ಬ್ರೇಕಿಂಗ್ ನ್ಯೂಸ್
10-01-21 02:01 pm Source: FILMIBEAT Manjunatha C ಸಿನಿಮಾ
ಅಪರೂಪಕ್ಕೆ ಇಂದು ನಟ ದರ್ಶನ್ ಫೇಸ್ಬುಕ್ ನಲ್ಲಿ ಲೈವ್ ಬಂದಿದ್ದರು. ಅವರು ಸಾಮಾಜಿಕ ಜಾಲತಾಣ ಬಳಸುವುದೇ ಕಡಿಮೆ ಅಂಥಹುದರಲ್ಲಿ ದರ್ಶನ್ ಫೇಸ್ಬುಕ್ ಲೈವ್ ಬರುತ್ತಿರುವುದು ಅಭಿಮಾನಿಗಳಿಗೆ ಆಶ್ಚರ್ಯವುಂಟು ಮಾಡಿತ್ತು.
ಅಂತೆಯೇ ದರ್ಶನ್ ಅವರ ಫೇಸ್ಬುಕ್ ಲೈವ್ ಅನ್ನು ಸಾವಿರಾರು ಮಂದಿ ಫೇಸ್ಬುಕ್ನಲ್ಲಿ ನೋಡಿದರು. ಅಪರೂಪಕ್ಕೆ ಲೈವ್ ಬಂದ ದರ್ಶನ್, ಮಹತ್ವವಾದ ಸಂದೇಶವನ್ನು ತಮ್ಮ ಅಭಿಮಾನಿಗಳಿಗೆ ನೀಡಿದರು.
ಫೆಬ್ರವರಿ 16 ರಂದು ದರ್ಶನ್ ಹುಟ್ಟುಹಬ್ಬವಿದ್ದು, ಆ ದಿನ ಯಾವ ಅಭಿಮಾನಿಗಳೂ ಸಹ ಮನೆಯ ಬಳಿ ಬರಬೇಡಿರೆಂದು ನಟ ದರ್ಶನ್ ಫೇಸ್ಬುಕ್ ಲೈವ್ ನಲ್ಲಿ ಮನವಿ ಮಾಡಿದರು. ಇದೇ ವಿಷಯವನ್ನು ತಿಳಿಸಲೆಂದೇ ತಾವು ಫೇಸ್ಬುಕ್ ಲೈವ್ ಬಂದಿರುವುದಾಗಿ ಹೇಳಿದರು ನಟ ದರ್ಶನ್.
ಕೊರೊನಾ ಕಾರಣದಿಂದಾಗಿ ಯಾರ ಪರಿಸ್ಥಿತಿಯೂ ಚೆನ್ನಾಗಿಲ್ಲ. ಯಾರ ಜೇಬಿನಲ್ಲೂ ಹಣವಿಲ್ಲ. ಅಭಿಮಾನಿಗಳು ನೀವು ಕರ್ನಾಟಕದ ಮೂಲೆ-ಮೂಲೆಗಳಿಂದ ಹಣ, ಸಮಯ ಖರ್ಚು ಮಾಡಿಕೊಂಡು ಹುಟ್ಟುಹಬ್ಬಕ್ಕೆ ಬರುತ್ತೀರ. ಆದರೆ ಈ ವರ್ಷ ಅದು ಬೇಡ ಎಂದರು ದರ್ಶನ್.
ಎಲ್ಲರೂ ಸಂಕಷ್ಟದಲ್ಲಿದ್ದಾರೆ. ನಿಮ್ಮ ಕುಟುಂಬವನ್ನು ಮೊದಲು ನೋಡಿಕೊಳ್ಳಿ, ಅದರ ಮುಂದೆ ಬೇರೆ ಇನ್ನಾವ ಜವಾಬ್ದಾರಿಗಳೂ ಇಲ್ಲ. ನೀವು ಸೆಟ್ಲ್ ಆಗಿ. ಈ ಬಾರಿ ನನ್ನ ಹುಟ್ಟುಹಬ್ಬಕ್ಕೆ ಯಾರೂ ಏನೂ ಆಚರಣೆ ಮಾಡುವುದು ಬೇಡ ಎಲ್ಲಿದ್ದೀರೊ ಅಲ್ಲಿಂದಲೇ ಹಾರೈಸಿ ಸಾಕು ಎಂದು ಮನವಿ ಮಾಡಿದರು ನಟ ದರ್ಶನ್.
ನಾನು ಸಹ ಫೆಬ್ರವರಿ 15 ರಿಂದ 18 ರ ವರೆಗೆ ಊರಿನಲ್ಲಿ ಇರುವುದಿಲ್ಲ. ಅಷ್ಟೇ ಅಲ್ಲದೆ ಮನೆಯ ಬಳಿ ಹುಟ್ಟುಹಬ್ಬ ಆಚರಿಸಲು ಪೊಲೀಸರು ಅನುಮತಿ ಕೊಡುವುದಿಲ್ಲ. ಸಿಸಿಟಿವಿ ಗಳನ್ನು ಹಾಕಿಸಬೇಕಾಗುತ್ತದೆ, ಬ್ಯಾರಿಕೇಡ್ಗಳನ್ನು ಹಾಕಿಸಬೇಕಾಗುತ್ತದೆ. ಈ ಬಾರಿ ಅದೆಲ್ಲ ಯಾವುದು ಬೇಡ, ಮುಂದಿನ ವರ್ಷ ಅದ್ಧೂರಿಯಾಗಿ ಆಚರಿಸೋಣ ಎಂದರು ದರ್ಶನ್
ಪ್ರತಿ ಊರಿಗೆ ನಾನೇ ಹೋಗಿ ಅಭಿಮಾನಿ ಸಂಘಗಳನ್ನು ಭೇಟಿ ಮಾಡುವ ಯೋಚನೆ ಇದೆ. ಆದರೆ ಅದೆಲ್ಲವೂ ಮಾರ್ಚ್ ನಂತರವೇ. ಈ ನಡುವೆ ಭಾನುವಾರಗಳಂದು ನಾನೇ ಕೆಲವು ಸಂಘಗಳಿಗೆ ತಿಳಿಸುತ್ತೇನೆ ಅವರು ಬಂದು ಭೇಟಿ ಮಾಡಬಹುದು ಎಂದು ಮಾಹಿತಿ ನೀಡಿದರು ದರ್ಶನ್.
This News Article is a Copy of FILMIBEAT
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm