ಬ್ರೇಕಿಂಗ್ ನ್ಯೂಸ್
26-12-20 02:09 pm Source: FILMIBEAT Manjunatha C ಸಿನಿಮಾ
ಆಘಾತಕಾರಿ ಘಟನೆಯಲ್ಲಿ ಮಲಯಾಳಂ ನ ಜನಪ್ರಿಯ ನಟ ಅನಿಲ್ ನೆಡುಮಂಗದ್, ಚಿತ್ರೀಕರಣದ ವೇಳೆ ನೀರಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ. 'ಅಯ್ಯಪ್ಪನುಂ ಕೋಶಿಯುಂ' ಸೇರಿ ಹಲವಾರು ಜನಪ್ರಿಯ ಮಲಯಾಳಂ ಸಿನಿಮಾಗಳಲ್ಲಿ ಪೋಷಕ ನಟನಾಗಿ ನಟಿಸಿದ್ದ ಅನಿಲ್ ನೆಡುಮಂಗದ್, ಇಂದು (ಡಿಸೆಂಬರ್ 25) ಮಲನ್ಕರ ಡ್ಯಾಂನಲ್ಲಿ ನೀರಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಮಲನ್ಕರ್ ಡ್ಯಾಂ ಬಳಿ ಮಲಯಾಳಂ ಸಿನಿಮಾ 'ಪೀಸ್' ನ ಚಿತ್ರೀಕರಣ ನಡೆಯುತ್ತಿತ್ತು. ಅನಿಲ್ ನೆಡುಮಂಗದ್ ಸಿನಿಮಾದಲ್ಲಿ ಪಾತ್ರವಹಿಸಿದ್ದು, ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಚಿತ್ರೀಕರಣದ ಬಿಡುವಿನ ವೇಳೆ ಅನಿಲ್ ಹಾಗೂ ಕೆಲವರು ಸ್ನಾನ ಮಾಡಲೆಂದು ಮಲನ್ಕರ ಡ್ಯಾಂ ಗೆ ಹೋಗಿದ್ದರು, ಈ ವೇಳೆ ಅನಿಲ್ ನೀರಲ್ಲಿ ಮುಳುಗಿದ್ದಾರೆ.
ಸಂಜೆ ಆರು ಗಂಟೆಗೆ ದೊರೆತಿದೆ ಮೃತದೇಹ
'ಅನಿಲ್ ಗೆಳೆಯರು ಹೇಳಿರುವಂತೆ, ಮಧ್ಯಾಹ್ನದ ವೇಳೆಗೆ ಎಲ್ಲರೂ ಸ್ನಾನ ಮಾಡಲು ಹೋದೆವು, ಕೆಲವು ಹೊತ್ತಿನ ಬಳಿಕ ಅನಿಲ್ ಅಲ್ಲೆಲ್ಲೂ ನಮಗೆ ಕಾಣಲಿಲ್ಲ, ಅನಿಲ್ ನೀರಲ್ಲಿ ಮುಳುಗಿರಬಹುದು ಎಂದು ಕೊಂಡು ಎಲ್ಲರೂ ಸೇರಿ ಹುಡುಕಾಡಲು ಆರಂಭಿಸಿದೆವು, ಕೊನೆಗೆ ರಕ್ಷಣಾ ತಂಡದ ನೆರವು ಪಡೆದು ಹುಡುಕಿದಾಗ, ಸಂಜೆ 6 ಗಂಟೆ ವೇಳೆಗೆ ಅನಿಲ್ ಮೃತದೇಹ ಸಿಕ್ಕಿತು' ಎಂದಿದ್ದಾರೆ.
ತೀವ್ರ ಸಂತಾಪ ವ್ಯಕ್ತಪಡಿಸಿದ ಪೃಥ್ವಿರಾಜ್ ಸುಕುಮಾರ್
ಪ್ರತಿಭಾವಂತ ನಟ ಅನಿಲ್ ಸಾವಿಗೆ ಮಲಯಾಳಂ ಸಿನಿಮಾರಂಗ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಅಯ್ಯಪ್ಪನುಂ ಕೋಶಿಯುಂ ನಲ್ಲಿ ಅನಿಲ್ ಜೊತೆ ನಟಿಸಿದ್ದ ಪೃಥ್ವಿರಾಜ್ ಟ್ವೀಟ್ ಮಾಡಿದ್ದು, 'ನನ್ನ ಬಳಿ ಹೇಳಲು ಏನೂ ಮಾತುಗಳಿಲ್ಲ. ನನಗೆ ಏನೂ ಹೇಳಲು ಆಗುತ್ತಿಲ್ಲ. ನೀನು ಶಾಂತಿಯಿಂದ ಇದ್ದೀಯ ಎಂದು ಭಾವಿಸಿದ್ದೇನೆ ಅನಿಲ್ ಅಣ್ಣ' ಎಂದಿದ್ದಾರೆ.
ಕಮ್ಮಾಟಿಪದಂ' ಸಿನಿಮಾದಲ್ಲಿ ಜೊತೆಗೆ ನಟನೆ
'ಕಮ್ಮಾಟಿಪದಂ' ಸಿನಿಮಾದಲ್ಲಿ ಅನಿಲ್ ಜೊತೆ ನಟಿಸಿದ್ದ ಸ್ಟಾರ್ ನಟ ದುಲ್ಕರ್ ಸಲ್ಮಾನ್, 'ಹೃದಯ ಹಿಂಡಿದಂತಾಗಿದೆ. ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅನಿಲ್ ಆತ್ಮಕ್ಕೆ ಶಾಂತಿ ಸಿಗಲಿ. ಆತನ ಕುಟುಂಬದ ಪರವಾಗಿ ನನ್ನ ಪ್ರಾರ್ಥನೆಗಳಿವೆ' ಎಂದಿದ್ದಾರೆ.
This News Article is a Copy of FILMIBEAT
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
16-07-25 10:52 pm
Mangalore Correspondent
ಕೆಂಪು ಕಲ್ಲು, ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ...
16-07-25 01:01 pm
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
16-07-25 11:04 pm
Mangalore Correspondent
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm