ಬ್ರೇಕಿಂಗ್ ನ್ಯೂಸ್
10-01-21 02:01 pm Source: FILMIBEAT Manjunatha C ಸಿನಿಮಾ
ಅಪರೂಪಕ್ಕೆ ಇಂದು ನಟ ದರ್ಶನ್ ಫೇಸ್ಬುಕ್ ನಲ್ಲಿ ಲೈವ್ ಬಂದಿದ್ದರು. ಅವರು ಸಾಮಾಜಿಕ ಜಾಲತಾಣ ಬಳಸುವುದೇ ಕಡಿಮೆ ಅಂಥಹುದರಲ್ಲಿ ದರ್ಶನ್ ಫೇಸ್ಬುಕ್ ಲೈವ್ ಬರುತ್ತಿರುವುದು ಅಭಿಮಾನಿಗಳಿಗೆ ಆಶ್ಚರ್ಯವುಂಟು ಮಾಡಿತ್ತು.
ಅಂತೆಯೇ ದರ್ಶನ್ ಅವರ ಫೇಸ್ಬುಕ್ ಲೈವ್ ಅನ್ನು ಸಾವಿರಾರು ಮಂದಿ ಫೇಸ್ಬುಕ್ನಲ್ಲಿ ನೋಡಿದರು. ಅಪರೂಪಕ್ಕೆ ಲೈವ್ ಬಂದ ದರ್ಶನ್, ಮಹತ್ವವಾದ ಸಂದೇಶವನ್ನು ತಮ್ಮ ಅಭಿಮಾನಿಗಳಿಗೆ ನೀಡಿದರು.
ಫೆಬ್ರವರಿ 16 ರಂದು ದರ್ಶನ್ ಹುಟ್ಟುಹಬ್ಬವಿದ್ದು, ಆ ದಿನ ಯಾವ ಅಭಿಮಾನಿಗಳೂ ಸಹ ಮನೆಯ ಬಳಿ ಬರಬೇಡಿರೆಂದು ನಟ ದರ್ಶನ್ ಫೇಸ್ಬುಕ್ ಲೈವ್ ನಲ್ಲಿ ಮನವಿ ಮಾಡಿದರು. ಇದೇ ವಿಷಯವನ್ನು ತಿಳಿಸಲೆಂದೇ ತಾವು ಫೇಸ್ಬುಕ್ ಲೈವ್ ಬಂದಿರುವುದಾಗಿ ಹೇಳಿದರು ನಟ ದರ್ಶನ್.
ಕೊರೊನಾ ಕಾರಣದಿಂದಾಗಿ ಯಾರ ಪರಿಸ್ಥಿತಿಯೂ ಚೆನ್ನಾಗಿಲ್ಲ. ಯಾರ ಜೇಬಿನಲ್ಲೂ ಹಣವಿಲ್ಲ. ಅಭಿಮಾನಿಗಳು ನೀವು ಕರ್ನಾಟಕದ ಮೂಲೆ-ಮೂಲೆಗಳಿಂದ ಹಣ, ಸಮಯ ಖರ್ಚು ಮಾಡಿಕೊಂಡು ಹುಟ್ಟುಹಬ್ಬಕ್ಕೆ ಬರುತ್ತೀರ. ಆದರೆ ಈ ವರ್ಷ ಅದು ಬೇಡ ಎಂದರು ದರ್ಶನ್.
ಎಲ್ಲರೂ ಸಂಕಷ್ಟದಲ್ಲಿದ್ದಾರೆ. ನಿಮ್ಮ ಕುಟುಂಬವನ್ನು ಮೊದಲು ನೋಡಿಕೊಳ್ಳಿ, ಅದರ ಮುಂದೆ ಬೇರೆ ಇನ್ನಾವ ಜವಾಬ್ದಾರಿಗಳೂ ಇಲ್ಲ. ನೀವು ಸೆಟ್ಲ್ ಆಗಿ. ಈ ಬಾರಿ ನನ್ನ ಹುಟ್ಟುಹಬ್ಬಕ್ಕೆ ಯಾರೂ ಏನೂ ಆಚರಣೆ ಮಾಡುವುದು ಬೇಡ ಎಲ್ಲಿದ್ದೀರೊ ಅಲ್ಲಿಂದಲೇ ಹಾರೈಸಿ ಸಾಕು ಎಂದು ಮನವಿ ಮಾಡಿದರು ನಟ ದರ್ಶನ್.
ನಾನು ಸಹ ಫೆಬ್ರವರಿ 15 ರಿಂದ 18 ರ ವರೆಗೆ ಊರಿನಲ್ಲಿ ಇರುವುದಿಲ್ಲ. ಅಷ್ಟೇ ಅಲ್ಲದೆ ಮನೆಯ ಬಳಿ ಹುಟ್ಟುಹಬ್ಬ ಆಚರಿಸಲು ಪೊಲೀಸರು ಅನುಮತಿ ಕೊಡುವುದಿಲ್ಲ. ಸಿಸಿಟಿವಿ ಗಳನ್ನು ಹಾಕಿಸಬೇಕಾಗುತ್ತದೆ, ಬ್ಯಾರಿಕೇಡ್ಗಳನ್ನು ಹಾಕಿಸಬೇಕಾಗುತ್ತದೆ. ಈ ಬಾರಿ ಅದೆಲ್ಲ ಯಾವುದು ಬೇಡ, ಮುಂದಿನ ವರ್ಷ ಅದ್ಧೂರಿಯಾಗಿ ಆಚರಿಸೋಣ ಎಂದರು ದರ್ಶನ್
ಪ್ರತಿ ಊರಿಗೆ ನಾನೇ ಹೋಗಿ ಅಭಿಮಾನಿ ಸಂಘಗಳನ್ನು ಭೇಟಿ ಮಾಡುವ ಯೋಚನೆ ಇದೆ. ಆದರೆ ಅದೆಲ್ಲವೂ ಮಾರ್ಚ್ ನಂತರವೇ. ಈ ನಡುವೆ ಭಾನುವಾರಗಳಂದು ನಾನೇ ಕೆಲವು ಸಂಘಗಳಿಗೆ ತಿಳಿಸುತ್ತೇನೆ ಅವರು ಬಂದು ಭೇಟಿ ಮಾಡಬಹುದು ಎಂದು ಮಾಹಿತಿ ನೀಡಿದರು ದರ್ಶನ್.
This News Article is a Copy of FILMIBEAT
05-09-25 11:15 pm
Bangalore Correspondent
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
ಕಾಂಗ್ರೆಸಿನ ಯಾರ ಮನೆಯ ನಾಯಿ ಸ್ವಾತಂತ್ರ್ಯಕ್ಕಾಗಿ ಹೋ...
03-09-25 09:00 pm
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
04-09-25 08:47 pm
HK News Desk
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
05-09-25 08:12 pm
Mangalore Correspondent
ತಡರಾತ್ರಿ ಫಾಸ್ಟ್ ಫುಡ್ ಗೌಜಿ ಪ್ರಶ್ನಿಸಿದ್ದಕ್ಕೆ ಸಿ...
05-09-25 05:09 pm
ಸೌಜನ್ಯಾ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಿದ್ದೇ ಆರ್....
04-09-25 11:07 pm
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
05-09-25 10:53 pm
Mangalore Correspondent
Mukka Murder, Mangalore, Crime: ಪತ್ನಿಯ ಅಶ್ಲೀಲ...
05-09-25 10:26 pm
Atm robbery, Ullal, Kotekar, Mangalore: ಕೋಟೆಕ...
05-09-25 08:36 pm
16 ವರ್ಷಗಳ ಹಳೆ ಪ್ರಕರಣದಲ್ಲಿ ಶಿಕ್ಷೆ ; ಬ್ರಹ್ಮಾವರದ...
05-09-25 12:34 pm
ಹಟ್ಟಿಯಲ್ಲಿದ್ದ ಹಸುವನ್ನು ನಡುರಾತ್ರಿ ಎಳೆದೊಯ್ದು ರೈ...
05-09-25 11:43 am