ಬ್ರೇಕಿಂಗ್ ನ್ಯೂಸ್
26-12-20 02:09 pm Source: FILMIBEAT Manjunatha C ಸಿನಿಮಾ
ಆಘಾತಕಾರಿ ಘಟನೆಯಲ್ಲಿ ಮಲಯಾಳಂ ನ ಜನಪ್ರಿಯ ನಟ ಅನಿಲ್ ನೆಡುಮಂಗದ್, ಚಿತ್ರೀಕರಣದ ವೇಳೆ ನೀರಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ. 'ಅಯ್ಯಪ್ಪನುಂ ಕೋಶಿಯುಂ' ಸೇರಿ ಹಲವಾರು ಜನಪ್ರಿಯ ಮಲಯಾಳಂ ಸಿನಿಮಾಗಳಲ್ಲಿ ಪೋಷಕ ನಟನಾಗಿ ನಟಿಸಿದ್ದ ಅನಿಲ್ ನೆಡುಮಂಗದ್, ಇಂದು (ಡಿಸೆಂಬರ್ 25) ಮಲನ್ಕರ ಡ್ಯಾಂನಲ್ಲಿ ನೀರಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಮಲನ್ಕರ್ ಡ್ಯಾಂ ಬಳಿ ಮಲಯಾಳಂ ಸಿನಿಮಾ 'ಪೀಸ್' ನ ಚಿತ್ರೀಕರಣ ನಡೆಯುತ್ತಿತ್ತು. ಅನಿಲ್ ನೆಡುಮಂಗದ್ ಸಿನಿಮಾದಲ್ಲಿ ಪಾತ್ರವಹಿಸಿದ್ದು, ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಚಿತ್ರೀಕರಣದ ಬಿಡುವಿನ ವೇಳೆ ಅನಿಲ್ ಹಾಗೂ ಕೆಲವರು ಸ್ನಾನ ಮಾಡಲೆಂದು ಮಲನ್ಕರ ಡ್ಯಾಂ ಗೆ ಹೋಗಿದ್ದರು, ಈ ವೇಳೆ ಅನಿಲ್ ನೀರಲ್ಲಿ ಮುಳುಗಿದ್ದಾರೆ.

ಸಂಜೆ ಆರು ಗಂಟೆಗೆ ದೊರೆತಿದೆ ಮೃತದೇಹ
'ಅನಿಲ್ ಗೆಳೆಯರು ಹೇಳಿರುವಂತೆ, ಮಧ್ಯಾಹ್ನದ ವೇಳೆಗೆ ಎಲ್ಲರೂ ಸ್ನಾನ ಮಾಡಲು ಹೋದೆವು, ಕೆಲವು ಹೊತ್ತಿನ ಬಳಿಕ ಅನಿಲ್ ಅಲ್ಲೆಲ್ಲೂ ನಮಗೆ ಕಾಣಲಿಲ್ಲ, ಅನಿಲ್ ನೀರಲ್ಲಿ ಮುಳುಗಿರಬಹುದು ಎಂದು ಕೊಂಡು ಎಲ್ಲರೂ ಸೇರಿ ಹುಡುಕಾಡಲು ಆರಂಭಿಸಿದೆವು, ಕೊನೆಗೆ ರಕ್ಷಣಾ ತಂಡದ ನೆರವು ಪಡೆದು ಹುಡುಕಿದಾಗ, ಸಂಜೆ 6 ಗಂಟೆ ವೇಳೆಗೆ ಅನಿಲ್ ಮೃತದೇಹ ಸಿಕ್ಕಿತು' ಎಂದಿದ್ದಾರೆ.

ತೀವ್ರ ಸಂತಾಪ ವ್ಯಕ್ತಪಡಿಸಿದ ಪೃಥ್ವಿರಾಜ್ ಸುಕುಮಾರ್
ಪ್ರತಿಭಾವಂತ ನಟ ಅನಿಲ್ ಸಾವಿಗೆ ಮಲಯಾಳಂ ಸಿನಿಮಾರಂಗ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಅಯ್ಯಪ್ಪನುಂ ಕೋಶಿಯುಂ ನಲ್ಲಿ ಅನಿಲ್ ಜೊತೆ ನಟಿಸಿದ್ದ ಪೃಥ್ವಿರಾಜ್ ಟ್ವೀಟ್ ಮಾಡಿದ್ದು, 'ನನ್ನ ಬಳಿ ಹೇಳಲು ಏನೂ ಮಾತುಗಳಿಲ್ಲ. ನನಗೆ ಏನೂ ಹೇಳಲು ಆಗುತ್ತಿಲ್ಲ. ನೀನು ಶಾಂತಿಯಿಂದ ಇದ್ದೀಯ ಎಂದು ಭಾವಿಸಿದ್ದೇನೆ ಅನಿಲ್ ಅಣ್ಣ' ಎಂದಿದ್ದಾರೆ.

ಕಮ್ಮಾಟಿಪದಂ' ಸಿನಿಮಾದಲ್ಲಿ ಜೊತೆಗೆ ನಟನೆ
'ಕಮ್ಮಾಟಿಪದಂ' ಸಿನಿಮಾದಲ್ಲಿ ಅನಿಲ್ ಜೊತೆ ನಟಿಸಿದ್ದ ಸ್ಟಾರ್ ನಟ ದುಲ್ಕರ್ ಸಲ್ಮಾನ್, 'ಹೃದಯ ಹಿಂಡಿದಂತಾಗಿದೆ. ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅನಿಲ್ ಆತ್ಮಕ್ಕೆ ಶಾಂತಿ ಸಿಗಲಿ. ಆತನ ಕುಟುಂಬದ ಪರವಾಗಿ ನನ್ನ ಪ್ರಾರ್ಥನೆಗಳಿವೆ' ಎಂದಿದ್ದಾರೆ.
This News Article is a Copy of FILMIBEAT
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
24-08-26 09:06 pm
HK News Staffer
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm
ಚಿಕ್ಕಮಗಳೂರಿನಲ್ಲಿ ಈದ್ ಮೆರವಣಿಗೆ ಸಿದ್ಧತೆ ; ಬೃಹತ್...
24-08-26 02:35 pm
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm