ಬ್ರೇಕಿಂಗ್ ನ್ಯೂಸ್
11-08-20 08:56 am Headline Karnataka News Network ಸಿನಿಮಾ
ಆಗಸ್ಟ್ 11: ಸುಶಾಂತ್ ಸಿಂಗ್ ಸಾವಿನ ನಂತರ ಕಂಗನಾ ತಮ್ಮ ಹೇಳಿಕೆ ಹಾಗೂ ಟ್ವೀಟ್ಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಸ್ಟಾರ್ ಕಿಡ್ಸ್ ಹಾಗೂ ಸ್ವಜನಪಕ್ಷಪಾತದ ವಿರುದ್ಧ ದನಿ ಎತ್ತುತ್ತಿರುವ ಕಂಗನಾ ಈಗ ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಮೇಲೂ ಟ್ವೀಟ್ ವಾರ್ ನಡೆಸಿದ್ದಾರೆ.
ಸುಶಾಂತ್ ಸಿಂಗ್ ಸಾವಿನ ನಂತರ ಕಂಗನಾ ಸ್ಟಾರ್ ಕಿಡ್ಸ್ ಹಾಗೂ ಸ್ವಜನಪಕ್ಷಪಾತದ ವಿರುದ್ಧ ಹೋರಾಟಕ್ಕಿಳಿದಿದ್ದಾರೆ.
ಸುಶಾಂತ್ ಸಾವಿಗೆ ಸ್ವಜನಪಕ್ಷಪಾತದ ಜೊತೆಗೆ ಬಿ-ಟೌನ್ನ ದೊಡ್ಡ ಕುಟುಂಬಗಳು ಎನಿಸಿಕೊಂಡಿರುವ ಕೆಲವರು ಪರೋಕ್ಷವಾಗಿ ಕಾರಣ ಎಂದು ಆರೋಪಿಸುತ್ತಾ ಬಂದಿದ್ದಾರೆ.
ಸುಶಾಂತ್ ಸಿಂಗ್ ಸಾವಿನ ನಂತರ ದೀಪಿಕಾ, ತಮ್ಮ ಇನ್ಸ್ಟಾಗ್ರಾಂ ಸ್ಟೇಟಸ್ನಲ್ಲಿ ಮಾನಿಕ ಖಿನ್ನತೆ ಕುರಿತಾಗಿ ಸಾಲು ಸಾಲು ಸ್ಟೋರಿಗಳನ್ನು ಪೋಸ್ಟ್ ಮಾಡಿದ್ದರು. ಆಗಲೂ ಕಂಗನಾ ಈ ಬಗ್ಗೆ ಟೀಕಿಸಿದ್ದರು.
ಈಗಲೂ ಸಹ ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ವಿರುದ್ಧ ಟ್ವೀಟ್ ಮಾಡುತ್ತಾ ಕೊಂಚ ಖಾರವಾಗಿ ಟೀಕಿಸಿದ್ದಾರೆ.
ಟ್ವೀಟಿಗರೊಬ್ಬರು ಕಂಗನಾ ಹಾಗೂ ಸುಶಾಂತ್ ಅವರ ಹಿಟ್ ಸಿನಿಮಾ ಹಾಗೂ ಸಾಲು ಸಾಲು ಫ್ಲಾಪ್ ಕೊಟ್ಟ ರಣಬೀರ್ ಅವರ ಚಿತ್ರಗಳ ಕುರಿತಾಗಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, ರಣಬೀರ್ ಹಾಗೂ ದೀಪಿಕಾ ಬಗ್ಗೆ ಸಖತ್ ಖಾರವಾಗಿ ಟೀಕಿಸಿದ್ದಾರೆ.
ರಣಬೀರ್ ಕಪೂರ್ಗೆ ಹುಡುಗಿಯರ ಹುಚ್ಚಿದೆ. ಆದರೆ ಅವರನ್ನು ಯಾರೂ ರೇಪಿಸ್ಟ್ ಎನ್ನುವ ಧೈರ್ಯ ತೋರುವುದಿಲ್ಲ ಎಂದಿದ್ದಾರೆ ಕಂಗನಾ.


ದೀಪಿಕಾ ಪಡುಕೋಣೆ ಸ್ವಘೋಷಿತ ಮಾನಸಿಕ ರೋಗಿ. ಇಂತಹ ನಟಿಯನ್ನು ಯಾರೂ ಸೈಕೋ ಎನ್ನುವುದಿಲ್ಲ. ಕೆಲವೊಂದು ಪದಗಳು ಏನಿದ್ದರೂ ಹೊರಗಿನಿಂದ ಬಂದ ನಟ-ನಟಿಯರಿಗೆ ಮಾತ್ರ ಮೀಸಲು ಎಂದು ಟೀಕಿಸಿದ್ದಾರೆ ಕಂಗನಾ.
ಇಂಡಸ್ಟ್ರಿಯಲ್ಲಿ ಸ್ಟಾರ್ ಕಿಡ್ಸ್ ಹಾಗೂ ಹೊರಗಿನಿಂದ ಬಂದ ಕಲಾವಿದರ ನಡುವೆ ತಾರತಮ್ಯ ಇಲ್ಲದೇ ಹೋದಾಗ ಮಾತ್ರ ಎಲ್ಲ ಸರಿಯಾಗುತ್ತದೆ ಎನ್ನುವುದು ಕಂಗನಾರ ಅಭಿಪ್ರಾಯ.
ಇದೇ ಬಾಲಿವುಡ್ನಲ್ಲಿ ಹೊರಗಿನಿಂದ ಬಂಧ ಪ್ರತಿಭಾವಂತ ಕಲಾವಿದರನ್ನು ನಿರ್ಲಕ್ಷಿಸುವ ಮಾಫಿಯಾ ಇದೆ. ಇದಕ್ಕೆ ಕೆಲವು ನಟ-ನಟಿಯರು ಬೆಂಬಲವಾಗಿದ್ದಾರೆ ಎಂದು ಬಹಳ ಹಿಂದಿನಿಂದ ಕಂಗನಾ ಆರೋಪಿಸುತ್ತಲೇ ಬಂದಿದ್ದಾರೆ.
18-06-26 01:25 pm
HK News Staffer
Jayadeva Hospital, Mysuru: ಮೈಸೂರಿನ ಜಯದೇವ ಆಸ್ಪ...
18-06-26 01:17 pm
ಧರ್ಮಸ್ಥಳ ಕೇಸ್ ; ಎಡಪಂಥೀಯರ ಒತ್ತಡಕ್ಕೆ ಎಸ್ಐಟಿ, ಷಡ...
17-06-26 10:12 pm
ಆರ್ಎಸ್ಎಸ್ ಲೆಕ್ಕ ಕೇಳಲು ಇವನ್ಯಾರು? ಪ್ರಿಯಾಂಕ್ ಖ...
17-06-26 06:59 pm
ಜಿಮ್ ಮುಗಿಸಿ ಮನೆಗೆ ಬಂದ ಯುವಕನಿಗೆ ಹೃದಯಾಘಾತ ; ಹೆ...
17-06-26 06:35 pm
18-06-26 01:23 pm
HK News Staffer
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
18-06-26 12:33 pm
HK News Staffer
ಬಸ್ಸೋ, ಬಸ್ ನಿಲ್ದಾಣವೋ ? ಗುರುಪುರ ಬಂಡಸಾಲೆಯಲ್ಲಿ ವ...
16-06-26 11:35 am
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
18-06-26 01:20 pm
HK News Staffer
ಸ್ಕೂಟರಲ್ಲಿ ನಾಲ್ವರು ಹೆಣ್ಮಕ್ಕಳ ಜಾಲಿ ರೈಡ್; ನಿಯಂತ...
17-06-26 01:41 pm
ವಾಯುಪಡೆ ಅಧಿಕಾರಿ ಪತ್ನಿಗೆ ಅಮಲು ಪದಾರ್ಥ ನೀಡಿ ಅತ್ಯ...
16-06-26 08:32 pm
SIT Car Accident: ಎಸ್ಐಟಿ ಎಸ್ಪಿ ಸೈಮನ್ ಪ್ರಯಾಣಿಸ...
16-06-26 05:10 pm
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm