಕ್ಷ' ಎಂದರ್ಥ. ಈ ಪಕ್ಷದ ಸಿಂಬಲ್ ಆಗಿ ಆಟೊ ರಿಕ್ಷಾ ನೀಡಲಾಗಿದೆ ಎನ್ನಲಾಗುತ್ತಿದೆ. ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಡಿಸೆಂಬರ್ 31 ರಂದು ಘೋಷಿಸಲಾಗುತ್ತದೆ.
ಮಕ್ಕಳ್ ಮಂದ್ರಮ್ ಸದಸ್ಯರೊಂದಿಗೆ ಚರ್ಚಿಸಿ ನಿರ್ಧಾರ
ರಜನೀಕಾಂತ್ ಅವರ ಸಂಘ 'ಮಕ್ಕಳ್ ಮಂದ್ರಮ್' ಸದಸ್ಯರ ಜೊತೆ ಚರ್ಚಿಸಿ ಪಕ್ಷದ ಹೆಸರು ನಿರ್ಧರಿಸಲಾಗಿದೆಯಂತೆ. ಈ ಮೊದಲು ಪಕ್ಷದ ಹೆಸರನ್ನು 'ಮಕ್ಕಳ್ ಶಕ್ತಿ ಕಳಗಂ' ಎಂದು ನೊಂದಾಯಿಸಿದ್ದರಂತೆ, ಜೊತೆಗೆ ಬಾಬಾ ಸಿಂಬಲ್ ಅನ್ನು ಗುರುತಾಗಿ ಕೇಳಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ ಎನ್ನಲಾಗುತ್ತಿದೆ.
ರಜನೀಕಾಂತ್ ಪ್ರವೇಶದಿಂದ ರಾಜಕೀಯ ಲೆಕ್ಕಾಚಾರ ಬದಲು?
ರಜನೀಕಾಂತ್ ರಾಜಕೀಯ ಪ್ರವೇಶದ ಸುದ್ದಿ ತಮಿಳುನಾಡು ರಾಜಕೀಯದ ಮೇಲೆ ಭಾರಿ ಪ್ರಭಾವ ಬೀರಿದೆ. ರಜನೀಕಾಂತ್ ಅವರು ಬಿಜೆಪಿಯ ಮಿತ್ರ ಪಕ್ಷ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ರಜನೀಕಾಂತ್ ರಾಜಕೀಯ ಪ್ರವೇಶದಿಂದ ಡಿಎಂಕೆಗೆ ತುಸು ಹಿನ್ನೆಡೆ ಆಗಲಿದೆ ಎನ್ನಲಾಗುತ್ತಿದೆ.
This News Article is a Copy of FILMIBEAT
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm